ಮಿಲಿಂದ್ ಮುನಿಸಿನ ಲಾಭ ಪಡೆಯಲು ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಪ್ರಯತ್ನಿಸಿದೆ. ಪಕ್ಷ ಸೇರುವಂತೆ ಅವರಿಗೆ ಬಹಿರಂಗ ಆಹ್ವಾನ ನೀಡಿದೆ. ಈ ಕುರಿತು ಮಾತನಾಡಿರುವ ಸಚಿವ ಉದಯ್ ಸಮಂತ್, ‘ಮಿಲಿಂದ್ ದಿಯೋರಾ ಅವರಿಗೆ ಸದಾ ಸ್ವಾಗತ. ಒಂದು ವೇಳೆ ಅವರು ಶಿಂದೆ ಅವರೊಂದಿಗೆ ಕೆಲಸ ಮಾಡಲು ಇಚ್ಚಿಸಿದ್ದೇ ಆದರೆ, ಅದು ಪಕ್ಷಕ್ಕೆ ಲಾಭ ಮಾಡಿಕೊಡಲಿದೆ’ ಎಂದು ಹೇಳಿದ್ದಾರೆ.