ನವದೆಹಲಿ: ಭಾರತದ ಅಭಿವೃದ್ಧಿಯಲ್ಲಿ ‘ಟಾಟಾ ಗ್ರೂಪ್’ ಮಹತ್ವದ ಪಾತ್ರ ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಅಸೋಚಾಮ್ ಸ್ಥಾಪನಾ ವಾರ 2020’ ಉದ್ದೇಶಿಸಿ ಮಾತನಾಡಿದ ಅವರು, ಆತ್ಮ ನಿರ್ಭರ ಭಾರತ ಗುರಿ ಸಾಧಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಕೈಗೊಳ್ಳುವಂತೆ ಉದ್ಯಮಗಳಿಗೆ ಕರೆ ನೀಡಿದ್ದಾರೆ.
ಸುಧಾರಣೆಗಳು ಭಾರತದ ಕುರಿತಾದ ಜಾಗತಿಕ ದೃಷ್ಟಿಕೋನವನ್ನು ‘ಭಾರತ ಯಾಕೆ’ ಎಂಬುದರಿಂದ ‘ಭಾರತ ಯಾಕಾಗಬಾರದು’ ಎಂದು ಬದಲಾಯಿಸಿವೆ. ಉತ್ಪಾದನೆ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಸರ್ಕಾರ ಗಮನ ಹರಿಸಿದೆ ಎಂದು ಮೋದಿ ಹೇಳಿದ್ದಾರೆ.