<p class="title"><strong>ನವದೆಹಲಿ: </strong>ಮೋಹನ್ದಾಸ್ ಕರಮ್ಚಂದ್ ಗಾಂಧಿ ‘ಮಹಾತ್ಮ’ರಾಗಿ ರೂಪಾಂತರಗೊಂಡ ಚಿತ್ರದ ಸ್ತಬ್ಧಚಿತ್ರ ಶನಿವಾರ ಗಣರಾಜ್ಯೋತ್ಸವದಲ್ಲಿ ಎಲ್ಲರ ಗಮನ ಸೆಳೆಯಿತು.</p>.<p class="title">125 ವರ್ಷಗಳ ಹಿಂದೆ ಯುವ ವಕೀಲರಾಗಿದ್ದ ಮಹಾತ್ಮ ಗಾಂಧಿಯವರನ್ನು ದಕ್ಷಿಣ ಆಫ್ರಿಕಾದ ಪೀಟರ್ಮಾರಿಟ್ಬರ್ಗ್ ರೈಲು ನಿಲ್ದಾಣದಲ್ಲಿ ಬಿಳಿಯರು ತಮಗೆ ಮೀಸಲಾಗಿದ್ದ ರೈಲು ಬೋಗಿಯಿಂದ ಜನಾಂಗೀಯ ನಿಂದನೆ ಮಾಡಿ, ಹೊರ ತಳ್ಳಿದ್ದರು.</p>.<p>ಆನಂತರ ಗಾಂಧೀಜಿ ಒಬ್ಬ ಹೋರಾಟಗಾರರಾಗಿ ‘ಮಹಾತ್ಮ’ರಾಗಿ ಎಲ್ಲ ಹೃದಯದಲ್ಲಿ ನೆಲೆಸುವಂತೆ ಆದ ಚಿತ್ರಣವನ್ನು ರೈಲ್ವೆ ಇಲಾಖೆ ಸ್ತಬ್ಧಚಿತ್ರದ ಮೂಲಕ ಸಾದರಪಡಿಸಿತು.</p>.<p>ಗಣರಾಜ್ಯೋತ್ಸವ ಕಣ್ತುಂಬಿಕೊಳ್ಳಲು ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಗಣ್ಯರು, ಪತ್ರಕರ್ತರು ಈ ಸ್ತಬ್ಧಚಿತ್ರಕ್ಕೆ ಮಾರುಹೋದರು.</p>.<p>ಕ್ವಾಝುಲು-ನಟಾಲ್ ಪ್ರಾಂತ್ಯದಿಂದ ಬಂದಿದ್ದ ಭಾರತ ಸಂಜಾತೆಯಾದ ಪತ್ರಕರ್ತೆ ಯಾಶಿಕಾ ಸಿಂಗ್ ‘ನಾನು ನನ್ನ ದೇಶವನ್ನು ತುಂಬಾ ಪ್ರೀತಿಸುತ್ತೇನೆ. ಆದರೆ, ಭಾರತದೊಂದಿಗೆ ನನಗೆ ಗಾಢವಾದ ಸಂಬಂಧ ಹೊಂದಿದ್ದೇವೆ. ಗಾಂಧಿ ಮತ್ತು ಮಂಡೇಲಾ ಈ ಎರಡೂ ರಾಷ್ಟ್ರಗಳ ನಂಟನ್ನುಇನ್ನಷ್ಟು ಗಟ್ಟಿಯಾಗಿ ಬೆಸೆದಿದ್ದಾರೆ. ಈ ಸ್ತಬ್ಧಚಿತ್ರ ನನ್ನ ಹೃದಯವನ್ನು ತಟ್ಟಿದೆ’ ಎಂದರು.</p>.<p>ಅಧ್ಯಕ್ಷರೊಂದಿಗೆ ಜೋಹಾನ್ಸ್ಬರ್ಗ್ನಿಂದ ಬಂದಿದ್ದ ಫಕಿರ್ ಹಸನ್, ಡರ್ಬಾನ್ ಮೂಲದ ಸಲ್ಮಾ ಪಟೇಲ್ ಅವರು ಸಹ ಯಾಶಿಕಾ ಅವರ ಭಾವನೆಗೆ ಧ್ವನಿಗೂಡಿಸಿದರು.</p>.