<p><strong>ಅಯೋಧ್ಯೆ:</strong> ಐನೂರು ವರ್ಷಗಳ ಕಾಯುವಿಕೆಯ ನಂತರ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅಯೋಧ್ಯೆಯಲ್ಲಿ ನಡೆದಿದೆ, ಇಡೀ ದೇಶವು ರಾಮಮಯ ಆಗಿದೆ, ತ್ರೇತಾಯುಗಕ್ಕೆ ಮತ್ತೆ ಕಾಲಿಟ್ಟಂತೆ ಅನಿಸುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೋಮವಾರ ಹೇಳಿದರು.</p>.<p>ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಆದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇದು ನಮ್ಮೆಲ್ಲರಿಗೂ ಭಾವನಾತ್ಮಕ ಸಂದರ್ಭ’ ಎಂದರು.</p>.<p>ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿರುವುದರಿಂದ ರಾಮ ರಾಜ್ಯದ ಘೋಷಣೆ ಆದಂತಾಗಿದೆ ಎಂದು ಅವರು ಹೇಳಿದರು. ಇನ್ನು ಮುಂದೆ ಅಯೋಧ್ಯೆಯ ಬೀದಿಗಳಲ್ಲಿ ಗುಂಡಿನ ಸದ್ದು ಕೇಳುವುದಿಲ್ಲ, ಕರ್ಫ್ಯೂ ಹೇರುವ ಸಂದರ್ಭ ಇರುವುದಿಲ್ಲ ಎಂದು ಅವರು ಹೇಳಿದರು.</p>.<p>ರಾಮ ಮಂದಿರವನ್ನು ಅವರು ರಾಷ್ಟ್ರ ಮಂದಿರ ಎಂದು ಕರೆದರು. ಬಾಲರಾಮನ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ನಡೆದಿರುವುದು ಐತಿಹಾಸಿಕ ಸಂದರ್ಭ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದರು.</p>.<p>ದೇಶದ ಬಹುಸಂಖ್ಯಾತ ಸಮುದಾಯದ ಜನ ತಮ್ಮದೇ ದೇಶದಲ್ಲಿ, ತಮ್ಮ ದೇವರ ಜನ್ಮಸ್ಥಳದಲ್ಲಿ ಮಂದಿರ ನಿರ್ಮಿಸಲು ಸರಿಸುಮಾರು 500 ವರ್ಷ ಕಾಯ್ದ ನಿದರ್ಶನ ವಿಶ್ವದಲ್ಲಿ ಇದೊಂದೇ ಇರಬೇಕು ಎಂದು ಯೋಗಿ ಆದಿತ್ಯನಾಥ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಯೋಧ್ಯೆ:</strong> ಐನೂರು ವರ್ಷಗಳ ಕಾಯುವಿಕೆಯ ನಂತರ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅಯೋಧ್ಯೆಯಲ್ಲಿ ನಡೆದಿದೆ, ಇಡೀ ದೇಶವು ರಾಮಮಯ ಆಗಿದೆ, ತ್ರೇತಾಯುಗಕ್ಕೆ ಮತ್ತೆ ಕಾಲಿಟ್ಟಂತೆ ಅನಿಸುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೋಮವಾರ ಹೇಳಿದರು.</p>.<p>ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಆದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇದು ನಮ್ಮೆಲ್ಲರಿಗೂ ಭಾವನಾತ್ಮಕ ಸಂದರ್ಭ’ ಎಂದರು.</p>.<p>ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿರುವುದರಿಂದ ರಾಮ ರಾಜ್ಯದ ಘೋಷಣೆ ಆದಂತಾಗಿದೆ ಎಂದು ಅವರು ಹೇಳಿದರು. ಇನ್ನು ಮುಂದೆ ಅಯೋಧ್ಯೆಯ ಬೀದಿಗಳಲ್ಲಿ ಗುಂಡಿನ ಸದ್ದು ಕೇಳುವುದಿಲ್ಲ, ಕರ್ಫ್ಯೂ ಹೇರುವ ಸಂದರ್ಭ ಇರುವುದಿಲ್ಲ ಎಂದು ಅವರು ಹೇಳಿದರು.</p>.<p>ರಾಮ ಮಂದಿರವನ್ನು ಅವರು ರಾಷ್ಟ್ರ ಮಂದಿರ ಎಂದು ಕರೆದರು. ಬಾಲರಾಮನ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ನಡೆದಿರುವುದು ಐತಿಹಾಸಿಕ ಸಂದರ್ಭ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದರು.</p>.<p>ದೇಶದ ಬಹುಸಂಖ್ಯಾತ ಸಮುದಾಯದ ಜನ ತಮ್ಮದೇ ದೇಶದಲ್ಲಿ, ತಮ್ಮ ದೇವರ ಜನ್ಮಸ್ಥಳದಲ್ಲಿ ಮಂದಿರ ನಿರ್ಮಿಸಲು ಸರಿಸುಮಾರು 500 ವರ್ಷ ಕಾಯ್ದ ನಿದರ್ಶನ ವಿಶ್ವದಲ್ಲಿ ಇದೊಂದೇ ಇರಬೇಕು ಎಂದು ಯೋಗಿ ಆದಿತ್ಯನಾಥ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>