<p><strong>ಗೋವಾ</strong>: ಮಾನ್ಸೂನ್ ಸಂದರ್ಭದಲ್ಲಿ ಗೋವಾ ರಾಜ್ಯದ ವ್ಯಾಪ್ತಿಯ ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸುವ ಅಲ್ಲಿನ ಅರಣ್ಯ ಇಲಾಖೆಯ ನಿರ್ಧಾರಕ್ಕೆ ಪ್ರವಾಸೋದ್ಯಮ ಸಚಿವ ರೋಹನ್ ಕೌಂತೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.</p><p>ದೆಹಲಿಯಿಂದ ಬಂದಿರುವ ಕೆಲ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಇಂತಹ ಮೂರ್ಖತನದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಜಲಪಾತಗಳು ಗೋವಾ ಒಳನಾಡು ಪ್ರವಾಸೋದ್ಯಮದ ಜೀವನಾಡಿ ಎಂದು ತಿಳಿಸಿದ್ದಾರೆ.</p><p>ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುವುದಲ್ಲದೇ ಗೋವಾ ರಾಜ್ಯದ ಪ್ರಾಕೃತಿಕ ಸೊಬಗನ್ನು ನಮ್ಮ ಜನಪಾತಗಳು ತೆರೆದಿಡುತ್ತವೆ. ನಿಷೇಧ ಕುರಿತು ಅರಣ್ಯ ಸಚಿವ ಹಾಗೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ.</p><p>ಸುರಕ್ಷತೆ ಬೇಕು ನಿಜ. ಹಾಗಂತ, ಜಲಪಾತಗಳನ್ನು ನೋಡಲು ತಡೆಯುವುದಕ್ಕೆ ಅದೊಂದೆ ಕಾರಣವಾಗಬಾರದು. ಅದಕ್ಕೆ ನಾವು ಪರಿಹಾರ ಹುಡುಕುತ್ತೇವೆ ಎಂದು ತಿಳಿಸಿದ್ದಾರೆ.</p><p>ಮುಂಗಾರು ಮಳೆ ಸಮಯದಲ್ಲಿ ವಿಶ್ವವಿಖ್ಯಾತ ದೂದ್ಸಾಗರ ಸೇರಿದಂತೆ ಎಲ್ಲ ಜಲಪಾತಗಳಿಗೆ ಪ್ರವೇಶವನ್ನು ನಿರ್ಭಂದಿಸುವ ಆದೇಶವನ್ನು ಗೋವಾ ಅರಣ್ಯ ಇಲಾಖೆ ಇತ್ತೀಚೆಗೆ ಹೊರಡಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋವಾ</strong>: ಮಾನ್ಸೂನ್ ಸಂದರ್ಭದಲ್ಲಿ ಗೋವಾ ರಾಜ್ಯದ ವ್ಯಾಪ್ತಿಯ ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸುವ ಅಲ್ಲಿನ ಅರಣ್ಯ ಇಲಾಖೆಯ ನಿರ್ಧಾರಕ್ಕೆ ಪ್ರವಾಸೋದ್ಯಮ ಸಚಿವ ರೋಹನ್ ಕೌಂತೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.</p><p>ದೆಹಲಿಯಿಂದ ಬಂದಿರುವ ಕೆಲ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಇಂತಹ ಮೂರ್ಖತನದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಜಲಪಾತಗಳು ಗೋವಾ ಒಳನಾಡು ಪ್ರವಾಸೋದ್ಯಮದ ಜೀವನಾಡಿ ಎಂದು ತಿಳಿಸಿದ್ದಾರೆ.</p><p>ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುವುದಲ್ಲದೇ ಗೋವಾ ರಾಜ್ಯದ ಪ್ರಾಕೃತಿಕ ಸೊಬಗನ್ನು ನಮ್ಮ ಜನಪಾತಗಳು ತೆರೆದಿಡುತ್ತವೆ. ನಿಷೇಧ ಕುರಿತು ಅರಣ್ಯ ಸಚಿವ ಹಾಗೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ.</p><p>ಸುರಕ್ಷತೆ ಬೇಕು ನಿಜ. ಹಾಗಂತ, ಜಲಪಾತಗಳನ್ನು ನೋಡಲು ತಡೆಯುವುದಕ್ಕೆ ಅದೊಂದೆ ಕಾರಣವಾಗಬಾರದು. ಅದಕ್ಕೆ ನಾವು ಪರಿಹಾರ ಹುಡುಕುತ್ತೇವೆ ಎಂದು ತಿಳಿಸಿದ್ದಾರೆ.</p><p>ಮುಂಗಾರು ಮಳೆ ಸಮಯದಲ್ಲಿ ವಿಶ್ವವಿಖ್ಯಾತ ದೂದ್ಸಾಗರ ಸೇರಿದಂತೆ ಎಲ್ಲ ಜಲಪಾತಗಳಿಗೆ ಪ್ರವೇಶವನ್ನು ನಿರ್ಭಂದಿಸುವ ಆದೇಶವನ್ನು ಗೋವಾ ಅರಣ್ಯ ಇಲಾಖೆ ಇತ್ತೀಚೆಗೆ ಹೊರಡಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>