<p><strong>ಅಹಮದಾಬಾದ್</strong>: ಕಾನೂನು ಪದವೀಧರರು ನ್ಯಾಯಾಲಯಗಳಲ್ಲಿ ಅಭ್ಯಾಸ ಮಾಡುವ ಬದಲು ಕಾರ್ಪೊರೇಟ್ ವಲಯದಲ್ಲಿ ಉದ್ಯೋಗವನ್ನು ಆರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿ ಚಿಂತಾಜನಕವಾಗಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಶನಿವಾರ ಹೇಳಿದರು.</p>.<p>ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ಸೂರ್ಯಕಾಂತ್ ಮಾತನಾಡಿದರು. ‘ಪ್ರಾಯೋಗಿಕ ಅನುಭವದಲ್ಲಿ ಕಲಿಯಬಹುದಾದ ಪಾಠವನ್ನು ತರಗತಿಯಲ್ಲಿ ಕಲಿಸಲು ಸಾಧ್ಯವಿಲ್ಲ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. </p>.<p>‘ಶೇ 93ರಷ್ಟು ಕಾನೂನು ಪದವೀಧರರನ್ನು ಕಾರ್ಪೊರೇಟ್ ಸಂಸ್ಥೆಗಳು ವಿಶ್ವವಿದ್ಯಾಲಯದ ಹೊರಗೆ ಉದ್ಯೋಗದ ಆಮಿಷವೊಡ್ಡಿ ಹೈಜಾಕ್ ಮಾಡುತ್ತಿವೆ. ಇದು ನನ್ನ ಚಿಂತೆ ಹೆಚ್ಚಿಸಿದೆ. ಏಕೆಂದರೆ ರಾಷ್ಟ್ರೀಯ ಕಾನೂನು ವಿದ್ಯಾಕೇಂದ್ರಗಳು, ಬಾರ್ ಮತ್ತು ಬೆಂಚ್ಗೆ ಅಗತ್ಯವಿರುವ ಸದಸ್ಯರನ್ನು ಅಣಿಗೊಳಿಸುತ್ತವೆ’ ಎಂದು ಹೇಳಿದರು. </p>
<p><strong>ಅಹಮದಾಬಾದ್</strong>: ಕಾನೂನು ಪದವೀಧರರು ನ್ಯಾಯಾಲಯಗಳಲ್ಲಿ ಅಭ್ಯಾಸ ಮಾಡುವ ಬದಲು ಕಾರ್ಪೊರೇಟ್ ವಲಯದಲ್ಲಿ ಉದ್ಯೋಗವನ್ನು ಆರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿ ಚಿಂತಾಜನಕವಾಗಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಶನಿವಾರ ಹೇಳಿದರು.</p>.<p>ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ಸೂರ್ಯಕಾಂತ್ ಮಾತನಾಡಿದರು. ‘ಪ್ರಾಯೋಗಿಕ ಅನುಭವದಲ್ಲಿ ಕಲಿಯಬಹುದಾದ ಪಾಠವನ್ನು ತರಗತಿಯಲ್ಲಿ ಕಲಿಸಲು ಸಾಧ್ಯವಿಲ್ಲ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. </p>.<p>‘ಶೇ 93ರಷ್ಟು ಕಾನೂನು ಪದವೀಧರರನ್ನು ಕಾರ್ಪೊರೇಟ್ ಸಂಸ್ಥೆಗಳು ವಿಶ್ವವಿದ್ಯಾಲಯದ ಹೊರಗೆ ಉದ್ಯೋಗದ ಆಮಿಷವೊಡ್ಡಿ ಹೈಜಾಕ್ ಮಾಡುತ್ತಿವೆ. ಇದು ನನ್ನ ಚಿಂತೆ ಹೆಚ್ಚಿಸಿದೆ. ಏಕೆಂದರೆ ರಾಷ್ಟ್ರೀಯ ಕಾನೂನು ವಿದ್ಯಾಕೇಂದ್ರಗಳು, ಬಾರ್ ಮತ್ತು ಬೆಂಚ್ಗೆ ಅಗತ್ಯವಿರುವ ಸದಸ್ಯರನ್ನು ಅಣಿಗೊಳಿಸುತ್ತವೆ’ ಎಂದು ಹೇಳಿದರು. </p>