ಮುಂಬೈ: ಐಟಿಸಿ ಮುಖ್ಯಸ್ಥ ಹಾಗೂ ಕೈಗಾರಿಕೋದ್ಯಮಿ ವೈ.ಸಿ.ದೇವೇಶ್ವರ್ ಶನಿವಾರ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ದೇವೇಶ್ವರ್ ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ ಅವರಿಗೆ 72 ವರ್ಷ ವಯಸ್ಸಾಗಿತ್ತು.
1968ರಲ್ಲಿ ದೇವೆಶ್ವರ್ ಐಟಿಸಿ ಕಂಪೆನಿಯನ್ನು ಸೇರಿದ್ದರು. 1996ರಲ್ಲಿ ಕಂಪೆನಿಯ ಮುಖ್ಯಸ್ಥರಾಗಿ ನಂತರ ಸಿಇಒ ಆಗಿಯೂ ಅವರು ಕೆಲಸ ಮಾಡಿದ್ದರು.
2011ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.
ದೇವೇಶ್ವರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಜಾಗತಿಕವಾಗಿ ಐಟಿಸಿ ಕಂಪೆನಿಗೆ ಜನಪ್ರಿಯತೆ ತಂದುಕೊಟ್ಟ ಕೀರ್ತಿ ಅವರದ್ದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.