<p><strong>ನವದೆಹಲಿ</strong>: ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಅವರು ವಿಡಿಯೊ ಪತ್ರಕರ್ತರೊಬ್ಬರನ್ನು ನಿಂದಿಸುತ್ತಿರುವ ಅರ್ಥ ನೀಡುವ ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆಯಬೇಕು ಎಂದು ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಸೂಚಿಸಿದೆ.</p>.<p>ಶಾಜಿಯಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನಪ್ರೀತ್ ಪಿ.ಎಸ್. ಅರೋರಾ ಅವರು, ಈ ಮಧ್ಯಂತರ ಆದೇಶ ನೀಡಿದರು. ಟಿ.ವಿ. ಚರ್ಚೆಯ ಕಾರ್ಯಕ್ರಮ ಮುಗಿದ ನಂತರವೂ, ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ನೀಡಿದ್ದ ಸಮ್ಮತಿಯನ್ನು ತಾವು ಹಿಂಪಡೆದ ನಂತರವೂ ತಮ್ಮ ಮಾತುಗಳನ್ನು ಚಿತ್ರೀಕರಿಸಿಕೊಳ್ಳುವ ಮೂಲಕ ಕ್ಯಾಮೆರಾಮನ್ ತಮ್ಮ ಮಾನಹಾನಿಗೆ ಕಾರಣರಾಗಿದ್ದಾರೆ, ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಶಾಜಿಯಾ ಅವರು ದೂರಿದ್ದಾರೆ.</p>.<p>ನ್ಯಾಯಾಲಯವು ವಿಚಾರಣೆಯನ್ನು ಆಗಸ್ಟ್ 16ಕ್ಕೆ ಮುಂದೂಡಿದೆ. ವಿಡಿಯೊವನ್ನು ಬಳಸಿಕೊಳ್ಳುವುದಕ್ಕೆ ಸರ್ದೇಸಾಯಿ ಅವರಿಗೆ ಮಾಧ್ಯಮ ಸಂಸ್ಥೆಯಿಂದ ಅನುಮತಿ ಇತ್ತೇ ಎಂಬ ಬಗ್ಗೆ ಕೋರ್ಟ್ ಅವರ ವಕೀಲರಿಂದ ಮಾಹಿತಿ ಕೇಳಿದೆ.</p>.<p>ಶಾಜಿಯಾ ಅವರು ಸರ್ದೇಸಾಯಿ ನಡೆಸಿಕೊಟ್ಟ ಚರ್ಚೆಯಲ್ಲಿ ಕಳೆದ ತಿಂಗಳು ಭಾಗವಹಿಸಿದ್ದರು. ಸರ್ದೇಸಾಯಿ ಮತ್ತು ಶಾಜಿಯಾ ಅವರ ನಡುವೆ ಬಿರುಸಿನ ವಾಗ್ವಾದ ನಡೆದ ನಂತರ ಶಾಜಿಯಾ ಅವರು ಮಧ್ಯದಲ್ಲೇ ಕಾರ್ಯಕ್ರಮದಿಂದ ಹೊರನಡೆದಿದ್ದರು.</p>.<p>ನಂತರ ಸರ್ದೇಸಾಯಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡ ವಿಡಿಯೊ ಒಂದು ಆಕ್ಷೇಪಾರ್ಹವಾಗಿದೆ, ತಮ್ಮ ಖಾಸಗಿತನಕ್ಕೆ ಧಕ್ಕೆ ತಂದಿದೆ ಎಂದು ಶಾಜಿಯಾ ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಅವರು ವಿಡಿಯೊ ಪತ್ರಕರ್ತರೊಬ್ಬರನ್ನು ನಿಂದಿಸುತ್ತಿರುವ ಅರ್ಥ ನೀಡುವ ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆಯಬೇಕು ಎಂದು ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಸೂಚಿಸಿದೆ.</p>.<p>ಶಾಜಿಯಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನಪ್ರೀತ್ ಪಿ.ಎಸ್. ಅರೋರಾ ಅವರು, ಈ ಮಧ್ಯಂತರ ಆದೇಶ ನೀಡಿದರು. ಟಿ.ವಿ. ಚರ್ಚೆಯ ಕಾರ್ಯಕ್ರಮ ಮುಗಿದ ನಂತರವೂ, ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ನೀಡಿದ್ದ ಸಮ್ಮತಿಯನ್ನು ತಾವು ಹಿಂಪಡೆದ ನಂತರವೂ ತಮ್ಮ ಮಾತುಗಳನ್ನು ಚಿತ್ರೀಕರಿಸಿಕೊಳ್ಳುವ ಮೂಲಕ ಕ್ಯಾಮೆರಾಮನ್ ತಮ್ಮ ಮಾನಹಾನಿಗೆ ಕಾರಣರಾಗಿದ್ದಾರೆ, ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಶಾಜಿಯಾ ಅವರು ದೂರಿದ್ದಾರೆ.</p>.<p>ನ್ಯಾಯಾಲಯವು ವಿಚಾರಣೆಯನ್ನು ಆಗಸ್ಟ್ 16ಕ್ಕೆ ಮುಂದೂಡಿದೆ. ವಿಡಿಯೊವನ್ನು ಬಳಸಿಕೊಳ್ಳುವುದಕ್ಕೆ ಸರ್ದೇಸಾಯಿ ಅವರಿಗೆ ಮಾಧ್ಯಮ ಸಂಸ್ಥೆಯಿಂದ ಅನುಮತಿ ಇತ್ತೇ ಎಂಬ ಬಗ್ಗೆ ಕೋರ್ಟ್ ಅವರ ವಕೀಲರಿಂದ ಮಾಹಿತಿ ಕೇಳಿದೆ.</p>.<p>ಶಾಜಿಯಾ ಅವರು ಸರ್ದೇಸಾಯಿ ನಡೆಸಿಕೊಟ್ಟ ಚರ್ಚೆಯಲ್ಲಿ ಕಳೆದ ತಿಂಗಳು ಭಾಗವಹಿಸಿದ್ದರು. ಸರ್ದೇಸಾಯಿ ಮತ್ತು ಶಾಜಿಯಾ ಅವರ ನಡುವೆ ಬಿರುಸಿನ ವಾಗ್ವಾದ ನಡೆದ ನಂತರ ಶಾಜಿಯಾ ಅವರು ಮಧ್ಯದಲ್ಲೇ ಕಾರ್ಯಕ್ರಮದಿಂದ ಹೊರನಡೆದಿದ್ದರು.</p>.<p>ನಂತರ ಸರ್ದೇಸಾಯಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡ ವಿಡಿಯೊ ಒಂದು ಆಕ್ಷೇಪಾರ್ಹವಾಗಿದೆ, ತಮ್ಮ ಖಾಸಗಿತನಕ್ಕೆ ಧಕ್ಕೆ ತಂದಿದೆ ಎಂದು ಶಾಜಿಯಾ ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>