<p><strong>ಶ್ರೀನಗರ</strong>: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಉತ್ತೇಜನ ನೀಡುತ್ತಿದ್ದ, ಪಾಕ್ ಮೂಲದ ಉಗ್ರರಿಗೆ ಸೇರಿದ್ದ ಸುಮಾರು ₹1 ಕೋಟಿ ಮೌಲ್ಯದ ಆಸ್ತಿಯನ್ನು ಪೊಲೀಸರು ಬಾರಾಮುಲ್ಲಾ ಜಿಲ್ಲೆಯಲ್ಲಿ ಜಪ್ತಿ ಮಾಡಿದ್ದಾರೆ.</p>.<p>ಸ್ಥಳೀಯ ಕೋರ್ಟ್ನಿಂದ ಜಪ್ತಿ ಆದೇಶ ಪಡೆದ ಪೊಲೀಸರು, ಸುಮಾರು ₹1 ಕೋಟಿ ಮೌಲ್ಯದ 1.125 ಎಕರೆ ವಿಸ್ತೀರ್ಣದ ಆಸ್ತಿ ವಶಕ್ಕೆ ಪಡದರು. ಇದು ಪಾಕ್ನಲ್ಲಿ ನೆಲೆಯುಳ್ಳ, ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದ್ದ ಐವರಿಗೆ ಸೇರಿದ್ದಾಗಿದೆ ಎಂದು ಹೇಳಿಕೆ ತಿಳಿಸಿದೆ.</p>.<p>ತನಿಖೆಯ ವೇಳೆ ಈ ಆಸ್ತಿಯು ಪಾಕ್ ಮೂಲದವರಿಗೆ ಸೇರಿದ್ದು ಎಂದು ತಿಳಿದುಬಂದಿತ್ತು. ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದ್ದ ಐವರನ್ನು ಬಶೀರ್ ಅಹ್ಮದ್ ಗ್ಯಾನಿ, ಮೆಹರಾಜ್ ಉದ್ ದಿನ್ ಲೋನ್, ಗುಲಾಂ ಮೊಹಮ್ಮದ್ ಯಾಟೂ, ಅಬ್ದುಲ್ ರೆಹಮಾನ್ ಮತ್ತು ಅಬ್ದುಲ್ ರಶೀದ್ ಲೋನ್ ಎಂದು ಗುರುತಿಸಲಾಗಿದೆ.</p>.<p>ಅಪರಾಧ ದಂಡಸಂಹಿತೆ ವಿಧಿ 83ರ ಅನ್ವಯ, 2008ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಉತ್ತೇಜನ ನೀಡುತ್ತಿದ್ದ, ಪಾಕ್ ಮೂಲದ ಉಗ್ರರಿಗೆ ಸೇರಿದ್ದ ಸುಮಾರು ₹1 ಕೋಟಿ ಮೌಲ್ಯದ ಆಸ್ತಿಯನ್ನು ಪೊಲೀಸರು ಬಾರಾಮುಲ್ಲಾ ಜಿಲ್ಲೆಯಲ್ಲಿ ಜಪ್ತಿ ಮಾಡಿದ್ದಾರೆ.</p>.<p>ಸ್ಥಳೀಯ ಕೋರ್ಟ್ನಿಂದ ಜಪ್ತಿ ಆದೇಶ ಪಡೆದ ಪೊಲೀಸರು, ಸುಮಾರು ₹1 ಕೋಟಿ ಮೌಲ್ಯದ 1.125 ಎಕರೆ ವಿಸ್ತೀರ್ಣದ ಆಸ್ತಿ ವಶಕ್ಕೆ ಪಡದರು. ಇದು ಪಾಕ್ನಲ್ಲಿ ನೆಲೆಯುಳ್ಳ, ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದ್ದ ಐವರಿಗೆ ಸೇರಿದ್ದಾಗಿದೆ ಎಂದು ಹೇಳಿಕೆ ತಿಳಿಸಿದೆ.</p>.<p>ತನಿಖೆಯ ವೇಳೆ ಈ ಆಸ್ತಿಯು ಪಾಕ್ ಮೂಲದವರಿಗೆ ಸೇರಿದ್ದು ಎಂದು ತಿಳಿದುಬಂದಿತ್ತು. ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದ್ದ ಐವರನ್ನು ಬಶೀರ್ ಅಹ್ಮದ್ ಗ್ಯಾನಿ, ಮೆಹರಾಜ್ ಉದ್ ದಿನ್ ಲೋನ್, ಗುಲಾಂ ಮೊಹಮ್ಮದ್ ಯಾಟೂ, ಅಬ್ದುಲ್ ರೆಹಮಾನ್ ಮತ್ತು ಅಬ್ದುಲ್ ರಶೀದ್ ಲೋನ್ ಎಂದು ಗುರುತಿಸಲಾಗಿದೆ.</p>.<p>ಅಪರಾಧ ದಂಡಸಂಹಿತೆ ವಿಧಿ 83ರ ಅನ್ವಯ, 2008ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>