<p><strong>ಬೆಂಗಳೂರು:</strong> ಚತ್ತೀಸಗಡದಲ್ಲಿಸಂಪುಟ ಸಚಿವ ಮೊಹಮ್ಮದ್ ಅಕ್ಬರ್ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಮೊಳಗುವಾಗ ತ್ರಿವರ್ಣ ಧ್ವಜಕ್ಕೆ ವಂದಿಸದಿರುವ ವಿಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ದೇಶದ್ರೋಹಿ ಎಂಬ ಹಣೆಪಟ್ಟಿ ನೀಡಿ ನೆಟ್ಟಿಗರು ಅಕ್ಬರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.</p>.<p>ಅಷ್ಟಕ್ಕೂ ರಾಷ್ಟ್ರಧ್ವಜಕ್ಕೆ ವಂದಿಸುವುದು ಕಡ್ಡಾಯವೇ? ಆ ಕುರಿತು ರಾಷ್ಟ್ರಧ್ವಜ ಸಂಹಿತೆ ಏನು ಹೇಳುತ್ತದೆ? ಇಲ್ಲಿದೆ ವಿವರ.</p>.<p>ತ್ರಿವರ್ಣ ಧ್ವಜ ನಮ್ಮೆದುರಿಗೆ ಹಾರುತ್ತಿದ್ದರೆ, ನಮಗೆ ತಿಳಿಯದಂತೆ ರಾಷ್ಟ್ರ ಭಕ್ತಿ ನಮ್ಮೊಳಗೆ ಜಾಗೃತವಾಗುತ್ತದೆ. ಆದರೆ, ಅದಕ್ಕಾಗಿ ರೂಪಿಸಿರುವ ನಿಯಮಗಳ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ.</p>.<p><strong><span style="color:#B22222;">ಇದನ್ನೂ ಓದಿ</span>:<a href="https://www.prajavani.net/district/mysore/method-used-flag-565328.html" target="_blank">ತಿರಂಗ ಧ್ವಜ ಬಳಸುವ ಕ್ರಮ</a></strong></p>.<p>2002ಕ್ಕಿಂತ ಮೊದಲು ಕೇವಲ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಕಾರ್ಯಕ್ರಮಗಳಲ್ಲಿ ಮಾತ್ರ ಧ್ವಜಾರೋಹಣ ಮಾಡಲು ಅನುಮತಿ ಇತ್ತು. ಗೃಹ ಸಚಿವಾಲಯಧ್ವಜ ಸಂಹಿತೆಯ ರೂಪಿಸಿದ ನಂತರ ಎಲ್ಲಾ ದಿನಗಳಲ್ಲಿಯೂ ರಾಷ್ಟ್ರಧ್ವಜ ಹಾರಿಸಲು ಸಾಧ್ಯವಾಯಿತು.</p>.<p>ಚತ್ತೀಸಗಡದಲ್ಲಿ ಗಣರಾಜ್ಯೋತ್ಸವದ ವೇಳೆ ಸಚಿವ ರಾಷ್ಟ್ರಧ್ವಜಕ್ಕೆ ನಮಿಸದಿರುವ ವಿಡಿಯೊವೊಂದನ್ನು ಸಮೀರ್ ಮಹೇಶ್ವರಿ ಎಂಬುವವರು ಟ್ವಿಟ್ಟರ್ನಲ್ಲಿ ಪ್ರಕಟಿಸಿ, ‘ಇವರು ಚತ್ತೀಸಗಡದ ಕಾಂಗ್ರೆಸ್ ಸಚಿವ ಮೊಹಮ್ಮದ್ ಅಕ್ಬರ್, ಇವರಿಗೆ ರಾಷ್ಟ್ರಧ್ವಜಕ್ಕೆ ವಂದಿಸಬೇಕು ಎಂಬುದೂ ತಿಳಿದಿಲ್ಲ’ ಎನ್ನುವ ಟಿಪ್ಪಣಿ ಬರೆದುಕೊಂಡಿದ್ದರು. ಈ ಟ್ವಿಟ್ ಅನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದರು ಹಾಗೂ 900 ಮಂದಿ ಅದನ್ನು ಮರು ಟ್ವೀಟ್ ಮಾಡಿಕೊಂಡಿದ್ದರು.ಅಲ್ಲಿನ ಬಿಜೆಪಿ ನಾಯಕರು ಅಕ್ಬರ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.</p>.<p>ಧ್ವಜ ಸಂಹಿತೆಯ ಪ್ರಕಾರ, ರಾಷ್ಟ್ರಧ್ವಜವನ್ನು ಹಾರಿಸುವಾಗ , ಇಳಿಸುವಾಗಅಥವಾ ಪರೇಡ್ ಹೋಗುತ್ತಿರುವಾಗ ಅಲ್ಲಿ ನೆರೆದಿರುವ ಜನರು ನೇರವಾಗಿ ನಿಂತು ಗೌರವ ನೀಡಬೇಕು. ಸಮವಸ್ತ್ರ ಧರಿಸಿದವರು ಕಡ್ಡಾಯವಾಗಿಸೆಲ್ಯೂಟ್ ಮಾಡಬೇಕು.