ಕಾಯ್ದೆಗಳನ್ನು ರದ್ದು ಮಾಡುವ ಪ್ರಶ್ನೆಯೇ ಇಲ್ಲ, ಮಾತುಕತೆಯನ್ನು ವಿವಾದಾತ್ಮಕ ವಿಚಾರಗಳಿಗೆ ಸೀಮಿತಗೊಳಿಸೋಣ ಎಂಬುದು ಸರ್ಕಾರದ ನಿಲುವು. ವಿವಿಧ ರಾಜ್ಯಗಳ ದೊಡ್ಡ ಸಂಖ್ಯೆಯ ರೈತರು ‘ಕೃಷಿ ಸುಧಾರಣೆ’ ಕಾಯ್ದೆಗಳನ್ನು ಸ್ವಾಗತಿಸಿದ್ದಾರೆ. ಹಾಗಾಗಿ, ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳುಇಡೀ ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಸರ್ಕಾರ ಹೇಳಿದೆ.