<p><strong>ಭುವನೇಶ್ವರ:</strong> ಶ್ರೀ ಜಗನ್ನಾಥ ದೇವಾಲಯದ ಸೌಂದರ್ಯೀಕರಣ ಯೋಜನೆಯ ಭಾಗವಾಗಿ<br>ಅಳವಡಿಸಲಾಗಿದ್ದ, ಫೋಕಸ್ ಲೈಟ್ಗಳನ್ನು ಚುನಾವಣಾ ಫಲಿತಾಂಶದ ಎಣಿಕೆಯ ಸಂಜೆ ಮತ್ತು ಚುನಾವಣೆಯಲ್ಲಿ ಬಿಜೆಡಿ ಸೋಲಿನ ನಂತರ ತೆಗೆದುಹಾಕಲಾಯಿತು.</p><p>ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒಡಿಶಾದ ಮುಖ್ಯ ಕಾರ್ಯದರ್ಶಿ ಪಿ.ಕೆ. ಜೆನಾ ಅವರು ಪುರಿ ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.</p><p>‘ದೇವಾಲಯದ ಮೇಲಿನ ಫೋಕಸ್ ಲೈಟ್ಗಳನ್ನು ತೆಗೆದುಹಾಕಿರುವ ಕುರಿತು ಮುಖ್ಯ ಕಾರ್ಯದರ್ಶಿಯಿಂದ ಸೂಚನೆಯನ್ನು ಸ್ವೀಕರಿಸಲಾಗಿದೆ. ಘಟನೆಯ ಬಗೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ, ಜಿಲ್ಲಾಡಳಿತಕ್ಕೆ<br>ಮಾಹಿತಿ ನೀಡದೆ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಲೈಟ್ಗಳನ್ನು ತೆಗೆದಿದೆ’ ಎಂದು ಪುರಿ<br>ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಹೇಳಿದ್ದಾರೆ.</p><p>ಕಳೆದ 2-3 ದಿನಗಳಿಂದ ಜಗನ್ನಾಥ ದೇವಾಲಯದ ಮೇಲೆ ಕೇಂದ್ರೀಕರಿಸಲು ಅಳವಡಿಸಲಾದ ಫೋಕಸ್<br>ಲೈಟ್ಗಳನ್ನು ತೆಗೆದಿರುವುದರಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ:</strong> ಶ್ರೀ ಜಗನ್ನಾಥ ದೇವಾಲಯದ ಸೌಂದರ್ಯೀಕರಣ ಯೋಜನೆಯ ಭಾಗವಾಗಿ<br>ಅಳವಡಿಸಲಾಗಿದ್ದ, ಫೋಕಸ್ ಲೈಟ್ಗಳನ್ನು ಚುನಾವಣಾ ಫಲಿತಾಂಶದ ಎಣಿಕೆಯ ಸಂಜೆ ಮತ್ತು ಚುನಾವಣೆಯಲ್ಲಿ ಬಿಜೆಡಿ ಸೋಲಿನ ನಂತರ ತೆಗೆದುಹಾಕಲಾಯಿತು.</p><p>ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒಡಿಶಾದ ಮುಖ್ಯ ಕಾರ್ಯದರ್ಶಿ ಪಿ.ಕೆ. ಜೆನಾ ಅವರು ಪುರಿ ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.</p><p>‘ದೇವಾಲಯದ ಮೇಲಿನ ಫೋಕಸ್ ಲೈಟ್ಗಳನ್ನು ತೆಗೆದುಹಾಕಿರುವ ಕುರಿತು ಮುಖ್ಯ ಕಾರ್ಯದರ್ಶಿಯಿಂದ ಸೂಚನೆಯನ್ನು ಸ್ವೀಕರಿಸಲಾಗಿದೆ. ಘಟನೆಯ ಬಗೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ, ಜಿಲ್ಲಾಡಳಿತಕ್ಕೆ<br>ಮಾಹಿತಿ ನೀಡದೆ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಲೈಟ್ಗಳನ್ನು ತೆಗೆದಿದೆ’ ಎಂದು ಪುರಿ<br>ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಹೇಳಿದ್ದಾರೆ.</p><p>ಕಳೆದ 2-3 ದಿನಗಳಿಂದ ಜಗನ್ನಾಥ ದೇವಾಲಯದ ಮೇಲೆ ಕೇಂದ್ರೀಕರಿಸಲು ಅಳವಡಿಸಲಾದ ಫೋಕಸ್<br>ಲೈಟ್ಗಳನ್ನು ತೆಗೆದಿರುವುದರಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>