</p>.<p><strong>ಇವುಗಳ ಜೊತೆಗೆ ಧ್ವಜ ಸಂಹಿತೆಯಲ್ಲಿ ಇರುವ ಇನ್ನು ಕೆಲವು ಪ್ರಮುಖ ಅಂಶಗಳೆಂದರೆ:</strong></p>.<p>* ಉಣ್ಣೆ, ಹತ್ತಿ, ರೇಷ್ಮೆ ಅಥವಾ ಖಾದಿಯನ್ನು ಕೈಯಿಂದ ನೇಯ್ದು ಧ್ವಜವನ್ನು ಮಾಡಬೇಕು. ಧ್ವಜ ಆಯತಾಕಾರವಾಗಿರಬೇಕು. ಅದರ ಉದ್ದ ಮತ್ತು ಅಗಲದ ಅನುಪಾತ 3: 2 ಆಗಿರಬೇಕು.</p>.<p><strong><span style="color:#B22222;">ಇದನ್ನೂ ಓದಿ</span>:<a href="https://www.prajavani.net/article/%E2%80%98%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B2%A7%E0%B3%8D%E0%B2%B5%E0%B2%9C%E2%80%99%E0%B2%B5%E0%B3%87-%E0%B2%8E%E0%B2%B2%E0%B3%8D%E0%B2%B2-%E0%B2%B2%E0%B2%BE%E0%B2%AD-%E0%B2%B2%E0%B3%86%E0%B2%95%E0%B3%8D%E0%B2%95%E0%B2%BE%E0%B2%9A%E0%B2%BE%E0%B2%B0-%E0%B2%87%E0%B2%B2%E0%B3%8D%E0%B2%B2%E0%B2%BF%E0%B2%B2%E0%B3%8D%E0%B2%B2" target="_blank">‘ರಾಷ್ಟ್ರಧ್ವಜ’ವೇ ಎಲ್ಲ; ಲಾಭ ಲೆಕ್ಕಾಚಾರ ಇಲ್ಲಿಲ್ಲ!</a></strong></p>.<p>* ಧ್ವಜವನ್ನು ಯಾವುದೇ ಕಾರಣಕ್ಕೂ ನೆಲದ ಮೇಲಿಡಬಾರದು. ಸರ್ಕಾರದ ಆದೇಶವಿದ್ದಾಗ ಮಾತ್ರ ಧ್ವಜವನ್ನುಅರ್ಧಕ್ಕೆ ಹಾರಿಸಲಾಗುತ್ತದೆ. ಕೇಸರಿ ಬಣ್ಣದ ಪಟ್ಟಿಯನ್ನು ಕೆಳಕ್ಕೆ ಮಾಡಿ ಧ್ವಜಾರೋಹಣ ಮಾಡಬಾರದು.</p>.<p>*ಹಾನಿಯಾದಧ್ವಜವನ್ನು ಹಾರಿಸಬಾರದು. ಧ್ವಜಕ್ಕೆ ಹಾನಿಯುಂಟು ಮಾಡಿದರೆ ಅಥವಾ ಮೌಖಿಕವಾಗಿ, ಲಿಖಿತವಾಗಿ ನಿಂದಿಸಿದರೆ ಮೂರು ವರ್ಷ ಜೈಲು ಶಿಕ್ಷೆ/ ದಂಡ ಅಥವಾ ಎರಡನ್ನು ವಿಧಿಸಬಹುದು.</p>.<p><strong><span style="color:#B22222;">ಇದನ್ನೂ ಓದಿ</span>:<a href="https://www.prajavani.net/stories/national/amit-shah-causes-%E2%80%98disaster%E2%80%99-565919.html" target="_blank">ಅಮಿತ್ ಶಾ ಎಡವಟ್ಟಿನಿಂದ ಕೆಳಬಿದ್ದ ರಾಷ್ಟ್ರಧ್ವಜ</a></strong></p>.