ಬುಡಕಟ್ಟು ಬಂಡುಕೋರರು ಗಡಿಯ ಮೂಲಕ ಭಾರತದೊಳಕ್ಕೆ ಪ್ರವೇಶಿಸುತ್ತಾರೆ. ಜೊತೆಗೆ ಇದೇ ಮಾರ್ಗದಲ್ಲಿ ಮಾದಕ ವಸ್ತುಗಳನ್ನು ಕಳ್ಳಸಾಗಣಿಕೆ ಮಾಡಲಾಗುತ್ತಿದೆ ಎಂದು ಆರೋಪಿಸುವ ಇಂಫಾಲ್ ಕಣಿವೆಯ ಮೈತೇಯಿ ಸಮುದಾಯವು, ‘ಭಾರತ–ಮ್ಯಾನ್ಮಾರ್ ಗಡಿಯಾದ್ಯಂತ ತಡೆ ಬೇಲಿ ನಿರ್ಮಿಸಬೇಕು’ ಎಂದು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದೆ.