<p><strong>ನವದೆಹಲಿ</strong>: ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 20 ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಶುಕ್ರವಾರ) ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್ಬಿಪಿ) ನೀಡಿ ಗೌರವಿಸಿದ್ದಾರೆ.</p><p>'ವೀರ ಬಾಲ ದಿವಸ'ದ (ಡಿ.26) ಅಂಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಾಧಕರನ್ನು ಅಭಿನಂದಿಸಿದ ಮುರ್ಮು, ಈ ಮಕ್ಕಳು ತಮ್ಮ ಕುಟುಂಬ, ಸಮುದಾಯ ಹಾಗೂ ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ.</p><p>ಪುರಸ್ಕಾರವು ದೇಶದಾದ್ಯಂತ ಇರುವ ಎಲ್ಲ ಮಕ್ಕಳಿಗೂ ಸ್ಫೂರ್ತಿ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.</p><p>'ವೀರ ಬಾಲ ದಿವಸ'ದ ಕುರಿತು ಮಾತನಾಡಿದ ಮುರ್ಮು, ಸುಮಾರು 320 ವರ್ಷಗಳ ಹಿಂದೆಯೇ ಗುರು ಗೋವಿಂದ ಸಿಂಗ್ ಹಾಗೂ ಅವರ ಮಕ್ಕಳು ಸತ್ಯ ಮತ್ತು ನ್ಯಾಯ ಕಾಪಾಡುವ ಸಲುವಾಗಿ ಮಹಾನ್ ತ್ಯಾಗ ಮಾಡಿದ್ದರು ಎಂದು ಸ್ಮರಿಸಿದ್ದಾರೆ.</p><p>ಈ ಪುರಸ್ಕಾರವನ್ನು 5ರಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಈ ವರ್ಷ 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 20 ಮಕ್ಕಳನ್ನು ಆಯ್ಕೆ ಮಾಡಲಾಗಿದೆ.</p><p>ಪುರಸ್ಕಾರವು ಪದಕ, ಪ್ರಮಾಣಪತ್ರ ಹಾಗೂ ₹ 1 ಲಕ್ಷ ನಗದನ್ನು ಒಳಗೊಂಡಿದೆ.</p>.ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಪಿಎಂ ಬಾಲ ಪುರಸ್ಕಾರ.Veer Bal Diwas 2025 | ವೀರ ಬಾಲ ದಿವಸ: ಏನಿದರ ಮಹತ್ವ?.<p><strong>'ವೀರ ಬಾಲ ದಿವಸ'ದ ಹಿನ್ನೆಲೆ ಏನು?<br></strong>10ನೇ ಸಿಖ್ ಧರ್ಮಗುರು ಗುರು ಗೋವಿಂದ ಸಿಂಗ್ ಅವರು ಮೊಘಲರ ಆಳ್ವಿಕೆ ವೇಳೆ ಸಿಖ್ ಸಮುದಾಯದ ಜನರನ್ನು ಧಾರ್ಮಿಕ ಕಿರುಕುಳದಿಂದ ರಕ್ಷಿಸುವ ಸಲುವಾಗಿ 1699ರಲ್ಲಿ ಖಾಲ್ಸಾ ಪಂಥ ಸ್ಥಾಪಿಸಿದ್ದರು.</p><p>ಖಾಲ್ಸಾದಲ್ಲಿ ಭಾಗವಹಿಸಿದ್ದ, ಗೋವಿಂದ ಸಿಂಗ್ ಅವರ ನಾಲ್ವರು ಮಕ್ಕಳನ್ನು ಮೊಘಲ್ ಸಾಮ್ರಾಟರು ಗಲ್ಲಿಗೇರಿಸಿದ್ದರು. ಆ ಮಕ್ಕಳ ಸ್ಮರಣಾರ್ಥವಾಗಿ ಡಿಸೆಂಬರ್ 26ರಂದು 'ವೀರ ಬಾಲ ದಿವಸ' ಎಂದು ಆಚರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2022ರ ಜನವರಿ 9ರಂದು ಘೋಷಿಸಿದ್ದರು.</p><p><strong>ಪುರಸ್ಕೃತರು</strong></p><p><strong><ins>ಶೌರ್ಯ</ins></strong></p><ul><li><p>ವ್ಯೋಮ ಪ್ರಿಯಾ (ಮರಣೋತ್ತರ) – ತಮಿಳುನಾಡು</p></li><li><p>ಕಮಲೇಶ್ ಕುಮಾರ್ (ಮರಣೋತ್ತರ) – ಬಿಹಾರ</p></li><li><p>ಮೊಹಮ್ಮದ್ ಸಿದಾನ್ (11 ವರ್ಷ) – ಕೇರಳ</p></li><li><p>ಅಜಯ್ ರಾಯ್ (9 ವರ್ಷ) – ಉತ್ತರ ಪ್ರದೇಶ</p></li></ul><p><strong><ins>ಕಲೆ & ಸಂಸ್ಕೃತಿ</ins></strong></p><ul><li><p>ಎಸ್ಥರ್ ಲಾಲ್ದುಹವ್ಮಿ ನಮ್ಟೆ (9 ವರ್ಷ) – ಮಿಜೋರಾಂ</p></li><li><p>ಸುಮನ್ ಸರ್ಕಾರ್ (16 ವರ್ಷ) – ಪಶ್ಚಿಮ ಬಂಗಾಳ</p></li></ul><p><strong><ins>ಪರಿಸರ</ins></strong></p><ul><li><p>ಪೂಜಾ (17 ವರ್ಷ) – ಉತ್ತರ ಪ್ರದೇಶ</p></li></ul><p><strong><ins>ಸಮಾಜ ಸೇವೆ</ins></strong></p><ul><li><p>ಶ್ರವಣ್ ಸಿಂಗ್ (10 ವರ್ಷ) – ಪಂಜಾಬ್</p></li><li><p>ವನ್ಶ್ ತಯಾಲ್ (17 ವರ್ಷ) – ಚಂಡೀಗಢ</p></li></ul><p><strong><ins>ವಿಜ್ಞಾನ & ತಂತ್ರಜ್ಞಾನ</ins></strong></p><ul><li><p>ಆಯಿಷಿ ಪ್ರಿಶಾ ಬೋರಾ (14 ವರ್ಷ) – ಅಸ್ಸಾಂ</p></li><li><p>ಆರ್ನವ್ ಅನುಪ್ರಿಯ ಮಹರ್ಷಿ (17 ವರ್ಷ) – ಮಹಾರಾಷ್ಟ್ರ</p></li></ul><p><strong><ins>ಕ್ರೀಡಾ ವಿಭಾಗ</ins></strong></p><ul><li><p>ಜ್ಯೋತಿ, ಪ್ಯಾರಾ ಅಥ್ಲೀಟ್ (17 ವರ್ಷ) – ಹರಿಯಾಣ</p></li><li><p>ಶಿವಾನಿ ಉಪ್ಪಾರ, ಪ್ಯಾರಾ ಅಥ್ಲೀಟ್ (17 ವರ್ಷ) – ಆಂಧ್ರ ಪ್ರದೇಶ</p></li><li><p>ಧಿನಿಧಿ ದೇಶಿಂಘು, ಈಜು (15 ವರ್ಷ) – ಕರ್ನಾಟಕ</p></li><li><p>ಅನುಷ್ಕಾ ಕುಮಾರಿ, ಫುಟ್ಬಾಲ್ (14 ವರ್ಷ) – ಜಾರ್ಖಂಡ್</p></li><li><p>ಯೋಗಿತಾ ಮಾಂಡವಿ, ಜೂಡೋ (14 ವರ್ಷ) – ಚತ್ತೀಸಗಢ</p></li><li><p>ಜೋಶ್ನಾ ಸಾಬರ್, ವೇಯ್ಟ್ಲಿಫ್ಟರ್ (16 ವರ್ಷ) – ಒಡಿಶಾ </p></li><li><p>ವಿ.ಎಲ್. ಪ್ರಗ್ನಿಕಾ, ಚೆಸ್ (7 ವರ್ಷ) – ಗುಜರಾತ್</p></li><li><p>ವಿಶ್ವನಾಥ್ ಪದಕಂತಿ, ಪರ್ವತಾರೋಹಿ (16 ವರ್ಷ) – ತೆಲಂಗಾಣ</p></li><li><p>ವೈಭವ್ ಸೂರ್ಯವಂಶ, ಕ್ರಿಕೆಟ್ (14 ವರ್ಷ) – ಬಿಹಾರ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 20 ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಶುಕ್ರವಾರ) ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್ಬಿಪಿ) ನೀಡಿ ಗೌರವಿಸಿದ್ದಾರೆ.</p><p>'ವೀರ ಬಾಲ ದಿವಸ'ದ (ಡಿ.26) ಅಂಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಾಧಕರನ್ನು ಅಭಿನಂದಿಸಿದ ಮುರ್ಮು, ಈ ಮಕ್ಕಳು ತಮ್ಮ ಕುಟುಂಬ, ಸಮುದಾಯ ಹಾಗೂ ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ.</p><p>ಪುರಸ್ಕಾರವು ದೇಶದಾದ್ಯಂತ ಇರುವ ಎಲ್ಲ ಮಕ್ಕಳಿಗೂ ಸ್ಫೂರ್ತಿ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.</p><p>'ವೀರ ಬಾಲ ದಿವಸ'ದ ಕುರಿತು ಮಾತನಾಡಿದ ಮುರ್ಮು, ಸುಮಾರು 320 ವರ್ಷಗಳ ಹಿಂದೆಯೇ ಗುರು ಗೋವಿಂದ ಸಿಂಗ್ ಹಾಗೂ ಅವರ ಮಕ್ಕಳು ಸತ್ಯ ಮತ್ತು ನ್ಯಾಯ ಕಾಪಾಡುವ ಸಲುವಾಗಿ ಮಹಾನ್ ತ್ಯಾಗ ಮಾಡಿದ್ದರು ಎಂದು ಸ್ಮರಿಸಿದ್ದಾರೆ.</p><p>ಈ ಪುರಸ್ಕಾರವನ್ನು 5ರಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಈ ವರ್ಷ 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 20 ಮಕ್ಕಳನ್ನು ಆಯ್ಕೆ ಮಾಡಲಾಗಿದೆ.</p><p>ಪುರಸ್ಕಾರವು ಪದಕ, ಪ್ರಮಾಣಪತ್ರ ಹಾಗೂ ₹ 1 ಲಕ್ಷ ನಗದನ್ನು ಒಳಗೊಂಡಿದೆ.</p>.ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಪಿಎಂ ಬಾಲ ಪುರಸ್ಕಾರ.Veer Bal Diwas 2025 | ವೀರ ಬಾಲ ದಿವಸ: ಏನಿದರ ಮಹತ್ವ?.<p><strong>'ವೀರ ಬಾಲ ದಿವಸ'ದ ಹಿನ್ನೆಲೆ ಏನು?<br></strong>10ನೇ ಸಿಖ್ ಧರ್ಮಗುರು ಗುರು ಗೋವಿಂದ ಸಿಂಗ್ ಅವರು ಮೊಘಲರ ಆಳ್ವಿಕೆ ವೇಳೆ ಸಿಖ್ ಸಮುದಾಯದ ಜನರನ್ನು ಧಾರ್ಮಿಕ ಕಿರುಕುಳದಿಂದ ರಕ್ಷಿಸುವ ಸಲುವಾಗಿ 1699ರಲ್ಲಿ ಖಾಲ್ಸಾ ಪಂಥ ಸ್ಥಾಪಿಸಿದ್ದರು.</p><p>ಖಾಲ್ಸಾದಲ್ಲಿ ಭಾಗವಹಿಸಿದ್ದ, ಗೋವಿಂದ ಸಿಂಗ್ ಅವರ ನಾಲ್ವರು ಮಕ್ಕಳನ್ನು ಮೊಘಲ್ ಸಾಮ್ರಾಟರು ಗಲ್ಲಿಗೇರಿಸಿದ್ದರು. ಆ ಮಕ್ಕಳ ಸ್ಮರಣಾರ್ಥವಾಗಿ ಡಿಸೆಂಬರ್ 26ರಂದು 'ವೀರ ಬಾಲ ದಿವಸ' ಎಂದು ಆಚರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2022ರ ಜನವರಿ 9ರಂದು ಘೋಷಿಸಿದ್ದರು.