ಸಾರ್ವಜನಿಕ ವ್ಯವಹಾರಗಳ ವೇದಿಕೆಯ 7ನೇ ರಾಷ್ಟ್ರೀಯ ಅಧಿವೇಶನದಲ್ಲಿ ಮಾತನಾಡಿದ ತರೂರ್, ‘ಈ ದಿನಗಳಲ್ಲಿ ನಮ್ಮ ದೇಶದದಲ್ಲಿ ಆಂತರಿಕ ಸಮಸ್ಯೆಗಳು ತೀವ್ರವಾಗಿವೆ. ಸಾಮಾಜಿಕ ಒಗ್ಗಟ್ಟಿನಲ್ಲಿ ಬಿರುಕು, ಅನಿಯಂತ್ರಿತವಾಗಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕು, ಗಡಿಯಲ್ಲಿ ಚೀನಾದ ತಂಟೆ, ಡಿಮಾನಿಟೈಸನ್ ನಂತರ ಆರ್ಥಿಕ ಕುಸಿತ, ಇತಿಹಾಸ ನಿರ್ಮಿಸಿದ ನಿರುದ್ಯೋಗ ಸಮಸ್ಯೆಗಳು ಕಾಡುತ್ತಿವೆ‘ ಎಂದು ಉಲ್ಲೇಖಿಸಿದ್ದಾರೆ.