<p class="title"><strong>ಗುವಾಹಟಿ:</strong>ಹಿಂದೂ ವಿವಾಹಿತ ಮಹಿಳೆಯು ಸಾಂಪ್ರದಾಯಿಕವಾಗಿ ಬಂದಿರುವ ಬಳೆ ಮತ್ತು ಸಿಂಧೂರ ಧರಿಸಲು ನಿರಾಕರಿಸಿದರೆ, ಅದು ಮದುವೆಗೇಸ ಅಸಮ್ಮತಿ ತೋರಿದಂತೆ ಎಂದು ಅಭಿಪ್ರಾಯಪಟ್ಟಿರುವ ಗುವಾಹಟಿ ಹೈಕೋರ್ಟ್, ವ್ಯಕ್ತಿಗೆ ವಿಚ್ಛೇದನ ಮಂಜೂರು ಮಾಡಿದೆ.</p>.<p>ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಜಯ್ ಲಂಬಾ ಹಾಗೂ ನ್ಯಾಯಮೂರ್ತಿ ಸೌಮಿತ್ರಾ ಸೈಕಿಯಾ ಅವರಿದ್ದ ವಿಭಾಗೀಯ ಪೀಠವು, ಕೌಟುಂಬಿಕ ನ್ಯಾಯಾಲಯದ ಅದೇಶವನ್ನು ವಜಾಮಾಡಿತು.</p>.<p class="title">ಪತ್ನಿಯು ವ್ಯಕ್ತಿಯ ವಿರುದ್ಧ ಯಾವುದೇ ರೀತಿ ಹಿಂಸೆಯಾಗುವಂತೆ ನಡೆದುಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಕೋರಿದ್ದ ಅರ್ಜಿಯನ್ನು ತಳ್ಳಿಹಾಕಿತ್ತು. ಇದನ್ನು ವ್ಯಕ್ತಿ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.</p>.<p>ಬಳೆ ಮತ್ತು ಸಿಂಧೂರ ಧರಿಸಲು ನಿರಾಕರಿಸುವುದು, ಅವಿವಾಹಿತೆಯಂತೆ ಬಿಂಬಿಸಿಕೊಳ್ಳಲು ಬಯಸುವುದು ಕೂಡಾ ಮದುವೆಗೆ ಅಸಮ್ಮತಿ ತೋರಿದಂತೆ. ಮಹಿಳೆಯ ಇಂಥ ನಿಲುವು ಆಕೆ ಸಹಬಾಳ್ವೆ ನಡೆಸಲು ಸಿದ್ಧವಿಲ್ಲದಿರುವುದರ ಸೂಚನೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು ಜೂನ್ 19ರಂದು ವಿಚ್ಛೇದನ ಕೋರಿದ್ದ ಅರ್ಜಿ ಪುರಸ್ಕರಿಸಿಆದೇಶ ನೀಡಿತು.</p>.<p>ಮಹಿಳೆ ಜೊತೆಗೆ ಅರ್ಜಿದಾರ 2012ರ ಫೆಬ್ರುವರಿ 17ರಂದು ವಿವಾಹವಾಗಿದ್ದರು. ಬಳಿಕ ದಂಪತಿ ನಡುವೆ ಜಗಳ ಆರಂಭವಾಗಿದ್ದು, ಸಹಬಾಳ್ವೆ ನಡೆಸುವುದು ಆಗಿರಲಿಲ್ಲ. ಇದರ ಪರಿಣಾಮ, ಜೂನ್ 30, 2013ರಿಂದಲೂ ಪ್ರತ್ಯೇಕವಾಗಿ ವಾಸವಿದ್ದರು.</p>.