<p><strong>ನವದೆಹಲಿ</strong>: ಯುನೆಸ್ಕೊ ಸಿದ್ಧಪಡಿಸಿರುವ ವಿಶ್ವದ ಸೃಜನಶೀಲ ನಗರಗಳ ಪಟ್ಟಿಗೆ ಮಧ್ಯಪ್ರದೇಶದ ಗ್ವಾಲಿಯರ್ ಹಾಗೂ ಕೇರಳದ ಕೋಯಿಕ್ಕೋಡ್ ಸೇರ್ಪಡೆಯಾಗಿವೆ.</p>.<p>ವಿಶ್ವ ನಗರಗಳ ದಿನಾಚರಣೆ ಅಂಗವಾಗಿ ಸಿದ್ಧಪಡಿಸಿರುವ ವಿಶ್ವದ ಸೃಜನಶೀಲ 55 ನಗರಗಳ ಪಟ್ಟಿಯಲ್ಲಿ ಭಾರತದ ಈ ಎರಡೂ ಸೇರಿವೆ. ಈ ಬಗ್ಗೆ ತನ್ನ ವೆಬ್ಸೈಟ್ನಲ್ಲಿ ಯುನೆಸ್ಕೊ ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ.</p>.<div><blockquote>ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯು ಅನುರಣಿಸಿರುವುದು ಹೆಮ್ಮೆಯ ಸಂಗತಿ. ಈ ಸಾಧನೆಗೆ ಕಾರಣರಾದ ಎರಡೂ ನಗರಗಳ ನಾಗರಿಕರು ಅಭಿನಂದನೆಗೆ ಅರ್ಹರಾಗಿದ್ದಾರೆ. </blockquote><span class="attribution">ನರೇಂದ್ರ ಮೋದಿ, ಪ್ರಧಾನಿ</span></div>.<p>ಸಂಗೀತ ವಿಭಾಗದಲ್ಲಿ ಗ್ವಾಲಿಯರ್ ಸೇರ್ಪಡೆಯಾದರೆ, ಸಾಹಿತ್ಯ ಕ್ಷೇತ್ರದಲ್ಲಿ ಕೋಯಿಕ್ಕೋಡ್ಗೆ ಈ ಮಾನ್ಯತೆ ಸಿಕ್ಕಿದೆ.</p>.<p>‘ಸಾಹಿತ್ಯ ಹಾಗೂ ಸೃಜನಶೀಲತೆಯು ಈ ನಗರಗಳ ಅಭಿವೃದ್ಧಿಯ ಕಾರ್ಯತಂತ್ರದ ಭಾಗವಾಗಿವೆ. ಮಾನವ ಕೇಂದ್ರಿತ ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿಯೂ ನಾವೀನ್ಯದ ಹೊಸ ಪರಿಪಾಠಕ್ಕೂ ಮುನ್ನುಡಿ ಬರೆದಿವೆ’ ಎಂದು ಯುನೆಸ್ಕೊ ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಯುನೆಸ್ಕೊ ಸಿದ್ಧಪಡಿಸಿರುವ ವಿಶ್ವದ ಸೃಜನಶೀಲ ನಗರಗಳ ಪಟ್ಟಿಗೆ ಮಧ್ಯಪ್ರದೇಶದ ಗ್ವಾಲಿಯರ್ ಹಾಗೂ ಕೇರಳದ ಕೋಯಿಕ್ಕೋಡ್ ಸೇರ್ಪಡೆಯಾಗಿವೆ.</p>.<p>ವಿಶ್ವ ನಗರಗಳ ದಿನಾಚರಣೆ ಅಂಗವಾಗಿ ಸಿದ್ಧಪಡಿಸಿರುವ ವಿಶ್ವದ ಸೃಜನಶೀಲ 55 ನಗರಗಳ ಪಟ್ಟಿಯಲ್ಲಿ ಭಾರತದ ಈ ಎರಡೂ ಸೇರಿವೆ. ಈ ಬಗ್ಗೆ ತನ್ನ ವೆಬ್ಸೈಟ್ನಲ್ಲಿ ಯುನೆಸ್ಕೊ ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ.</p>.<div><blockquote>ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯು ಅನುರಣಿಸಿರುವುದು ಹೆಮ್ಮೆಯ ಸಂಗತಿ. ಈ ಸಾಧನೆಗೆ ಕಾರಣರಾದ ಎರಡೂ ನಗರಗಳ ನಾಗರಿಕರು ಅಭಿನಂದನೆಗೆ ಅರ್ಹರಾಗಿದ್ದಾರೆ. </blockquote><span class="attribution">ನರೇಂದ್ರ ಮೋದಿ, ಪ್ರಧಾನಿ</span></div>.<p>ಸಂಗೀತ ವಿಭಾಗದಲ್ಲಿ ಗ್ವಾಲಿಯರ್ ಸೇರ್ಪಡೆಯಾದರೆ, ಸಾಹಿತ್ಯ ಕ್ಷೇತ್ರದಲ್ಲಿ ಕೋಯಿಕ್ಕೋಡ್ಗೆ ಈ ಮಾನ್ಯತೆ ಸಿಕ್ಕಿದೆ.</p>.<p>‘ಸಾಹಿತ್ಯ ಹಾಗೂ ಸೃಜನಶೀಲತೆಯು ಈ ನಗರಗಳ ಅಭಿವೃದ್ಧಿಯ ಕಾರ್ಯತಂತ್ರದ ಭಾಗವಾಗಿವೆ. ಮಾನವ ಕೇಂದ್ರಿತ ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿಯೂ ನಾವೀನ್ಯದ ಹೊಸ ಪರಿಪಾಠಕ್ಕೂ ಮುನ್ನುಡಿ ಬರೆದಿವೆ’ ಎಂದು ಯುನೆಸ್ಕೊ ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>