<p>ನವದೆಹಲಿ: ‘ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ದೇಶದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) 90 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಕೋವಿಡ್–19 ಕಾರಣದಿಂದ ಈ ತಂಡಗಳು ಎಲ್ಲ ಅಗತ್ಯ ಮುನ್ನೆಚ್ಚರಿಕೆ ವಹಿಸಲಿವೆ’ ಎಂದು ಎನ್ಡಿಆರ್ಎಫ್ನ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.</p>.<p>ಗೃಹಸಚಿವ ಅಮಿತ್ ಶಾ ಶುಕ್ರವಾರ ತಮ್ಮ ಕಚೇರಿಯಲ್ಲಿ ಮಳೆ ಮತ್ತು ಪ್ರವಾಹ ನಿರ್ವಹಣೆಗೆ ಸಿದ್ಧತೆಗಳ ಕುರಿತು ಪರಿಶೀಲಿಸಿದರು. ಸಂಭವನೀಯ ಹಾನಿ ತಡೆಗೆ ವಿಸ್ತೃತ ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.</p>.<p>‘ಪ್ರವಾಹಪೀಡಿತರ ರಕ್ಷಣೆಗೆ ಸಂಬಂಧಿಸಿದೇಶದಾದ್ಯಂತ 90 ತಂಡಗಳನ್ನು ಸಿದ್ಧವಾಗಿಟ್ಟಿದ್ದೇವೆ. ಪ್ರತಿ ತಂಡದಲ್ಲಿ 45 ಮಂದಿ ಸಿಬ್ಬಂದಿ ಇರುತ್ತಾರೆ. ಗಾಳಿ ತುಂಬಿಸುವ ದೋಣಿಗಳೂ ಸೇರಿದಂತೆ ಅಗತ್ಯ ಎಲ್ಲಾ ಉಪಕರಣಗಳು ಈ ತಂಡದಲ್ಲಿ ಇರುತ್ತವೆ’ ಎಂದು ಎನ್ಡಿಆರ್ಎಫ್ನ ಮಹಾನಿರ್ದೇಶಕ ಎನ್.ಎಸ್. ಪ್ರಧಾನ್ ತಿಳಿಸಿದ್ದಾರೆ.</p>.<p>‘ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಗಮನದಲ್ಲಿಟ್ಟುಕೊಂಡು, ರಕ್ಷಣಾ ಸಿಬ್ಬಂದಿಗೆ ತಂಗಲು ಅಗತ್ಯವಾದ ಸುರಕ್ಷಿತ ಜಾಗವನ್ನು ಒದಗಿಸಲುರಾಜ್ಯಗಳಿಗೆ ಪತ್ರ ಬರೆಯಲಾಗಿದೆ. ಈ ತಂಡಗಳು ತಮ್ಮ ಜತೆಗೆ ಉಷ್ಣಾಂಶ ಪರೀಕ್ಷಾ ಉಪಕರಣ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಅಗತ್ಯ ಆರೋಗ್ಯ ಕಿಟ್ಗಳನ್ನು ಒಯ್ಯಲಿದ್ದಾರೆ’ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.</p>.<p>ಈಚೆಗೆಪಶ್ಚಿಮ ಬಂಗಾಳದಲ್ಲಿಅಂಪನ್ ಚಂಡಮಾರುತ ಸಮಯದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಎನ್ಡಿಆರ್ಎಫ್ನ 60 ಸಿಬ್ಬಂದಿಗೆಸೋಂಕು ತಗುಲಿತ್ತು. ಅವರಲ್ಲಿ ಹೆಚ್ಚಿನವರುಗುಣಮುಖರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ‘ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ದೇಶದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) 90 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಕೋವಿಡ್–19 ಕಾರಣದಿಂದ ಈ ತಂಡಗಳು ಎಲ್ಲ ಅಗತ್ಯ ಮುನ್ನೆಚ್ಚರಿಕೆ ವಹಿಸಲಿವೆ’ ಎಂದು ಎನ್ಡಿಆರ್ಎಫ್ನ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.</p>.<p>ಗೃಹಸಚಿವ ಅಮಿತ್ ಶಾ ಶುಕ್ರವಾರ ತಮ್ಮ ಕಚೇರಿಯಲ್ಲಿ ಮಳೆ ಮತ್ತು ಪ್ರವಾಹ ನಿರ್ವಹಣೆಗೆ ಸಿದ್ಧತೆಗಳ ಕುರಿತು ಪರಿಶೀಲಿಸಿದರು. ಸಂಭವನೀಯ ಹಾನಿ ತಡೆಗೆ ವಿಸ್ತೃತ ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.</p>.<p>‘ಪ್ರವಾಹಪೀಡಿತರ ರಕ್ಷಣೆಗೆ ಸಂಬಂಧಿಸಿದೇಶದಾದ್ಯಂತ 90 ತಂಡಗಳನ್ನು ಸಿದ್ಧವಾಗಿಟ್ಟಿದ್ದೇವೆ. ಪ್ರತಿ ತಂಡದಲ್ಲಿ 45 ಮಂದಿ ಸಿಬ್ಬಂದಿ ಇರುತ್ತಾರೆ. ಗಾಳಿ ತುಂಬಿಸುವ ದೋಣಿಗಳೂ ಸೇರಿದಂತೆ ಅಗತ್ಯ ಎಲ್ಲಾ ಉಪಕರಣಗಳು ಈ ತಂಡದಲ್ಲಿ ಇರುತ್ತವೆ’ ಎಂದು ಎನ್ಡಿಆರ್ಎಫ್ನ ಮಹಾನಿರ್ದೇಶಕ ಎನ್.ಎಸ್. ಪ್ರಧಾನ್ ತಿಳಿಸಿದ್ದಾರೆ.</p>.<p>‘ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಗಮನದಲ್ಲಿಟ್ಟುಕೊಂಡು, ರಕ್ಷಣಾ ಸಿಬ್ಬಂದಿಗೆ ತಂಗಲು ಅಗತ್ಯವಾದ ಸುರಕ್ಷಿತ ಜಾಗವನ್ನು ಒದಗಿಸಲುರಾಜ್ಯಗಳಿಗೆ ಪತ್ರ ಬರೆಯಲಾಗಿದೆ. ಈ ತಂಡಗಳು ತಮ್ಮ ಜತೆಗೆ ಉಷ್ಣಾಂಶ ಪರೀಕ್ಷಾ ಉಪಕರಣ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಅಗತ್ಯ ಆರೋಗ್ಯ ಕಿಟ್ಗಳನ್ನು ಒಯ್ಯಲಿದ್ದಾರೆ’ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.</p>.<p>ಈಚೆಗೆಪಶ್ಚಿಮ ಬಂಗಾಳದಲ್ಲಿಅಂಪನ್ ಚಂಡಮಾರುತ ಸಮಯದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಎನ್ಡಿಆರ್ಎಫ್ನ 60 ಸಿಬ್ಬಂದಿಗೆಸೋಂಕು ತಗುಲಿತ್ತು. ಅವರಲ್ಲಿ ಹೆಚ್ಚಿನವರುಗುಣಮುಖರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>