<p>* ತ್ರಿವರ್ಣ ಧ್ವಜದಿಂದ ಮಾಡಲಾದ ಸಮವಸ್ತ್ರವನ್ನು ಧರಿಸುವುದು ನಿಷಿದ್ಧ. ಸೊಂಟದ ಕೆಳಗೆ ತ್ರಿವರ್ಣಧ್ವಜದ ಬಟ್ಟೆಯನ್ನು ಧರಿಸುವುದು ಕೂಡ ಧ್ವಜಕ್ಕೆ ಮಾಡುವ ಅಪಮಾನವಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಚತ್ತೀಸಗಡದಲ್ಲಿಸಂಪುಟ ಸಚಿವ ಮೊಹಮ್ಮದ್ ಅಕ್ಬರ್ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಮೊಳಗುವಾಗ ತ್ರಿವರ್ಣ ಧ್ವಜಕ್ಕೆ ವಂದಿಸದಿರುವ ವಿಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ದೇಶದ್ರೋಹಿ ಎಂಬ ಹಣೆಪಟ್ಟಿ ನೀಡಿ ನೆಟ್ಟಿಗರು ಅಕ್ಬರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.</p>.<p>ಅಷ್ಟಕ್ಕೂ ರಾಷ್ಟ್ರಧ್ವಜಕ್ಕೆ ವಂದಿಸುವುದು ಕಡ್ಡಾಯವೇ? ಆ ಕುರಿತು ರಾಷ್ಟ್ರಧ್ವಜ ಸಂಹಿತೆ ಏನು ಹೇಳುತ್ತದೆ? ಇಲ್ಲಿದೆ ವಿವರ.</p>.<p>ತ್ರಿವರ್ಣ ಧ್ವಜ ನಮ್ಮೆದುರಿಗೆ ಹಾರುತ್ತಿದ್ದರೆ, ನಮಗೆ ತಿಳಿಯದಂತೆ ರಾಷ್ಟ್ರ ಭಕ್ತಿ ನಮ್ಮೊಳಗೆ ಜಾಗೃತವಾಗುತ್ತದೆ. ಆದರೆ, ಅದಕ್ಕಾಗಿ ರೂಪಿಸಿರುವ ನಿಯಮಗಳ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ.</p>.<p><strong><span style="color:#B22222;">ಇದನ್ನೂ ಓದಿ</span>:<a href="https://www.prajavani.net/district/mysore/method-used-flag-565328.html" target="_blank">ತಿರಂಗ ಧ್ವಜ ಬಳಸುವ ಕ್ರಮ</a></strong></p>.<p>2002ಕ್ಕಿಂತ ಮೊದಲು ಕೇವಲ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಕಾರ್ಯಕ್ರಮಗಳಲ್ಲಿ ಮಾತ್ರ ಧ್ವಜಾರೋಹಣ ಮಾಡಲು ಅನುಮತಿ ಇತ್ತು. ಗೃಹ ಸಚಿವಾಲಯಧ್ವಜ ಸಂಹಿತೆಯ ರೂಪಿಸಿದ ನಂತರ ಎಲ್ಲಾ ದಿನಗಳಲ್ಲಿಯೂ ರಾಷ್ಟ್ರಧ್ವಜ ಹಾರಿಸಲು ಸಾಧ್ಯವಾಯಿತು.</p>.<p>ಚತ್ತೀಸಗಡದಲ್ಲಿ ಗಣರಾಜ್ಯೋತ್ಸವದ ವೇಳೆ ಸಚಿವ ರಾಷ್ಟ್ರಧ್ವಜಕ್ಕೆ ನಮಿಸದಿರುವ ವಿಡಿಯೊವೊಂದನ್ನು ಸಮೀರ್ ಮಹೇಶ್ವರಿ ಎಂಬುವವರು ಟ್ವಿಟ್ಟರ್ನಲ್ಲಿ ಪ್ರಕಟಿಸಿ, ‘ಇವರು ಚತ್ತೀಸಗಡದ ಕಾಂಗ್ರೆಸ್ ಸಚಿವ ಮೊಹಮ್ಮದ್ ಅಕ್ಬರ್, ಇವರಿಗೆ ರಾಷ್ಟ್ರಧ್ವಜಕ್ಕೆ ವಂದಿಸಬೇಕು ಎಂಬುದೂ ತಿಳಿದಿಲ್ಲ’ ಎನ್ನುವ ಟಿಪ್ಪಣಿ ಬರೆದುಕೊಂಡಿದ್ದರು. ಈ ಟ್ವಿಟ್ ಅನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದರು ಹಾಗೂ 900 ಮಂದಿ ಅದನ್ನು ಮರು ಟ್ವೀಟ್ ಮಾಡಿಕೊಂಡಿದ್ದರು.ಅಲ್ಲಿನ ಬಿಜೆಪಿ ನಾಯಕರು ಅಕ್ಬರ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.</p>.<p>ಧ್ವಜ ಸಂಹಿತೆಯ ಪ್ರಕಾರ, ರಾಷ್ಟ್ರಧ್ವಜವನ್ನು ಹಾರಿಸುವಾಗ , ಇಳಿಸುವಾಗಅಥವಾ ಪರೇಡ್ ಹೋಗುತ್ತಿರುವಾಗ ಅಲ್ಲಿ ನೆರೆದಿರುವ ಜನರು ನೇರವಾಗಿ ನಿಂತು ಗೌರವ ನೀಡಬೇಕು. ಸಮವಸ್ತ್ರ ಧರಿಸಿದವರು ಕಡ್ಡಾಯವಾಗಿಸೆಲ್ಯೂಟ್ ಮಾಡಬೇಕು.