<p><strong>ಹುಬ್ಬಳ್ಳಿ:</strong> ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡದ ವಿರುದ್ಧ ಕರ್ನಾಟಕ ತಂಡ ರೋಚಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಪಂದ್ಯದ ಸಂದರ್ಭದ ಘಟನೆಯನ್ನು ಹುಬ್ಬಳ್ಳಿ ಪೊಲೀಸರು ಸಂಚಾರ ಜಾಗೃತಿಗೆ ಬಳಸಿಕೊಂಡಿದ್ದಾರೆ. </p><p>ಪಂದ್ಯದ ನಡುವೆ ಮುಂಬೈ ವೇಗಿ ತುಷಾರ ದೇಶಪಾಂಡೆ ಅವರು ಬ್ಯಾಟಿಂಗ್ ಮಾಡುತ್ತಿದ್ದ ವಿದ್ಯಾಧರ್ ಪಾಟೀಲ್ ಅವರನ್ನು ಕೆಣಕಲು ಮುಂದಾಗುತ್ತಾರೆ. ಆದರೆ, ತಾಳ್ಮೆ ಕಳೆದುಕೊಳ್ಳದ ವಿದ್ಯಾಧರ್ ಪಂದ್ಯ ಗೆಲ್ಲಿಸಿ ಹೀರೊ ಆಗಿದ್ದಾರೆ. ಈ ಘಟನೆಯನ್ನು ಹುಬ್ಬಳ್ಳಿ ಜಿಲ್ಲಾ ಪೊಲೀಸರು, ವಾಹನ ಚಲಾಯಿಸುವಾಗ ತಾಳ್ಮೆ ಎಷ್ಟು ಮುಖ್ಯ ಎಂಬುಕ್ಕೆ ಹೋಲಿಸಿ, ಪೋಸ್ಟ್ ಒಂದನ್ನು ಹಂಚಿಕೊಂಡಿದೆ. </p><p><strong>ತಾಳ್ಮೆ ಮತ್ತು ಸಮಯೋಜಿತವಾಗಿರಿ</strong></p><p>ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಪೋಸ್ಟ್ ಹಂಚಿಕೊಂಡು, ‘ಒತ್ತಡ ಹೆಚ್ಚಾದಾಗ ಕೆಲವರು ಜಾಸ್ತಿ ಕೂಗಾಡ್ತಾರೆ... ಆದರೆ ಕೂಗಾಡೋದ್ರಿಂದ ಆಟದ ದಿಕ್ಕು ಬದಲಾಗಲ್ಲ. ವಿದ್ಯಾಧರ ರೀತಿಯಲ್ಲಿ ತಾಳ್ಮೆ ಮತ್ತು ಸ್ಥಿತಪ್ರಜ್ಞ (Calm & Composed) ಆಟ ಆಡಿದಾಗಲೇ ಗೆಲುವು ಸಾಧ್ಯ’</p><p>‘ಆಟದಲ್ಲಿ ನಿಯಂತ್ರಣ ಕಳೆದುಕೊಂಡರೆ ಆಟ ಕೈ ತಪ್ಪುತ್ತದೆ. ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡರೆ ಜೀವ ಕೈ ತಪ್ಪುತ್ತದೆ’ ಎಂದು ಬರೆದುಕೊಂಡು ಸಂಚಾರಿ ನಿಯಮ ಪಾಲಿಸುವಂತೆ ಕರೆ ನೀಡಿದ್ದಾರೆ.</p>.<p> <strong>ಪಂದ್ಯದ ನಡುವೆ ಆಗಿದ್ದೇನು?</strong></p><p>ನಿನ್ನೆ (ಸೋಮವಾರ) ಮುಕ್ತಾಯಗೊಂಡ ಪಂದ್ಯದಲ್ಲಿ ಕರ್ನಾಟಕ ತಂಡ ಸಂಕಷ್ಟದಲ್ಲಿದ್ದಾಗ ಕೆಚ್ಚೆದೆಯ ಬ್ಯಾಟಿಂಗ್ (30 ರನ್, 31ಎಸೆತ) ಪ್ರದರ್ಶಿಸಿದ ವಿದ್ಯಾಧರ ಪಾಟೀಲ್ ಅವರು ಪಂದ್ಯ ಗೆಲ್ಲಲು ನೆರವಾದರು.