<p><strong>ಜಮ್ಮು (ಪಿಟಿಐ):</strong> ಕರ್ನಾಟಕವನ್ನು ಸೋಲಿಸಿ ಜಮ್ಮು ಮತ್ತು ಕಾಶ್ಮೀರ ತಂಡವು ಮೊದಲ ಬಾರಿ ರಣಜಿ ಟ್ರೋಫಿ ಗೆದ್ದು ಐತಿಹಾಸಿಕ ಸಾಧನೆಗೈದ ಬೆನ್ನಲ್ಲೇ ರಾಜ್ಯದ ಹಲವೆಡೆ ಸಂಭ್ರಮ, ಭಾವನಾತ್ಮಕ ದೃಶ್ಯಗಳು ಕಂಡುಬಂದವು. ಮಾಜಿ ಕ್ರಿಕೆಟಿಗರು ಆಟಗಾರರ ಸಾಧನೆಯನ್ನು ಕೊಂಡಾಡಿದ್ದಾರೆ.</p>.<p>ಜಮ್ಮುವಿನಲ್ಲಿ ನೂರಾರು ಕ್ರಿಕೆಟ್ಪ್ರಿಯರು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ ಆವರಣದಲ್ಲಿ ಜಮಾಯಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ಆಟಗಾರರ ಕುಟುಂಬದವರು ಸಿಹಿ ಹಂಚಿದರು. ಸಂಬಂಧಿಕರು ಆಟಗಾರರ ಮನೆಗಳಿಗೆ ತೆರಳಿ ಅವರ ಸಡಗರದಲ್ಲಿ ಪಾಲ್ಗೊಂಡರು.</p>.<p>‘ತಂಡ ಟ್ರೋಫಿ ಗೆಲ್ಲಬಹುದೆಂಬ ನಂಬಿಕೆ ಹೊಂದಿದ್ದೆವು’ ಎಂದು ವೇಗದ ಬೌಲರ್ ಯುದ್ಧವೀರ್ ಸಿಂಗ್ ಅವರ ಸೋದರಿ, ವೃತ್ತಿಯಿಂದ ವಕೀಲೆ ಆಗಿರುವ ಪ್ರೀತಿ ಚರಕ್ ಹೇಳಿದರು.</p>.<p>‘ಕೇಂದ್ರಾಡಳಿತ ಪ್ರದೇಶದ ಕ್ರಿಕೆಟ್ ಇತಿಹಾಸದಲ್ಲಿ ಇದು ಸ್ಮರಣೀಯ ಗಳಿಗೆ’ ಎಂದು ಮಾಜಿ ಆಟಗಾರ ಜತಿನ್ ವಾಧ್ವಾನ್ ಹೇಳಿದರು. ಅವರು ಜಮ್ಮು ಮತ್ತು ಕಾಶ್ಮೀರ ತಂಡ ವಿಕೆಟ್ ಕೀಪರ್ ಕನ್ಹಯ್ಯ ವಾಧ್ವಾನ್ ಅವರ ಅಣ್ಣ. ‘ನಮ್ಮ ಕಾಲದಲ್ಲೂ ಈ ಕಸನು ಕಂಡಿದ್ದೆವು. ಆದರೆ ಇಂದು ಕನಸು ಸಾಕಾರಗೊಂಡಿದೆ’ ಎಂದರು.</p>.<p>ಸುನೀಲ್ ಕುಮಾರ್ ಅವರ ಊರಾದ ಅಖನೂರಿನ ಕಥರ್ ಗ್ರಾಮದಲ್ಲೂ ಸಂಭ್ರಮ ಮನೆಮಾಡಿತ್ತು. ನೂರಾರು ಜನರು ಡೋಲು, ತಮಟೆಗಳನ್ನು ಬಾರಿಸಿ ಕುಟುಂಬದವರ ಸಂಭ್ರಮದಲ್ಲಿ ಭಾಗಿಯಾದರು.</p>.<p>‘ನನ್ನ ಮಗ ಹೆಮ್ಮೆ ಮೂಡಿಸಿದ್ದಾನೆ. ಬಾಲ್ಯದಲ್ಲಿ ಅವನು ಬ್ಯಾಟ್ ಬಿಟ್ಟು ಬೇರೆ ಆಟಿಕೆ ಮುಟ್ಟುತ್ತಿರಲಿಲ್ಲ’ ಎಂದು ವೇಗದ ಬೌಲರ್ ಸುನೀಲ್ ಕುಮಾರ್ ಅವರ ತಂದೆ ರಾಮಲಾಲ್ ವರ್ಮಾ ತಿಳಿಸಿದ್ದಾರೆ.</p>.