ಬಾಲಾಸೋರ್ (ಪಿಟಿಐ): ಭಾರತ ತನ್ನ ಮಧ್ಯಮ ಶ್ರೇಣಿಯ ವಾಯುಮಾರ್ಗದಲ್ಲಿ ಗುರಿಯಾಗಿಸಿಭೂಮಿಯಿಂದ ಪ್ರಯೋಗಿಸಬಹುದಾದ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನುಒಡಿಶಾದ ಚಾಂದಿಪುರ್ನಲ್ಲಿ ಭಾನುವಾರ ಯಶಸ್ವಿಯಾಗಿ ನಡೆಸಿತು.
ದೂರಗಾಮಿ ಗುರಿಯನ್ನು ಅಂದಾಜಿಸಿ ಅತಿವೇಗವಾಗಿ ಮುನ್ನುಗ್ಗುವ ಈ ಕ್ಷಿಪಣಿಯ ಪ್ರಯೋಗ ಬೆಳಿಗ್ಗೆ 10.30ಕ್ಕೆ ನಡೆಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್ಡಿಒ) ಹೇಳಿಕೆಯಲ್ಲಿ ತಿಳಿಸಿದೆ.
ದೀರ್ಘ ಅಂತರದ ವಾಯುನೆಲೆಯನ್ನು ಗುರಿಯಾಗಿಸಿ ಅಧಿಕ ವೇಗದ ಕ್ಷಿಪಣಿ ಪ್ರಯೋಗಿಸಲಾಯಿತು. ನೇರದಾಳಿಯಲ್ಲಿ ಕ್ಷಿಪಣಿಯು ಗುರಿಯನ್ನು ಧ್ವಂಸಗೊಳಿಸಿತು ಎಂದು ವಿವರಿಸಿದೆ.