<p>ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೊಸಾ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ: </strong>ಮೋಹನ್ದಾಸ್ ಕರಮ್ಚಂದ್ ಗಾಂಧಿ ‘ಮಹಾತ್ಮ’ರಾಗಿ ರೂಪಾಂತರಗೊಂಡ ಚಿತ್ರದ ಸ್ತಬ್ಧಚಿತ್ರ ಶನಿವಾರ ಗಣರಾಜ್ಯೋತ್ಸವದಲ್ಲಿ ಎಲ್ಲರ ಗಮನ ಸೆಳೆಯಿತು.</p>.<p class="title">125 ವರ್ಷಗಳ ಹಿಂದೆ ಯುವ ವಕೀಲರಾಗಿದ್ದ ಮಹಾತ್ಮ ಗಾಂಧಿಯವರನ್ನು ದಕ್ಷಿಣ ಆಫ್ರಿಕಾದ ಪೀಟರ್ಮಾರಿಟ್ಬರ್ಗ್ ರೈಲು ನಿಲ್ದಾಣದಲ್ಲಿ ಬಿಳಿಯರು ತಮಗೆ ಮೀಸಲಾಗಿದ್ದ ರೈಲು ಬೋಗಿಯಿಂದ ಜನಾಂಗೀಯ ನಿಂದನೆ ಮಾಡಿ, ಹೊರ ತಳ್ಳಿದ್ದರು.</p>.<p>ಆನಂತರ ಗಾಂಧೀಜಿ ಒಬ್ಬ ಹೋರಾಟಗಾರರಾಗಿ ‘ಮಹಾತ್ಮ’ರಾಗಿ ಎಲ್ಲ ಹೃದಯದಲ್ಲಿ ನೆಲೆಸುವಂತೆ ಆದ ಚಿತ್ರಣವನ್ನು ರೈಲ್ವೆ ಇಲಾಖೆ ಸ್ತಬ್ಧಚಿತ್ರದ ಮೂಲಕ ಸಾದರಪಡಿಸಿತು.</p>.<p>ಗಣರಾಜ್ಯೋತ್ಸವ ಕಣ್ತುಂಬಿಕೊಳ್ಳಲು ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಗಣ್ಯರು, ಪತ್ರಕರ್ತರು ಈ ಸ್ತಬ್ಧಚಿತ್ರಕ್ಕೆ ಮಾರುಹೋದರು.</p>.<p>ಕ್ವಾಝುಲು-ನಟಾಲ್ ಪ್ರಾಂತ್ಯದಿಂದ ಬಂದಿದ್ದ ಭಾರತ ಸಂಜಾತೆಯಾದ ಪತ್ರಕರ್ತೆ ಯಾಶಿಕಾ ಸಿಂಗ್ ‘ನಾನು ನನ್ನ ದೇಶವನ್ನು ತುಂಬಾ ಪ್ರೀತಿಸುತ್ತೇನೆ. ಆದರೆ, ಭಾರತದೊಂದಿಗೆ ನನಗೆ ಗಾಢವಾದ ಸಂಬಂಧ ಹೊಂದಿದ್ದೇವೆ. ಗಾಂಧಿ ಮತ್ತು ಮಂಡೇಲಾ ಈ ಎರಡೂ ರಾಷ್ಟ್ರಗಳ ನಂಟನ್ನುಇನ್ನಷ್ಟು ಗಟ್ಟಿಯಾಗಿ ಬೆಸೆದಿದ್ದಾರೆ. ಈ ಸ್ತಬ್ಧಚಿತ್ರ ನನ್ನ ಹೃದಯವನ್ನು ತಟ್ಟಿದೆ’ ಎಂದರು.</p>.<p>ಅಧ್ಯಕ್ಷರೊಂದಿಗೆ ಜೋಹಾನ್ಸ್ಬರ್ಗ್ನಿಂದ ಬಂದಿದ್ದ ಫಕಿರ್ ಹಸನ್, ಡರ್ಬಾನ್ ಮೂಲದ ಸಲ್ಮಾ ಪಟೇಲ್ ಅವರು ಸಹ ಯಾಶಿಕಾ ಅವರ ಭಾವನೆಗೆ ಧ್ವನಿಗೂಡಿಸಿದರು.</p>.<p>ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೊಸಾ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>