<p><strong>ಶ್ರೀನಗರ</strong>: ವಕ್ಫ್ ಕಾಯ್ದೆ ವಿಚಾರವಾಗಿ ಸತತ ಎರಡನೇ ದಿನವೂ ಜಮ್ಮು–ಕಾಶ್ಮೀರ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಕಾಯ್ದೆ ಕುರಿತು ಚರ್ಚೆಗೆ ಆಗ್ರಹಿಸಿ ಸ್ಪೀಕರ್ ವಿರುದ್ಧವೇ ಆಡಳಿತಾರೂಢ ಪಕ್ಷದ ಸದಸ್ಯರು ಹಾಗೂ ಪ್ರತಿಪಕ್ಷಗಳ ಶಾಸಕರು ಪ್ರತಿಭಟಿಸಿ, ಗದ್ದಲ ಸೃಷ್ಟಿಸಿದ ಪರಿಣಾಮ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿದೆ.</p>.<p>ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಶ್ನಾವಳಿ ಅವಧಿಗೂ ಅವಕಾಶ ನೀಡದೇ ಆಡಳಿತಾರೂಢ ಎನ್ಸಿ ಸದಸ್ಯರಾದ ಸಲ್ಮಾನ್ ಸಾಗರ್, ಸೇರಿದಂತೆ ಹಲವು ನಾಯಕರು ಹಾಗೂ ಪ್ರತಿಪಕ್ಷಗಳ ಶಾಸಕರು ಪ್ರತಿಭಟಿಸಿದ ಪರಿಣಾಮ 2 ಬಾರಿ ಕಲಾಪ ಮುಂದೂಡಲಾಗಿತ್ತು. </p>.<p>ಸದನ ಮತ್ತೆ ಸೇರುತ್ತಿದ್ದಂತೆಯೇ ವಿಪಕ್ಷಗಳ ಶಾಸಕರು ವಕ್ಫ್ ಕಾಯ್ದೆಯನ್ನು‘ ಕರಾಳ ಕಾಯ್ದೆ’ ಎಂದು ಬಣ್ಣಿಸಿ, ಮುಸ್ಲಿಂ ಬಾಹುಳ್ಯದ ಜಮ್ಮು–ಕಾಶ್ಮೀರ ವಿಧಾನಸಭೆಯಲ್ಲಿ ಕಾಯ್ದೆ ಕುರಿತ ಚರ್ಚೆ ಅಗತ್ಯವೆಂದೂ ಪ್ರತಿಪಾದಿಸಿದರು.</p>.<p>ಜತೆಗೆ ಸ್ಪೀಕರ್ ವಿರುದ್ಧ ಘೋಷಣೆ ಕೂಗುವ ರೀತಿ ಆಡಳಿತಾರೂಢ ಪಕ್ಷಗಳ ಶಾಸಕರು ನಾಟಕ ಮಾಡುತ್ತಿದ್ದಾರೆ. ಅವರಿಗೆ ಮುಸ್ಲಿಮರ ಹಕ್ಕುಗಳ ಬಗ್ಗೆ ಕಾಳಜಿ ಇದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಿ ಸ್ಪೀಕರ್ರನ್ನು ಬದಲಿಸಲಿ ಎಂದೂ ಆಗ್ರಹಿಸಿದರು.</p>.<p>ಏತನ್ಮಧ್ಯೆ, ಪಿಡಿಪಿ ಶಾಸಕ ವಹೀದ್ ಪರ್ರಾ ಅವರು ಸದನದ ಬಾವಿಗಿಳಿದು ವಕ್ಫ್ ಕಾಯ್ದೆ ವಿರುದ್ಧ ತಮ್ಮ ಪಕ್ಷ ರೂಪಿಸಿರುವ ನಿರ್ಣಯವನ್ನು ಅಂಗೀಕರಿಸುವಂತೆ ಆಗ್ರಹಿಸಿದ ಪರಿಣಾಮ ಗದ್ದಲ ಹೆಚ್ಚಾಯಿತು.</p>.<p>ಈ ಹಿನ್ನೆಲೆಯಲ್ಲಿ ವಹೀದ್ರನ್ನು ಸದನದಿಂದ ಹೊರಗಟ್ಟಲು ಮಾಷರ್ಲ್ಗಳಿಗೆ ಆದೇಶಿಸಿದ ಸ್ಪೀಕರ್, ‘ಸಂಸತ್ತಿನಲ್ಲಿ ಈಗಾಗಲೇ ಅಂಗೀಕಾರ ಪಡೆದಿರುವ ವಿಚಾರವನ್ನು ಅಳಿಸಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ಚರ್ಚೆಗೆ ಅವಕಾಶ ನೀಡಲಾಗದು’ ಎಂದು ಸ್ಪಷ್ಟಪಡಿಸಿ ದಿನದ ಮಟ್ಟಿಗೆ ಕಲಾಪ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ವಕ್ಫ್ ಕಾಯ್ದೆ ವಿಚಾರವಾಗಿ ಸತತ ಎರಡನೇ ದಿನವೂ ಜಮ್ಮು–ಕಾಶ್ಮೀರ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಕಾಯ್ದೆ ಕುರಿತು ಚರ್ಚೆಗೆ ಆಗ್ರಹಿಸಿ ಸ್ಪೀಕರ್ ವಿರುದ್ಧವೇ ಆಡಳಿತಾರೂಢ ಪಕ್ಷದ ಸದಸ್ಯರು ಹಾಗೂ ಪ್ರತಿಪಕ್ಷಗಳ ಶಾಸಕರು ಪ್ರತಿಭಟಿಸಿ, ಗದ್ದಲ ಸೃಷ್ಟಿಸಿದ ಪರಿಣಾಮ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿದೆ.</p>.<p>ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಶ್ನಾವಳಿ ಅವಧಿಗೂ ಅವಕಾಶ ನೀಡದೇ ಆಡಳಿತಾರೂಢ ಎನ್ಸಿ ಸದಸ್ಯರಾದ ಸಲ್ಮಾನ್ ಸಾಗರ್, ಸೇರಿದಂತೆ ಹಲವು ನಾಯಕರು ಹಾಗೂ ಪ್ರತಿಪಕ್ಷಗಳ ಶಾಸಕರು ಪ್ರತಿಭಟಿಸಿದ ಪರಿಣಾಮ 2 ಬಾರಿ ಕಲಾಪ ಮುಂದೂಡಲಾಗಿತ್ತು. </p>.<p>ಸದನ ಮತ್ತೆ ಸೇರುತ್ತಿದ್ದಂತೆಯೇ ವಿಪಕ್ಷಗಳ ಶಾಸಕರು ವಕ್ಫ್ ಕಾಯ್ದೆಯನ್ನು‘ ಕರಾಳ ಕಾಯ್ದೆ’ ಎಂದು ಬಣ್ಣಿಸಿ, ಮುಸ್ಲಿಂ ಬಾಹುಳ್ಯದ ಜಮ್ಮು–ಕಾಶ್ಮೀರ ವಿಧಾನಸಭೆಯಲ್ಲಿ ಕಾಯ್ದೆ ಕುರಿತ ಚರ್ಚೆ ಅಗತ್ಯವೆಂದೂ ಪ್ರತಿಪಾದಿಸಿದರು.</p>.<p>ಜತೆಗೆ ಸ್ಪೀಕರ್ ವಿರುದ್ಧ ಘೋಷಣೆ ಕೂಗುವ ರೀತಿ ಆಡಳಿತಾರೂಢ ಪಕ್ಷಗಳ ಶಾಸಕರು ನಾಟಕ ಮಾಡುತ್ತಿದ್ದಾರೆ. ಅವರಿಗೆ ಮುಸ್ಲಿಮರ ಹಕ್ಕುಗಳ ಬಗ್ಗೆ ಕಾಳಜಿ ಇದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಿ ಸ್ಪೀಕರ್ರನ್ನು ಬದಲಿಸಲಿ ಎಂದೂ ಆಗ್ರಹಿಸಿದರು.</p>.<p>ಏತನ್ಮಧ್ಯೆ, ಪಿಡಿಪಿ ಶಾಸಕ ವಹೀದ್ ಪರ್ರಾ ಅವರು ಸದನದ ಬಾವಿಗಿಳಿದು ವಕ್ಫ್ ಕಾಯ್ದೆ ವಿರುದ್ಧ ತಮ್ಮ ಪಕ್ಷ ರೂಪಿಸಿರುವ ನಿರ್ಣಯವನ್ನು ಅಂಗೀಕರಿಸುವಂತೆ ಆಗ್ರಹಿಸಿದ ಪರಿಣಾಮ ಗದ್ದಲ ಹೆಚ್ಚಾಯಿತು.</p>.<p>ಈ ಹಿನ್ನೆಲೆಯಲ್ಲಿ ವಹೀದ್ರನ್ನು ಸದನದಿಂದ ಹೊರಗಟ್ಟಲು ಮಾಷರ್ಲ್ಗಳಿಗೆ ಆದೇಶಿಸಿದ ಸ್ಪೀಕರ್, ‘ಸಂಸತ್ತಿನಲ್ಲಿ ಈಗಾಗಲೇ ಅಂಗೀಕಾರ ಪಡೆದಿರುವ ವಿಚಾರವನ್ನು ಅಳಿಸಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ಚರ್ಚೆಗೆ ಅವಕಾಶ ನೀಡಲಾಗದು’ ಎಂದು ಸ್ಪಷ್ಟಪಡಿಸಿ ದಿನದ ಮಟ್ಟಿಗೆ ಕಲಾಪ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>