<p><strong>ನವದೆಹಲಿ (ಪಿಟಿಐ):</strong> ಮ್ಯಾನ್ಮಾರ್ ಜೊತೆಗೆ ಭಾರತ ಹಂಚಿಕೊಂಡಿರುವ 1,643 ಕಿ.ಮೀ ವ್ಯಾಪ್ತಿಯ ಗಡಿಯಲ್ಲಿ ತಡೆ ಬೇಲಿ ಹಾಕಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಘೋಷಿಸಿದ್ದಾರೆ. </p>.<p>‘ಭಾರತ–ಮ್ಯಾನ್ಮಾರ್ ಗಡಿಯ 1643 ಕಿ.ಮೀ ವಿಸ್ತೀರ್ಣದಲ್ಲಿ ತಡೆ ಬೇಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಮಣಿಪುರದ ಮೊರೆಹ್ ಗಡಿಯ 10 ಕಿ.ಮೀ ವ್ಯಾಪ್ತಿಯಲ್ಲಿ ತಡೆಬೇಲಿ ಕಾಮಗಾರಿ ಆರಂಭವಾಗಿದೆ. ಗಡಿಯಾದ್ಯಂತ ಉತ್ತಮ ಕಣ್ಗಾವಲು ವ್ಯವಸ್ಥೆಯನ್ನು ಕಲ್ಪಿಸಲಾಗುವುದು’ ಎಂದು ಅಮಿತ್ ಶಾ ಅವರು ‘ಎಕ್ಸ್’ ವೇದಿಕೆಯಲ್ಲಿ ತಿಳಿಸಿದ್ದಾರೆ. </p>.<p>ಈ ಕ್ರಮದಿಂದ ಭಾರತ–ಮ್ಯಾನ್ಮಾರ್ ಗಡಿಗಳ 16 ಕಿಲೊ ಮೀಟರ್ ವ್ಯಾಪ್ತಿಯಲ್ಲಿ ನೆಲೆಸಿರುವ ಜನರು ಪರಸ್ಪರರ ಭೂಪ್ರದೇಶದೊಳಗೆ ವೀಸಾ ಸೇರಿದಂತೆ ಯಾವುದೇ ದಾಖಲೆಗಳಿಲ್ಲದೆ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮುಕ್ತ ಸಂಚಾರವನ್ನು (ಎಫ್ಎಂಆರ್) ಅಂತ್ಯಗೊಳಿಸುವ ಸಾಧ್ಯತೆಯಿದೆ. </p>.<p>ಮ್ಯಾನ್ಮಾರ್ನ ರಖಾಯಿನ್ ರಾಜ್ಯಕ್ಕೆ ಯಾವುದೇ ಭಾರತೀಯರು ಪ್ರಯಾಣಿಸಕೂಡದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಂಗಳವಾರ ಸೂಚನೆ ನೀಡಿದೆ.</p>.<p>ಬುಡಕಟ್ಟು ಬಂಡುಕೋರರು ಗಡಿಯ ಮೂಲಕ ಭಾರತದೊಳಕ್ಕೆ ಪ್ರವೇಶಿಸುತ್ತಾರೆ. ಜೊತೆಗೆ ಇದೇ ಮಾರ್ಗದಲ್ಲಿ ಮಾದಕ ವಸ್ತುಗಳನ್ನು ಕಳ್ಳಸಾಗಣಿಕೆ ಮಾಡಲಾಗುತ್ತಿದೆ ಎಂದು ಆರೋಪಿಸುವ ಇಂಫಾಲ್ ಕಣಿವೆಯ ಮೈತೇಯಿ ಸಮುದಾಯವು, ‘ಭಾರತ–ಮ್ಯಾನ್ಮಾರ್ ಗಡಿಯಾದ್ಯಂತ ತಡೆ ಬೇಲಿ ನಿರ್ಮಿಸಬೇಕು’ ಎಂದು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಮ್ಯಾನ್ಮಾರ್ ಜೊತೆಗೆ ಭಾರತ ಹಂಚಿಕೊಂಡಿರುವ 1,643 ಕಿ.ಮೀ ವ್ಯಾಪ್ತಿಯ ಗಡಿಯಲ್ಲಿ ತಡೆ ಬೇಲಿ ಹಾಕಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಘೋಷಿಸಿದ್ದಾರೆ. </p>.<p>‘ಭಾರತ–ಮ್ಯಾನ್ಮಾರ್ ಗಡಿಯ 1643 ಕಿ.ಮೀ ವಿಸ್ತೀರ್ಣದಲ್ಲಿ ತಡೆ ಬೇಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಮಣಿಪುರದ ಮೊರೆಹ್ ಗಡಿಯ 10 ಕಿ.ಮೀ ವ್ಯಾಪ್ತಿಯಲ್ಲಿ ತಡೆಬೇಲಿ ಕಾಮಗಾರಿ ಆರಂಭವಾಗಿದೆ. ಗಡಿಯಾದ್ಯಂತ ಉತ್ತಮ ಕಣ್ಗಾವಲು ವ್ಯವಸ್ಥೆಯನ್ನು ಕಲ್ಪಿಸಲಾಗುವುದು’ ಎಂದು ಅಮಿತ್ ಶಾ ಅವರು ‘ಎಕ್ಸ್’ ವೇದಿಕೆಯಲ್ಲಿ ತಿಳಿಸಿದ್ದಾರೆ. </p>.<p>ಈ ಕ್ರಮದಿಂದ ಭಾರತ–ಮ್ಯಾನ್ಮಾರ್ ಗಡಿಗಳ 16 ಕಿಲೊ ಮೀಟರ್ ವ್ಯಾಪ್ತಿಯಲ್ಲಿ ನೆಲೆಸಿರುವ ಜನರು ಪರಸ್ಪರರ ಭೂಪ್ರದೇಶದೊಳಗೆ ವೀಸಾ ಸೇರಿದಂತೆ ಯಾವುದೇ ದಾಖಲೆಗಳಿಲ್ಲದೆ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮುಕ್ತ ಸಂಚಾರವನ್ನು (ಎಫ್ಎಂಆರ್) ಅಂತ್ಯಗೊಳಿಸುವ ಸಾಧ್ಯತೆಯಿದೆ. </p>.<p>ಮ್ಯಾನ್ಮಾರ್ನ ರಖಾಯಿನ್ ರಾಜ್ಯಕ್ಕೆ ಯಾವುದೇ ಭಾರತೀಯರು ಪ್ರಯಾಣಿಸಕೂಡದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಂಗಳವಾರ ಸೂಚನೆ ನೀಡಿದೆ.</p>.<p>ಬುಡಕಟ್ಟು ಬಂಡುಕೋರರು ಗಡಿಯ ಮೂಲಕ ಭಾರತದೊಳಕ್ಕೆ ಪ್ರವೇಶಿಸುತ್ತಾರೆ. ಜೊತೆಗೆ ಇದೇ ಮಾರ್ಗದಲ್ಲಿ ಮಾದಕ ವಸ್ತುಗಳನ್ನು ಕಳ್ಳಸಾಗಣಿಕೆ ಮಾಡಲಾಗುತ್ತಿದೆ ಎಂದು ಆರೋಪಿಸುವ ಇಂಫಾಲ್ ಕಣಿವೆಯ ಮೈತೇಯಿ ಸಮುದಾಯವು, ‘ಭಾರತ–ಮ್ಯಾನ್ಮಾರ್ ಗಡಿಯಾದ್ಯಂತ ತಡೆ ಬೇಲಿ ನಿರ್ಮಿಸಬೇಕು’ ಎಂದು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>