ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಕ್ರೆ, ಪ್ರಕಾಶ್ ಅಂಬೇಡ್ಕರ್‌ ಭಾವಚಿತ್ರದ ಬ್ಯಾನರ್‌ನಲ್ಲಿ ಔರಂಗಜೇಬ್ ಚಿತ್ರ: ಎಫ್‌ಐಆರ್

Published 23 ಜೂನ್ 2023, 13:16 IST
Last Updated 23 ಜೂನ್ 2023, 13:16 IST
ಅಕ್ಷರ ಗಾತ್ರ

ಮುಂಬೈ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಪ್ರಕಾಶ್‌ ಅಂಬೇಡ್ಕರ್‌ ಅವರ ಭಾವಚಿತ್ರಗಳ ಜತೆಗೆ ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರ ಚಿತ್ರ ಮುದ್ರಿಸಿದ ಬ್ಯಾನರ್‌ ಅನ್ನು ರಾತ್ರಿ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಮುಂಬೈ ಪೊಲೀಸರು ಶುಕ್ರವಾರ ಎಫ್‌ಐಆರ್‌ ದಾಖಲಿಸಿದ್ದಾರೆ. 

ಮುಂಬೈನ ಕೇಂದ್ರ ಭಾಗದ ಮಾಹಿಮ್‌ ಪ್ರದೇಶದಲ್ಲಿ ಈ ಬ್ಯಾನರ್ ರಾತ್ರಿ ವೇಳೆ ಕಟ್ಟಿರುವುದು ಕಂಡುಬಂದಿದೆ. ಬ್ಯಾನರ್‌ ಅನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಠಾಕ್ರೆ ಮತ್ತು ಅಂಬೇಡ್ಕರ್ ಅವರು ಕಳೆದ ವಾರ ಔರಂಗಾಬಾದ್ ಜಿಲ್ಲೆಯ ಔರಂಗಜೇಬ್ ಸಮಾಧಿಗೆ ಭೇಟಿ ನೀಡಿದ್ದಕ್ಕಾಗಿ ಇಂತಹ ಬ್ಯಾನರ್‌ ಕಟ್ಟಲಾಗಿದೆ. ಈ ವರ್ಷದ ಆರಂಭದಲ್ಲಿ ಶಿವಸೇನೆ (ಯುಬಿಟಿ) ಮತ್ತು ಅಂಬೇಡ್ಕರ್ ಅವರ ವಂಚಿತ್‌ ಬಹುಜನ್‌ ಆಘಾಡಿ ಸಂಘಟನೆಯು ಮೈತ್ರಿ ಮಾಡಿಕೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT