<p><strong>ನವದೆಹಲಿ</strong>: ಇದೇ 16ರಂದು ಹಿಂಸಾ ಚಾರ ನಡೆದ ಜಹಾಂಗೀರ್ಪುರಿಯ ಮಸೀದಿಯ ಆವರಣ ಗೋಡೆ ಮತ್ತು ಸುತ್ತಲೂ ಇದ್ದ ಕೆಲವು ಕಟ್ಟಡಗಳನ್ನು ಉತ್ತರ ದೆಹಲಿ ಮಹಾನಗರಪಾಲಿಕೆಯು (ಎನ್ಡಿಎಂಸಿ) ಬುಲ್ಡೋಜರ್ ಬಳಸಿ ಬುಧವಾರ ನೆಲಸಮ ಮಾಡಿದೆ.</p>.<p>ಬಿಜೆಪಿ ಆಳ್ವಿಕೆ ಇರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್ನಲ್ಲಿ ಇದೇ ರೀತಿಯ ಕಾರ್ಯಾಚರಣೆ ಈ ಹಿಂದೆ ನಡೆದಿತ್ತು. ಎನ್ಡಿಎಂಸಿಯಲ್ಲಿ ಬಿಜೆಪಿ ಆಳ್ವಿಕೆ ಇದೆ. ಜಹಾಂಗೀರ್ಪುರಿ ಮುಸ್ಲಿಮರೇ ಹೆಚ್ಚಾಗಿರುವ ಪ್ರದೇಶ.</p>.<p>ಜಹಾಂಗೀರ್ಪುರಿ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರವೂ 90 ನಿಮಿಷ ಕಾರ್ಯಾಚರಣೆ ಮುಂದುವರಿಯಿತು.</p>.<p>ಗುರುವಾರದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಿ, ಗುರುವಾರ ಪ್ರಕರಣ<br />ವನ್ನು ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು ಆದೇಶ ನೀಡಿತು.ಕೋರ್ಟ್ ಆದೇಶದ ಬಳಿಕವೂ ನೆಲಸಮ ಕಾರ್ಯಾಚರಣೆಯನ್ನು ನಿಲ್ಲಿಸಿಲ್ಲ ಎಂಬುದನ್ನು ಅರ್ಜಿದಾರರ ಪರ ವಕೀಲ ದುಷ್ಯಂತ್ ದವೆ ಅವರು ಪೀಠದ ಗಮನಕ್ಕೆ ತಂದರು.</p>.<p>‘ಕೋರ್ಟ್ ಆದೇಶವು ಅಧಿಕೃತವಾಗಿ ಸಿಕ್ಕಿಲ್ಲ. ಹಾಗಾಗಿ, ನೆಲಸಮ ಕಾರ್ಯಾಚರಣೆ ನಿಲ್ಲಿಸಲಾಗದು ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸ್ ಆಯುಕ್ತರು, ಮೇಯರ್ ಮತ್ತು ಎನ್ಡಿಎಂಸಿ ಆಯುಕ್ತರಿಗೆ ರಿಜಿಸ್ಟ್ರಾರ್ ಮೂಲಕ ಆದೇಶ ತಲುಪಿಸಬೇಕು’ ಎಂದು ದವೆ ಹೇಳಿದರು.</p>.<p>ಆದೇಶವನ್ನು ಸಂಬಂಧಪಟ್ಟವರಿಗೆ ತಕ್ಷಣ ತಲುಪಿಸುವಂತೆ ಮುಖ್ಯ ನ್ಯಾಯಮೂರ್ತಿ ಅವರು ಕೋರ್ಟ್ನ ರಿಜಿಸ್ಟ್ರಾರ್ಗೆ ಸೂಚಿಸಿದರು.</p>.<p>ಅದಕ್ಕೂ ಮೊದಲು, ಒತ್ತುವರಿ ತೆರವು ಕಾರ್ಯಾಚರಣೆಗೆ 5ರಿಂದ 15 ದಿನ ಗಳ ನೋಟಿಸ್ ನೀಡಬೇಕು. ಆದರೆ, ಜಹಾಂಗೀರ್ಪುರಿ ಕಾರ್ಯಾ ಚರಣೆಗೆ ಮುನ್ನ ಯಾವುದೇ ನೋಟಿಸ್ ನೀಡಲಾ ಗಿಲ್ಲ. ಹಾಗಾಗಿ, ಈ ಕಾರ್ಯಾಚರಣೆಯು ಸಂವಿಧಾನಬಾಹಿರ ಮತ್ತು ಅಕ್ರಮ ಎಂದು ದವೆ ವಾದಿಸಿ ದ್ದರು.