ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ’ಸಂಸತ್ತಿನ ವಿಶೇಷ ಅಧಿವೇಶನ ಮುಗಿದಿದೆ. ಅದಾನಿ ಹಗರಣ, ಜಾತಿ ಗಣತಿ, ವಿಶೇಷವಾಗಿ ಹೆಚ್ಚುತ್ತಿರುವ ನಿರುದ್ಯೋಗ, ಅಸಮಾನತೆ ಮತ್ತು ಆರ್ಥಿಕ ಸಂಕಷ್ಟದಂತಹ ಕೆಲವು ನಿರ್ಣಾಯಕ ಸಮಸ್ಯೆಗಳಿಂದ ದೇಶವನ್ನು ಬೇರೆಡೆಗೆ ಸೆಳೆಯಲು ನರೇಂದ್ರ ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ‘ ಎಂದು ಹೇಳಿದ್ದಾರೆ.