ಶೃಂಗಸಭೆಯ ಮೊದಲ ದಿನದ ಕೊನೆಯಲ್ಲಿ ಭಾರತ ಮಂಟಪದಲ್ಲಿ ರಾಷ್ಟ್ರಪತಿ ಮುರ್ಮು ಅವರು ಗಣ್ಯರಿಗೆ ನೀಡಲಿರುವ ಭೂರಿಭೋಜನದ ಔತಣಕೂಟದಲ್ಲೂ ಬಾಯಿ ಚಪ್ಪರಿಸುವಂತೆ, ಎಂದೂ ಮರೆಯದಂತಹ ರುಚಿಕರ ಮತ್ತು ಆಹ್ಲಾದಕರವಾದ ಬಗೆಬಗೆಯ ಭಾರತೀಯ ಆಹಾರಗಳು ಇರಲಿವೆ. ಗುಲಾಬ್ ಜಾಮೂನ್, ರಸಮಲೈ, ಜಿಲೇಬಿಯಂತಹ ತರಹೇವಾರಿ ಸಿಹಿ ತಿನಿಸುಗಳನ್ನು ಬಡಿಸಲು ಯೋಜಿಸಲಾಗಿದೆ ಎಂದು ಅತಿಥಿ ಸತ್ಕಾರಕ್ಕೆ ನಿಯೋಜಿತವಾಗಿರುವ ಸಿಬ್ಬಂದಿ ತಿಳಿಸಿದರು.