<p><strong>ನವದೆಹಲಿ:</strong> ‘ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ಜಗತ್ತಿನಾದ್ಯಂತ ತಲುಪಿಸುವ ಯೋಜನೆಯ ಭಾಗವಾಗಿ ಕೆಲಸ ಮಾಡುತ್ತಿದ್ದರೆ, ಭಾರತದಲ್ಲಿ ಕೂತು ಇದರಿಂದಾಗುವ ರಾಜಕೀಯ ಲಾಭದ ಲೆಕ್ಕಾಚಾರವನ್ನು ಹಾಕಲಾಗುತ್ತಿದೆ. ದೇಶಭಕ್ತನಾಗಿರುವುದು ಇಷ್ಟೊಂದು ಕಠಿಣವೇ?’ ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಸೋಮವಾರ ಹೇಳಿದರು.</p>.<p>ತಮ್ಮ ‘ಎಕ್ಸ್’ ಖಾತೆ ಮೂಲಕ ಖುರ್ಷಿದ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಖುರ್ಷಿದ್ ಅವರು ಜೆಡಿಯು ಸಂಸದ ಸಂಜಯ್ ಕುಮಾರ್ ಝಾ ಅವರ ನೇತೃತ್ವದ ನಿಯೋಗದ ಸದಸ್ಯರಾಗಿದ್ದಾರೆ. ಸದ್ಯ ಈ ನಿಯೋಗವು ಮಲೇಷ್ಯಾದಲ್ಲಿ ಇದೆ.</p>.<p>ಇಂಡೊನೇಷ್ಯಾದಲ್ಲಿ ಚಿಂತಕರ ಛಾವಡಿಯೊಂದಿಗಿನ ಸಭೆಯಲ್ಲಿ ಮಾತನಾಡಿದ್ದ ಖುರ್ಷಿದ್ ಅವರು, ‘ಹಲವು ವರ್ಷಗಳವರೆಗೆ ಕಾಶ್ಮೀರದಲ್ಲಿ ಅನೇಕ ಮುಖ್ಯ ಸಮಸ್ಯೆಗಳಿದ್ದವು. ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಬಳಿಕ ಈ ಎಲ್ಲ ಸಮಸ್ಯೆಗಳು ಅಂತ್ಯಗೊಂಡವು’ ಎಂದಿದ್ದರು.</p>.<p>ಈ ಹೇಳಿಕೆಯು ಭಾರತದಲ್ಲಿ ರಾಜಕೀಯ ಹೇಳಿಕೆ–ಪ್ರತಿಹೇಳಿಕೆಗೆ ಕಾರಣವಾಗಿತ್ತು. ಬಿಜೆಪಿಯು ಖುರ್ಷಿದ್ ಅವರ ಹೇಳಿಕೆಯನ್ನು ಬೆಂಬಲಿಸಿತ್ತು. ವಿದೇಶಗಳಲ್ಲಿ ನಿಯೋಗದ ಸಭೆಗಳಲ್ಲಿ ಶಶಿ ತರೂರ್ ಅವರು ನೀಡಿದ ಹಲವು ಹೇಳಿಕೆಗಳೂ ಭಾರತದಲ್ಲಿ ವಿವಾದ ಸ್ವರೂಪ ಪಡೆದುಕೊಂಡಿದ್ದವು. ಕಾಂಗ್ರೆಸ್ ನಾಯಕರು ತರೂರ್ ಅವರ ವಿರುದ್ಧ ಮಾತನಾಡಿದ್ದರು. </p>.<div><blockquote>ತರೂರ್ ಮನೀಷ್ ತಿವಾರಿ ನಂತರ ಈಗ ಇನ್ನೊಬ್ಬ ಕಾಂಗ್ರೆಸ್ ನಾಯಕ ಸತ್ಯವನ್ನು ಹೇಳಿ ಪಕ್ಷಕ್ಕೆ ಮತ್ತು ‘ಇಂಡಿಯಾ’ ಮೈತ್ರಿಕೂಟಕ್ಕೆ ಕನ್ನಡಿ ಹಿಡಿದಿದ್ದಾರೆ. ಖುರ್ಷಿದ್ ಅವರು ಭಾರತಕ್ಕೆ ಆದ್ಯತೆ ನೀಡಿದರು. ಇದಕ್ಕಾಗಿ ಅವರನ್ನು ಯಾವುದೇ ಪಕ್ಷದ ಸೂಪರ್ ವಕ್ತಾರ ಎಂದು ಕರೆಯುವುದಿಲ್ಲ ಎಂದುಕೊಳ್ಳುತ್ತೇವೆ</blockquote><span class="attribution">ಶೆಹಜಾದ್ ಪೂನಾವಾಲ ಬಿಜೆಪಿ ರಾಷ್ಟ್ರೀಯ ವಕ್ತಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ಜಗತ್ತಿನಾದ್ಯಂತ ತಲುಪಿಸುವ ಯೋಜನೆಯ ಭಾಗವಾಗಿ ಕೆಲಸ ಮಾಡುತ್ತಿದ್ದರೆ, ಭಾರತದಲ್ಲಿ ಕೂತು ಇದರಿಂದಾಗುವ ರಾಜಕೀಯ ಲಾಭದ ಲೆಕ್ಕಾಚಾರವನ್ನು ಹಾಕಲಾಗುತ್ತಿದೆ. ದೇಶಭಕ್ತನಾಗಿರುವುದು ಇಷ್ಟೊಂದು ಕಠಿಣವೇ?’ ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಸೋಮವಾರ ಹೇಳಿದರು.</p>.<p>ತಮ್ಮ ‘ಎಕ್ಸ್’ ಖಾತೆ ಮೂಲಕ ಖುರ್ಷಿದ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಖುರ್ಷಿದ್ ಅವರು ಜೆಡಿಯು ಸಂಸದ ಸಂಜಯ್ ಕುಮಾರ್ ಝಾ ಅವರ ನೇತೃತ್ವದ ನಿಯೋಗದ ಸದಸ್ಯರಾಗಿದ್ದಾರೆ. ಸದ್ಯ ಈ ನಿಯೋಗವು ಮಲೇಷ್ಯಾದಲ್ಲಿ ಇದೆ.</p>.<p>ಇಂಡೊನೇಷ್ಯಾದಲ್ಲಿ ಚಿಂತಕರ ಛಾವಡಿಯೊಂದಿಗಿನ ಸಭೆಯಲ್ಲಿ ಮಾತನಾಡಿದ್ದ ಖುರ್ಷಿದ್ ಅವರು, ‘ಹಲವು ವರ್ಷಗಳವರೆಗೆ ಕಾಶ್ಮೀರದಲ್ಲಿ ಅನೇಕ ಮುಖ್ಯ ಸಮಸ್ಯೆಗಳಿದ್ದವು. ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಬಳಿಕ ಈ ಎಲ್ಲ ಸಮಸ್ಯೆಗಳು ಅಂತ್ಯಗೊಂಡವು’ ಎಂದಿದ್ದರು.</p>.<p>ಈ ಹೇಳಿಕೆಯು ಭಾರತದಲ್ಲಿ ರಾಜಕೀಯ ಹೇಳಿಕೆ–ಪ್ರತಿಹೇಳಿಕೆಗೆ ಕಾರಣವಾಗಿತ್ತು. ಬಿಜೆಪಿಯು ಖುರ್ಷಿದ್ ಅವರ ಹೇಳಿಕೆಯನ್ನು ಬೆಂಬಲಿಸಿತ್ತು. ವಿದೇಶಗಳಲ್ಲಿ ನಿಯೋಗದ ಸಭೆಗಳಲ್ಲಿ ಶಶಿ ತರೂರ್ ಅವರು ನೀಡಿದ ಹಲವು ಹೇಳಿಕೆಗಳೂ ಭಾರತದಲ್ಲಿ ವಿವಾದ ಸ್ವರೂಪ ಪಡೆದುಕೊಂಡಿದ್ದವು. ಕಾಂಗ್ರೆಸ್ ನಾಯಕರು ತರೂರ್ ಅವರ ವಿರುದ್ಧ ಮಾತನಾಡಿದ್ದರು. </p>.<div><blockquote>ತರೂರ್ ಮನೀಷ್ ತಿವಾರಿ ನಂತರ ಈಗ ಇನ್ನೊಬ್ಬ ಕಾಂಗ್ರೆಸ್ ನಾಯಕ ಸತ್ಯವನ್ನು ಹೇಳಿ ಪಕ್ಷಕ್ಕೆ ಮತ್ತು ‘ಇಂಡಿಯಾ’ ಮೈತ್ರಿಕೂಟಕ್ಕೆ ಕನ್ನಡಿ ಹಿಡಿದಿದ್ದಾರೆ. ಖುರ್ಷಿದ್ ಅವರು ಭಾರತಕ್ಕೆ ಆದ್ಯತೆ ನೀಡಿದರು. ಇದಕ್ಕಾಗಿ ಅವರನ್ನು ಯಾವುದೇ ಪಕ್ಷದ ಸೂಪರ್ ವಕ್ತಾರ ಎಂದು ಕರೆಯುವುದಿಲ್ಲ ಎಂದುಕೊಳ್ಳುತ್ತೇವೆ</blockquote><span class="attribution">ಶೆಹಜಾದ್ ಪೂನಾವಾಲ ಬಿಜೆಪಿ ರಾಷ್ಟ್ರೀಯ ವಕ್ತಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>