ಸೋನೀಪತ್ ಜಿಲ್ಲೆಯ ಬರೌಡ ಗ್ರಾಮದ ಸುಖ್ವಿಂದರ್, 2021ರ ಫೆಬ್ರುವರಿ 12ರಂದು ಮನೋಜ್ ಮಲಿಕ್, ಅವರ ಪತ್ನಿ ಸಾಕ್ಷಿ ಮಲಿಕ್, ಅವರ ಮಗ ಸರ್ತಾಜ್, ಕುಸ್ತಿ ತರಬೇತುದಾರ ಸತೀಶ್ ಕುಮಾರ್, ಪ್ರದೀಪ್ ಮಲಿಕ್ ಮತ್ತು ಕುಸ್ತಿ ಪಟು ಪೂಜಾ ಅವರನ್ನು ಕೊಲೆ ಮಾಡಿದ್ದರು. ರೋಹ್ಟಕ್ನ ಕುಸ್ತಿ ಅಖಾಡಕ್ಕೆ ಹೊಂದಿಕೊಂಡ ಸ್ಥಳದಲ್ಲಿ ಕೊಲೆ ನಡೆದಿತ್ತು. ಸುಖ್ವಿಂದರ್ ವಿರುದ್ಧ ದೂರುಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಆತನನ್ನು ಕುಸ್ತಿ ತರಬೇತುದಾರನ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಅದೇ ಸಿಟ್ಟಿನಲ್ಲಿ ಆತ ಆರು ಮಂದಿಯನ್ನು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.