‘ಪ್ರವಾಹಕ್ಕೆ ಒಳಗಾಗಿ ಸಂಕಷ್ಟ ಎದುರಿಸುತ್ತಿರುವ ನೂರಾರು ಜನರನ್ನು ಬಿಟ್ಟು, ಸರ್ಕಾರವು ನಾಯ್ಡು ಅವರ ಮನೆಯ ಮೇಲೆ ಕಣ್ಣಿಟ್ಟಿದೆ. ಮುಖ್ಯಮಂತ್ರಿ ಜಗನ್ ಮೋಹನ್ ಅವರು ವೈಯಕ್ತಿಕ ದ್ವೇಷ ಸಾಧನೆಗೆ ಒತ್ತು ನೀಡುತ್ತಿದ್ದಾರೆ. ಪ್ರವಾಹ ಸ್ಥಿತಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಟಿಡಿಪಿ ವಕ್ತಾರ ಬೊಂಡ ಉಮಾಮಹೇಶ್ವರ್ ಆರೋಪಿಸಿದ್ದಾರೆ.