<p>ಜಮ್ಮು–ಕಾಶ್ಮೀರ ತಂಡವನ್ನು ಮೂರೂ ಮಾದರಿಗಳಲ್ಲಿ ಪ್ರತಿನಿಧಿಸಿದ್ದ ಮತ್ತು ಬೌಲಿಂಗ್ ಕೋಚ್ ಕೂಡ ಆಗಿದ್ದ ಶಫ್ಕತ್ ಬಾಬಾ ಪ್ರತಿಕ್ರಿಯಿಸಿ ‘ಎಳೆಯ ಕ್ರಿಕೆಟಿಗರು ಕನಸು ಕಾಣಲು ಈ ಸಾಧನೆ ಪ್ರೇರಣೆಯಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮ್ಮು (ಪಿಟಿಐ):</strong> ಕರ್ನಾಟಕವನ್ನು ಸೋಲಿಸಿ ಜಮ್ಮು ಮತ್ತು ಕಾಶ್ಮೀರ ತಂಡವು ಮೊದಲ ಬಾರಿ ರಣಜಿ ಟ್ರೋಫಿ ಗೆದ್ದು ಐತಿಹಾಸಿಕ ಸಾಧನೆಗೈದ ಬೆನ್ನಲ್ಲೇ ರಾಜ್ಯದ ಹಲವೆಡೆ ಸಂಭ್ರಮ, ಭಾವನಾತ್ಮಕ ದೃಶ್ಯಗಳು ಕಂಡುಬಂದವು. ಮಾಜಿ ಕ್ರಿಕೆಟಿಗರು ಆಟಗಾರರ ಸಾಧನೆಯನ್ನು ಕೊಂಡಾಡಿದ್ದಾರೆ.</p>.<p>ಜಮ್ಮುವಿನಲ್ಲಿ ನೂರಾರು ಕ್ರಿಕೆಟ್ಪ್ರಿಯರು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ ಆವರಣದಲ್ಲಿ ಜಮಾಯಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ಆಟಗಾರರ ಕುಟುಂಬದವರು ಸಿಹಿ ಹಂಚಿದರು. ಸಂಬಂಧಿಕರು ಆಟಗಾರರ ಮನೆಗಳಿಗೆ ತೆರಳಿ ಅವರ ಸಡಗರದಲ್ಲಿ ಪಾಲ್ಗೊಂಡರು.</p>.<p>‘ತಂಡ ಟ್ರೋಫಿ ಗೆಲ್ಲಬಹುದೆಂಬ ನಂಬಿಕೆ ಹೊಂದಿದ್ದೆವು’ ಎಂದು ವೇಗದ ಬೌಲರ್ ಯುದ್ಧವೀರ್ ಸಿಂಗ್ ಅವರ ಸೋದರಿ, ವೃತ್ತಿಯಿಂದ ವಕೀಲೆ ಆಗಿರುವ ಪ್ರೀತಿ ಚರಕ್ ಹೇಳಿದರು.</p>.<p>‘ಕೇಂದ್ರಾಡಳಿತ ಪ್ರದೇಶದ ಕ್ರಿಕೆಟ್ ಇತಿಹಾಸದಲ್ಲಿ ಇದು ಸ್ಮರಣೀಯ ಗಳಿಗೆ’ ಎಂದು ಮಾಜಿ ಆಟಗಾರ ಜತಿನ್ ವಾಧ್ವಾನ್ ಹೇಳಿದರು. ಅವರು ಜಮ್ಮು ಮತ್ತು ಕಾಶ್ಮೀರ ತಂಡ ವಿಕೆಟ್ ಕೀಪರ್ ಕನ್ಹಯ್ಯ ವಾಧ್ವಾನ್ ಅವರ ಅಣ್ಣ. ‘ನಮ್ಮ ಕಾಲದಲ್ಲೂ ಈ ಕಸನು ಕಂಡಿದ್ದೆವು. ಆದರೆ ಇಂದು ಕನಸು ಸಾಕಾರಗೊಂಡಿದೆ’ ಎಂದರು.</p>.<p>ಸುನೀಲ್ ಕುಮಾರ್ ಅವರ ಊರಾದ ಅಖನೂರಿನ ಕಥರ್ ಗ್ರಾಮದಲ್ಲೂ ಸಂಭ್ರಮ ಮನೆಮಾಡಿತ್ತು. ನೂರಾರು ಜನರು ಡೋಲು, ತಮಟೆಗಳನ್ನು ಬಾರಿಸಿ ಕುಟುಂಬದವರ ಸಂಭ್ರಮದಲ್ಲಿ ಭಾಗಿಯಾದರು.</p>.<p>‘ನನ್ನ ಮಗ ಹೆಮ್ಮೆ ಮೂಡಿಸಿದ್ದಾನೆ. ಬಾಲ್ಯದಲ್ಲಿ ಅವನು ಬ್ಯಾಟ್ ಬಿಟ್ಟು ಬೇರೆ ಆಟಿಕೆ ಮುಟ್ಟುತ್ತಿರಲಿಲ್ಲ’ ಎಂದು ವೇಗದ ಬೌಲರ್ ಸುನೀಲ್ ಕುಮಾರ್ ಅವರ ತಂದೆ ರಾಮಲಾಲ್ ವರ್ಮಾ ತಿಳಿಸಿದ್ದಾರೆ.</p>.<p>ಜಮ್ಮು–ಕಾಶ್ಮೀರ ತಂಡವನ್ನು ಮೂರೂ ಮಾದರಿಗಳಲ್ಲಿ ಪ್ರತಿನಿಧಿಸಿದ್ದ ಮತ್ತು ಬೌಲಿಂಗ್ ಕೋಚ್ ಕೂಡ ಆಗಿದ್ದ ಶಫ್ಕತ್ ಬಾಬಾ ಪ್ರತಿಕ್ರಿಯಿಸಿ ‘ಎಳೆಯ ಕ್ರಿಕೆಟಿಗರು ಕನಸು ಕಾಣಲು ಈ ಸಾಧನೆ ಪ್ರೇರಣೆಯಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>