<p>ಮಹಿಳೆಯು ಪತಿ ಮತ್ತವರ ಸಂಬಂಧಿಕರ ವಿರುದ್ಧ ಕಿರುಕುಳ ದೂರು ದಾಖಲಿಸಿದ್ದಾರೆ. ಆದರೆ, ಈ ಆರೋಪಗಳು ಸಾಬೀತಾಗಿರಲಿಲ್ಲ ಎಂಬುದನ್ನು ಪೀಠವು ಪರಿಗಣನೆಗೆ ತೆಗೆದುಕೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಗುವಾಹಟಿ:</strong>ಹಿಂದೂ ವಿವಾಹಿತ ಮಹಿಳೆಯು ಸಾಂಪ್ರದಾಯಿಕವಾಗಿ ಬಂದಿರುವ ಬಳೆ ಮತ್ತು ಸಿಂಧೂರ ಧರಿಸಲು ನಿರಾಕರಿಸಿದರೆ, ಅದು ಮದುವೆಗೇಸ ಅಸಮ್ಮತಿ ತೋರಿದಂತೆ ಎಂದು ಅಭಿಪ್ರಾಯಪಟ್ಟಿರುವ ಗುವಾಹಟಿ ಹೈಕೋರ್ಟ್, ವ್ಯಕ್ತಿಗೆ ವಿಚ್ಛೇದನ ಮಂಜೂರು ಮಾಡಿದೆ.</p>.<p>ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಜಯ್ ಲಂಬಾ ಹಾಗೂ ನ್ಯಾಯಮೂರ್ತಿ ಸೌಮಿತ್ರಾ ಸೈಕಿಯಾ ಅವರಿದ್ದ ವಿಭಾಗೀಯ ಪೀಠವು, ಕೌಟುಂಬಿಕ ನ್ಯಾಯಾಲಯದ ಅದೇಶವನ್ನು ವಜಾಮಾಡಿತು.</p>.<p class="title">ಪತ್ನಿಯು ವ್ಯಕ್ತಿಯ ವಿರುದ್ಧ ಯಾವುದೇ ರೀತಿ ಹಿಂಸೆಯಾಗುವಂತೆ ನಡೆದುಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಕೋರಿದ್ದ ಅರ್ಜಿಯನ್ನು ತಳ್ಳಿಹಾಕಿತ್ತು. ಇದನ್ನು ವ್ಯಕ್ತಿ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.</p>.<p>ಬಳೆ ಮತ್ತು ಸಿಂಧೂರ ಧರಿಸಲು ನಿರಾಕರಿಸುವುದು, ಅವಿವಾಹಿತೆಯಂತೆ ಬಿಂಬಿಸಿಕೊಳ್ಳಲು ಬಯಸುವುದು ಕೂಡಾ ಮದುವೆಗೆ ಅಸಮ್ಮತಿ ತೋರಿದಂತೆ. ಮಹಿಳೆಯ ಇಂಥ ನಿಲುವು ಆಕೆ ಸಹಬಾಳ್ವೆ ನಡೆಸಲು ಸಿದ್ಧವಿಲ್ಲದಿರುವುದರ ಸೂಚನೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು ಜೂನ್ 19ರಂದು ವಿಚ್ಛೇದನ ಕೋರಿದ್ದ ಅರ್ಜಿ ಪುರಸ್ಕರಿಸಿಆದೇಶ ನೀಡಿತು.</p>.<p>ಮಹಿಳೆ ಜೊತೆಗೆ ಅರ್ಜಿದಾರ 2012ರ ಫೆಬ್ರುವರಿ 17ರಂದು ವಿವಾಹವಾಗಿದ್ದರು. ಬಳಿಕ ದಂಪತಿ ನಡುವೆ ಜಗಳ ಆರಂಭವಾಗಿದ್ದು, ಸಹಬಾಳ್ವೆ ನಡೆಸುವುದು ಆಗಿರಲಿಲ್ಲ. ಇದರ ಪರಿಣಾಮ, ಜೂನ್ 30, 2013ರಿಂದಲೂ ಪ್ರತ್ಯೇಕವಾಗಿ ವಾಸವಿದ್ದರು.</p>.<p>ಮಹಿಳೆಯು ಪತಿ ಮತ್ತವರ ಸಂಬಂಧಿಕರ ವಿರುದ್ಧ ಕಿರುಕುಳ ದೂರು ದಾಖಲಿಸಿದ್ದಾರೆ. ಆದರೆ, ಈ ಆರೋಪಗಳು ಸಾಬೀತಾಗಿರಲಿಲ್ಲ ಎಂಬುದನ್ನು ಪೀಠವು ಪರಿಗಣನೆಗೆ ತೆಗೆದುಕೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>