</p><p>ಈ ಸಂದರ್ಭದಲ್ಲಿ ಮುಂಬೈನ ವೇಗಿ ತುಷಾರ್ ದೇಶಪಾಂಡೆ ಅವರು ಬೌನ್ಸರ್ ಹಾಗಿ ವಿದ್ಯಾಧರ್ ಅವರನ್ನು ಗುರಾಯಿಸಿ, ಕೆಣಕಲು ಮುಂದಾಗುತ್ತಾರೆ. ಆದರೆ, ತಾಳ್ಮೆ ಕಳೆದುಕೊಳ್ಳದ ವಿದ್ಯಾಧರ್ ಪಂದ್ಯ ಗೆಲ್ಲಿಸುವ ಮೂಲಕ ಉತ್ತರ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡದ ವಿರುದ್ಧ ಕರ್ನಾಟಕ ತಂಡ ರೋಚಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಪಂದ್ಯದ ಸಂದರ್ಭದ ಘಟನೆಯನ್ನು ಹುಬ್ಬಳ್ಳಿ ಪೊಲೀಸರು ಸಂಚಾರ ಜಾಗೃತಿಗೆ ಬಳಸಿಕೊಂಡಿದ್ದಾರೆ. </p><p>ಪಂದ್ಯದ ನಡುವೆ ಮುಂಬೈ ವೇಗಿ ತುಷಾರ ದೇಶಪಾಂಡೆ ಅವರು ಬ್ಯಾಟಿಂಗ್ ಮಾಡುತ್ತಿದ್ದ ವಿದ್ಯಾಧರ್ ಪಾಟೀಲ್ ಅವರನ್ನು ಕೆಣಕಲು ಮುಂದಾಗುತ್ತಾರೆ. ಆದರೆ, ತಾಳ್ಮೆ ಕಳೆದುಕೊಳ್ಳದ ವಿದ್ಯಾಧರ್ ಪಂದ್ಯ ಗೆಲ್ಲಿಸಿ ಹೀರೊ ಆಗಿದ್ದಾರೆ. ಈ ಘಟನೆಯನ್ನು ಹುಬ್ಬಳ್ಳಿ ಜಿಲ್ಲಾ ಪೊಲೀಸರು, ವಾಹನ ಚಲಾಯಿಸುವಾಗ ತಾಳ್ಮೆ ಎಷ್ಟು ಮುಖ್ಯ ಎಂಬುಕ್ಕೆ ಹೋಲಿಸಿ, ಪೋಸ್ಟ್ ಒಂದನ್ನು ಹಂಚಿಕೊಂಡಿದೆ. </p><p><strong>ತಾಳ್ಮೆ ಮತ್ತು ಸಮಯೋಜಿತವಾಗಿರಿ</strong></p><p>ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಪೋಸ್ಟ್ ಹಂಚಿಕೊಂಡು, ‘ಒತ್ತಡ ಹೆಚ್ಚಾದಾಗ ಕೆಲವರು ಜಾಸ್ತಿ ಕೂಗಾಡ್ತಾರೆ... ಆದರೆ ಕೂಗಾಡೋದ್ರಿಂದ ಆಟದ ದಿಕ್ಕು ಬದಲಾಗಲ್ಲ. ವಿದ್ಯಾಧರ ರೀತಿಯಲ್ಲಿ ತಾಳ್ಮೆ ಮತ್ತು ಸ್ಥಿತಪ್ರಜ್ಞ (Calm & Composed) ಆಟ ಆಡಿದಾಗಲೇ ಗೆಲುವು ಸಾಧ್ಯ’</p><p>‘ಆಟದಲ್ಲಿ ನಿಯಂತ್ರಣ ಕಳೆದುಕೊಂಡರೆ ಆಟ ಕೈ ತಪ್ಪುತ್ತದೆ. ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡರೆ ಜೀವ ಕೈ ತಪ್ಪುತ್ತದೆ’ ಎಂದು ಬರೆದುಕೊಂಡು ಸಂಚಾರಿ ನಿಯಮ ಪಾಲಿಸುವಂತೆ ಕರೆ ನೀಡಿದ್ದಾರೆ.</p>.<p> <strong>ಪಂದ್ಯದ ನಡುವೆ ಆಗಿದ್ದೇನು?</strong></p><p>ನಿನ್ನೆ (ಸೋಮವಾರ) ಮುಕ್ತಾಯಗೊಂಡ ಪಂದ್ಯದಲ್ಲಿ ಕರ್ನಾಟಕ ತಂಡ ಸಂಕಷ್ಟದಲ್ಲಿದ್ದಾಗ ಕೆಚ್ಚೆದೆಯ ಬ್ಯಾಟಿಂಗ್ (30 ರನ್, 31ಎಸೆತ) ಪ್ರದರ್ಶಿಸಿದ ವಿದ್ಯಾಧರ ಪಾಟೀಲ್ ಅವರು ಪಂದ್ಯ ಗೆಲ್ಲಲು ನೆರವಾದರು.</p><p>ಈ ಸಂದರ್ಭದಲ್ಲಿ ಮುಂಬೈನ ವೇಗಿ ತುಷಾರ್ ದೇಶಪಾಂಡೆ ಅವರು ಬೌನ್ಸರ್ ಹಾಗಿ ವಿದ್ಯಾಧರ್ ಅವರನ್ನು ಗುರಾಯಿಸಿ, ಕೆಣಕಲು ಮುಂದಾಗುತ್ತಾರೆ. ಆದರೆ, ತಾಳ್ಮೆ ಕಳೆದುಕೊಳ್ಳದ ವಿದ್ಯಾಧರ್ ಪಂದ್ಯ ಗೆಲ್ಲಿಸುವ ಮೂಲಕ ಉತ್ತರ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>