</p>.<p><strong>ಇವುಗಳ ಜೊತೆಗೆ ಧ್ವಜ ಸಂಹಿತೆಯಲ್ಲಿ ಇರುವ ಇನ್ನು ಕೆಲವು ಪ್ರಮುಖ ಅಂಶಗಳೆಂದರೆ:</strong></p>.<p>* ಉಣ್ಣೆ, ಹತ್ತಿ, ರೇಷ್ಮೆ ಅಥವಾ ಖಾದಿಯನ್ನು ಕೈಯಿಂದ ನೇಯ್ದು ಧ್ವಜವನ್ನು ಮಾಡಬೇಕು. ಧ್ವಜ ಆಯತಾಕಾರವಾಗಿರಬೇಕು. ಅದರ ಉದ್ದ ಮತ್ತು ಅಗಲದ ಅನುಪಾತ 3: 2 ಆಗಿರಬೇಕು.</p>.<p><strong><span style="color:#B22222;">ಇದನ್ನೂ ಓದಿ</span>:<a href="https://www.prajavani.net/article/%E2%80%98%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B2%A7%E0%B3%8D%E0%B2%B5%E0%B2%9C%E2%80%99%E0%B2%B5%E0%B3%87-%E0%B2%8E%E0%B2%B2%E0%B3%8D%E0%B2%B2-%E0%B2%B2%E0%B2%BE%E0%B2%AD-%E0%B2%B2%E0%B3%86%E0%B2%95%E0%B3%8D%E0%B2%95%E0%B2%BE%E0%B2%9A%E0%B2%BE%E0%B2%B0-%E0%B2%87%E0%B2%B2%E0%B3%8D%E0%B2%B2%E0%B2%BF%E0%B2%B2%E0%B3%8D%E0%B2%B2" target="_blank">‘ರಾಷ್ಟ್ರಧ್ವಜ’ವೇ ಎಲ್ಲ; ಲಾಭ ಲೆಕ್ಕಾಚಾರ ಇಲ್ಲಿಲ್ಲ!</a></strong></p>.<p>* ಧ್ವಜವನ್ನು ಯಾವುದೇ ಕಾರಣಕ್ಕೂ ನೆಲದ ಮೇಲಿಡಬಾರದು. ಸರ್ಕಾರದ ಆದೇಶವಿದ್ದಾಗ ಮಾತ್ರ ಧ್ವಜವನ್ನುಅರ್ಧಕ್ಕೆ ಹಾರಿಸಲಾಗುತ್ತದೆ. ಕೇಸರಿ ಬಣ್ಣದ ಪಟ್ಟಿಯನ್ನು ಕೆಳಕ್ಕೆ ಮಾಡಿ ಧ್ವಜಾರೋಹಣ ಮಾಡಬಾರದು.</p>.<p>*ಹಾನಿಯಾದಧ್ವಜವನ್ನು ಹಾರಿಸಬಾರದು. ಧ್ವಜಕ್ಕೆ ಹಾನಿಯುಂಟು ಮಾಡಿದರೆ ಅಥವಾ ಮೌಖಿಕವಾಗಿ, ಲಿಖಿತವಾಗಿ ನಿಂದಿಸಿದರೆ ಮೂರು ವರ್ಷ ಜೈಲು ಶಿಕ್ಷೆ/ ದಂಡ ಅಥವಾ ಎರಡನ್ನು ವಿಧಿಸಬಹುದು.</p>.<p><strong><span style="color:#B22222;">ಇದನ್ನೂ ಓದಿ</span>:<a href="https://www.prajavani.net/stories/national/amit-shah-causes-%E2%80%98disaster%E2%80%99-565919.html" target="_blank">ಅಮಿತ್ ಶಾ ಎಡವಟ್ಟಿನಿಂದ ಕೆಳಬಿದ್ದ ರಾಷ್ಟ್ರಧ್ವಜ</a></strong></p>.<p>* ತ್ರಿವರ್ಣ ಧ್ವಜದಿಂದ ಮಾಡಲಾದ ಸಮವಸ್ತ್ರವನ್ನು ಧರಿಸುವುದು ನಿಷಿದ್ಧ. ಸೊಂಟದ ಕೆಳಗೆ ತ್ರಿವರ್ಣಧ್ವಜದ ಬಟ್ಟೆಯನ್ನು ಧರಿಸುವುದು ಕೂಡ ಧ್ವಜಕ್ಕೆ ಮಾಡುವ ಅಪಮಾನವಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>