<p><strong>ನವದೆಹಲಿ</strong>: ‘ಫಾಲ್ಕನ್ 9’ ರಾಕೆಟ್ನಲ್ಲಿನ ದ್ರವ್ಯ ಆಮ್ಲಜನಕ ಸೋರಿಕೆ ವಿಷಯವನ್ನು ಸ್ಪೇಸ್ಎಕ್ಸ್ ಲಘುವಾಗಿ ತೆಗದುಕೊಂಡಿತ್ತು. ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳ ಜೀವವನ್ನು ಅಪಾಯಕ್ಕೆ ತಳ್ಳಿತ್ತು ಎಂದು ಇಸ್ರೊ ಮುಖ್ಯಸ್ಥ ವಿ. ನಾರಾಯಣ್ ಗುರುವಾರ ತಿಳಿಸಿದ್ದಾರೆ.</p>.<p>ಇಸ್ರೊ ಎಂಜಿನಿಯರ್ಗಳ ಒತ್ತಾಯದ ಮೇರೆಗೆ ಪರಿಶೀಲನೆ ನಡೆಸಿದಾಗ ಸ್ಪೇಸ್ಎಕ್ಸ್ ರಾಕೆಟ್ ಎಂಜಿನ್ಗಳಿಗೆ ದ್ರವ ಆಮ್ಲಜನಕವನ್ನು ಸಾಗಿಸುವ ಆಕ್ಸಿಡೈಸರ್ ಲೈನ್ಗಳಲ್ಲಿ ಸೋರಿಕೆಯಾಗುತ್ತಿರುವುದು ಮತ್ತು ಬಿರುಕು ಬಿಟ್ಟಿರುವುದು ಪತ್ತೆಯಾಗಿತ್ತು ಎಂದು ನಾರಾಯಣ್ ತಿಳಿಸಿದ್ದಾರೆ.</p>.<p>‘ಬಿರುಕಿನೊಂದಿಗೆ ರಾಕೆಟ್ ಉಡಾವಣೆಯಾಗಿದ್ದರೆ ಕಂಪನಗಳೊಂದಿಗೆ ಅದು ಮೇಲಕ್ಕೇರುವಾಗಲೇ ದಾರಿ ತಪ್ಪುವ ಆತಂಕವಿತ್ತು. ಹಾಗೆ ಆಗಿದ್ದಿದ್ದರೆ ತಪ್ಪಿದ್ದರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು’ ಎಂದು ನಾರಾಯಣ್ ತಿಳಿಸಿದ್ದಾರೆ. </p>.<p class="title">‘ಬಿರುಕನ್ನು ಕಂಡು ಸ್ಪೇಸ್ಎಕ್ಸ್ ಆಶ್ಚರ್ಯಪಟ್ಟಿತ್ತು. ಅಂತಿಮವಾಗಿ ಎಲ್ಲವನ್ನೂ ಸರಿಪಡಿಸಲಾಗಿತ್ತು. ಈ ವಿಷಯವನ್ನು ಸ್ವಲ್ಪ ಹಗುರವಾಗಿ ತೆಗೆದುಕೊಂಡರು. ದ್ರವ್ಯ ಆಮ್ಲಜನಕ ಚಾಲಿತ ಎಂಜಿನ್ ಮೇಲೆ ಕೆಲಸ ಮಾಡುತ್ತಿರುವ ಇಸ್ರೊ ಇದನ್ನು ಸಂಪೂರ್ಣ ಸರಿಪಡಿಸುವಂತೆ ಸ್ಪೇಸ್ಎಕ್ಸ್ಗೆ ಒತ್ತಾಯಿಸಿತ್ತು. ಆ ಮೂಲಕ ನಾಲ್ಕು ಗಗನಯಾತ್ರಿಗಳ ಜೀವ ಉಳಿಸಿದ್ದೇವೆ’ ಎಂದು ನಾರಾಯಣ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಫಾಲ್ಕನ್ 9’ ರಾಕೆಟ್ನಲ್ಲಿನ ದ್ರವ್ಯ ಆಮ್ಲಜನಕ ಸೋರಿಕೆ ವಿಷಯವನ್ನು ಸ್ಪೇಸ್ಎಕ್ಸ್ ಲಘುವಾಗಿ ತೆಗದುಕೊಂಡಿತ್ತು. ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳ ಜೀವವನ್ನು ಅಪಾಯಕ್ಕೆ ತಳ್ಳಿತ್ತು ಎಂದು ಇಸ್ರೊ ಮುಖ್ಯಸ್ಥ ವಿ. ನಾರಾಯಣ್ ಗುರುವಾರ ತಿಳಿಸಿದ್ದಾರೆ.</p>.<p>ಇಸ್ರೊ ಎಂಜಿನಿಯರ್ಗಳ ಒತ್ತಾಯದ ಮೇರೆಗೆ ಪರಿಶೀಲನೆ ನಡೆಸಿದಾಗ ಸ್ಪೇಸ್ಎಕ್ಸ್ ರಾಕೆಟ್ ಎಂಜಿನ್ಗಳಿಗೆ ದ್ರವ ಆಮ್ಲಜನಕವನ್ನು ಸಾಗಿಸುವ ಆಕ್ಸಿಡೈಸರ್ ಲೈನ್ಗಳಲ್ಲಿ ಸೋರಿಕೆಯಾಗುತ್ತಿರುವುದು ಮತ್ತು ಬಿರುಕು ಬಿಟ್ಟಿರುವುದು ಪತ್ತೆಯಾಗಿತ್ತು ಎಂದು ನಾರಾಯಣ್ ತಿಳಿಸಿದ್ದಾರೆ.</p>.<p>‘ಬಿರುಕಿನೊಂದಿಗೆ ರಾಕೆಟ್ ಉಡಾವಣೆಯಾಗಿದ್ದರೆ ಕಂಪನಗಳೊಂದಿಗೆ ಅದು ಮೇಲಕ್ಕೇರುವಾಗಲೇ ದಾರಿ ತಪ್ಪುವ ಆತಂಕವಿತ್ತು. ಹಾಗೆ ಆಗಿದ್ದಿದ್ದರೆ ತಪ್ಪಿದ್ದರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು’ ಎಂದು ನಾರಾಯಣ್ ತಿಳಿಸಿದ್ದಾರೆ. </p>.<p class="title">‘ಬಿರುಕನ್ನು ಕಂಡು ಸ್ಪೇಸ್ಎಕ್ಸ್ ಆಶ್ಚರ್ಯಪಟ್ಟಿತ್ತು. ಅಂತಿಮವಾಗಿ ಎಲ್ಲವನ್ನೂ ಸರಿಪಡಿಸಲಾಗಿತ್ತು. ಈ ವಿಷಯವನ್ನು ಸ್ವಲ್ಪ ಹಗುರವಾಗಿ ತೆಗೆದುಕೊಂಡರು. ದ್ರವ್ಯ ಆಮ್ಲಜನಕ ಚಾಲಿತ ಎಂಜಿನ್ ಮೇಲೆ ಕೆಲಸ ಮಾಡುತ್ತಿರುವ ಇಸ್ರೊ ಇದನ್ನು ಸಂಪೂರ್ಣ ಸರಿಪಡಿಸುವಂತೆ ಸ್ಪೇಸ್ಎಕ್ಸ್ಗೆ ಒತ್ತಾಯಿಸಿತ್ತು. ಆ ಮೂಲಕ ನಾಲ್ಕು ಗಗನಯಾತ್ರಿಗಳ ಜೀವ ಉಳಿಸಿದ್ದೇವೆ’ ಎಂದು ನಾರಾಯಣ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>