</p><p><strong>ಪುರಸ್ಕೃತರು</strong></p><p><strong><ins>ಶೌರ್ಯ</ins></strong></p><ul><li><p>ವ್ಯೋಮ ಪ್ರಿಯಾ (ಮರಣೋತ್ತರ) – ತಮಿಳುನಾಡು</p></li><li><p>ಕಮಲೇಶ್ ಕುಮಾರ್ (ಮರಣೋತ್ತರ) – ಬಿಹಾರ</p></li><li><p>ಮೊಹಮ್ಮದ್ ಸಿದಾನ್ (11 ವರ್ಷ) – ಕೇರಳ</p></li><li><p>ಅಜಯ್ ರಾಯ್ (9 ವರ್ಷ) – ಉತ್ತರ ಪ್ರದೇಶ</p></li></ul><p><strong><ins>ಕಲೆ & ಸಂಸ್ಕೃತಿ</ins></strong></p><ul><li><p>ಎಸ್ಥರ್ ಲಾಲ್ದುಹವ್ಮಿ ನಮ್ಟೆ (9 ವರ್ಷ) – ಮಿಜೋರಾಂ</p></li><li><p>ಸುಮನ್ ಸರ್ಕಾರ್ (16 ವರ್ಷ) – ಪಶ್ಚಿಮ ಬಂಗಾಳ</p></li></ul><p><strong><ins>ಪರಿಸರ</ins></strong></p><ul><li><p>ಪೂಜಾ (17 ವರ್ಷ) – ಉತ್ತರ ಪ್ರದೇಶ</p></li></ul><p><strong><ins>ಸಮಾಜ ಸೇವೆ</ins></strong></p><ul><li><p>ಶ್ರವಣ್ ಸಿಂಗ್ (10 ವರ್ಷ) – ಪಂಜಾಬ್</p></li><li><p>ವನ್ಶ್ ತಯಾಲ್ (17 ವರ್ಷ) – ಚಂಡೀಗಢ</p></li></ul><p><strong><ins>ವಿಜ್ಞಾನ & ತಂತ್ರಜ್ಞಾನ</ins></strong></p><ul><li><p>ಆಯಿಷಿ ಪ್ರಿಶಾ ಬೋರಾ (14 ವರ್ಷ) – ಅಸ್ಸಾಂ</p></li><li><p>ಆರ್ನವ್ ಅನುಪ್ರಿಯ ಮಹರ್ಷಿ (17 ವರ್ಷ) – ಮಹಾರಾಷ್ಟ್ರ</p></li></ul><p><strong><ins>ಕ್ರೀಡಾ ವಿಭಾಗ</ins></strong></p><ul><li><p>ಜ್ಯೋತಿ, ಪ್ಯಾರಾ ಅಥ್ಲೀಟ್ (17 ವರ್ಷ) – ಹರಿಯಾಣ</p></li><li><p>ಶಿವಾನಿ ಉಪ್ಪಾರ, ಪ್ಯಾರಾ ಅಥ್ಲೀಟ್ (17 ವರ್ಷ) – ಆಂಧ್ರ ಪ್ರದೇಶ</p></li><li><p>ಧಿನಿಧಿ ದೇಶಿಂಘು, ಈಜು (15 ವರ್ಷ) – ಕರ್ನಾಟಕ</p></li><li><p>ಅನುಷ್ಕಾ ಕುಮಾರಿ, ಫುಟ್ಬಾಲ್ (14 ವರ್ಷ) – ಜಾರ್ಖಂಡ್</p></li><li><p>ಯೋಗಿತಾ ಮಾಂಡವಿ, ಜೂಡೋ (14 ವರ್ಷ) – ಚತ್ತೀಸಗಢ</p></li><li><p>ಜೋಶ್ನಾ ಸಾಬರ್, ವೇಯ್ಟ್ಲಿಫ್ಟರ್ (16 ವರ್ಷ) – ಒಡಿಶಾ </p></li><li><p>ವಿ.ಎಲ್. ಪ್ರಗ್ನಿಕಾ, ಚೆಸ್ (7 ವರ್ಷ) – ಗುಜರಾತ್</p></li><li><p>ವಿಶ್ವನಾಥ್ ಪದಕಂತಿ, ಪರ್ವತಾರೋಹಿ (16 ವರ್ಷ) – ತೆಲಂಗಾಣ</p></li><li><p>ವೈಭವ್ ಸೂರ್ಯವಂಶ, ಕ್ರಿಕೆಟ್ (14 ವರ್ಷ) – ಬಿಹಾರ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>