ಬೆಂಗಳೂರು: ಭಾರತ ಮತ್ತು ಚೀನಾ ಗಡಿಯಲ್ಲಿ ಪ್ರಕ್ಷುಬ್ಧತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಷ್ಟ್ರದ ರಕ್ಷಣಾ ಬಜೆಟ್ನ ಅನುದಾನದಲ್ಲಿ ₹ 63 ಸಾವಿರ ಕೋಟಿ ಕಡಿತಗೊಳಿಸಿರುವುದು ಏಕೆ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
'ಒಂದೆಡೆ ನಮ್ಮ ಗಡಿಯಲ್ಲಿ ಚೀನಾ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಕೇಂದ್ರವು ರಕ್ಷಣಾ ಬಜೆಟ್ನಲ್ಲಿ ₹ 63 ಸಾವಿರ ಕೋಟಿಯನ್ನು ಕಡಿತಗೊಳಿಸಿದೆ. ಹೀಗೆ ರಾಷ್ಟ್ರದ ರಕ್ಷಣಾ ವಿಚಾರದಲ್ಲಿ ಆಟವಾಡುತ್ತಿರುವ ಕೇಂದ್ರ ಸರ್ಕಾರವು ಅದನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ?' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
On one side, Chinese aggressions on our borders have been increasing everyday.
— Congress (@INCIndia) March 20, 2022
On the other, there has been a Rs. 63,000 crore cut in the defence budget.
How can the Government justify playing with our security like this? pic.twitter.com/CypCG8Cv2n
'ಸೆಂಟ್ರಲ್ ವಿಸ್ತಾ'ಗೆ ₹ 20 ಸಾವಿರ ಕೋಟಿ ಖರ್ಚು ಮಾಡುತ್ತಿರುವ ಕೇಂದ್ರ ಸರ್ಕಾರವು ರಕ್ಷಣಾ ಬಜೆಟ್ನಲ್ಲಿ ₹ 63 ಸಾವಿರ ಕೋಟಿಯನ್ನು ಕಡಿತಗೊಳಿಸಿದೆ. ಬಿಜೆಪಿ ಸರ್ಕಾರ ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತಿದೆ ಎಂಬುದು ಈ ಮೂಲಕ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ನಲ್ಲಿ ಟೀಕಿಸಿದೆ.
Vanity projects are clearly more “essential” to the government than our country’s defence. pic.twitter.com/KUzmxfgaem
— Congress (@INCIndia) March 20, 2022
ಇತ್ತೀಚೆಗೆ ಚೀನಾ ತನ್ನ ವಾರ್ಷಿಕ ರಕ್ಷಣಾ ಬಜೆಟ್ನ ಅನುದಾನದಲ್ಲಿ ಶೇ 7.1ರಷ್ಟು ಹೆಚ್ಚಳ ಮಾಡಿದೆ. ₹ 15.88 ಲಕ್ಷ ಕೋಟಿಯಿಂದ ₹ 17.48ಲಕ್ಷ ಕೋಟಿಗೆ ಅನುದಾನ ಹೆಚ್ಚಳ ಮಾಡಿದ್ದು, ಇದು ಭಾರತದ ರಕ್ಷಣಾ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
ये कैसी भाजपाई देशभक्ति है-
— Congress (@INCIndia) March 20, 2022
जो रक्षा बजट में कटौती कर रही है, वो भी ऐसे समय में जब सीमाओं पर तनाव है।
रक्षा बजट में कटौती भाजपा के तथाकथित राष्ट्रवाद का पर्दाफाश कर रही है। pic.twitter.com/nQWczNcz7Q
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.