</p>.<p>ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಶನಿವಾರ ಹಿಂಸಾಚಾರ ನಡೆದ ಸ್ಥಳದಲ್ಲಿಯೇ ಕಟ್ಟಡ ಧ್ವಂಸ ಕಾರ್ಯಾಚರಣೆ ನಡೆದಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳವು ಸಂಘಟಿಸಿದ್ದ ಮೆರವಣಿಗೆ ಸಂದರ್ಭದಲ್ಲಿ ಸಂಘರ್ಷ ಏರ್ಪಟ್ಟಿತ್ತು. ಈ ಮೆರವಣಿಗೆಗೆ ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.</p>.<p>ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ರಾಮ ನವಮಿ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ನಡೆದ ಸ್ಥಳಗಳಲ್ಲಿ ಕೂಡ ಇದೇ ರೀತಿಯ ನೆಲಸಮ ಕಾರ್ಯಾಚರಣೆಯನ್ನು ಅಲ್ಲಿನ ನಗರ ಸ್ಥಳೀಯ ಸಂಸ್ಥೆಗಳು ನಡೆಸಿವೆ.</p>.<p>ಜಹಾಂಗೀರ್ಪುರಿಯಲ್ಲಿ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಕಾರ್ಯಾಚರಣೆ ಆರಂಭಿಸಲಾಯಿತು. ಭಾರಿ ಪೊಲೀಸ್ ಬಂದೋಬಸ್ತ್ನಲ್ಲಿ ಕಾರ್ಯಾಚರಣೆ ನಡೆಯಿತು. ಕಟ್ಟಡ ತೆರವಿಗೆ ಮುನ್ನ ಪೊಲೀಸರು ಪಥಸಂಚಲನವನ್ನೂ ನಡೆಸಿದರು. ಪರಿಸ್ಥಿತಿಯ ಮೇಲೆ ನಿಗಾ ಇರಿಸಲು ಡ್ರೋನ್ ಅನ್ನು ಕೂಡ ಬಳಸಲಾಗಿತ್ತು.</p>.<p>ಮಂಗಳವಾರವೇ ಕಾರ್ಯಾಚರಣೆ ಆರಂಭಿಸಲು ಎನ್ಡಿಎಂಸಿ ಬಯಸಿತ್ತು. ಆದರೆ, ಪೊಲೀಸ್ ಸಿಬ್ಬಂದಿ ಲಭ್ಯವಾಗದ ಕಾರಣ ಕಾರ್ಯಾಚರಣೆಯನ್ನು ಬುಧ ವಾರಕ್ಕೆ ಮುಂದೂಡಬೇಕಾಯಿತು ಎಂದು ಎನ್ಡಿಎಂಇ ಮೇಯರ್<br />ಹೇಳಿದ್ದಾರೆ.</p>.<p>ಕಾನೂನುಬಾಹಿರ ತೆರವು ಕಾರ್ಯಾಚರಣೆಗಳ ಮೂಲಕ ಕಾನೂನುಗಳು ಮತ್ತು ಸಂವಿಧಾನವನ್ನು ನೆಲಸಮ ಮಾಡಲಾಗಿದೆ. ಕನಿಷ್ಠ, ಸುಪ್ರೀಂ ಕೋರ್ಟ್ ಮತ್ತು ಅದರ ಆದೇಶವನ್ನಾದರೂ ನೆಲಸಮ ಮಾಡಬಾರದು</p>.<p><strong>ಬೃಂದಾ ಕಾರಟ್, ಸಿಪಿಎಂ ನಾಯಕಿ</strong></p>.<p>ಇದು ಸಾಂವಿಧಾನಿಕ ಮೌಲ್ಯಗಳ ನೆಲಸಮ. ಇದು ಬಡವರು ಮತ್ತು ಅಲ್ಪಸಂಖ್ಯಾತರ ಮೇಲೆ ಸರ್ಕಾರ ನಡೆಸಿದ ಹಲ್ಲೆ. ಬಿಜೆಪಿಯವರು ಮೊದಲು ತಮ್ಮ ಹೃದಯದಲ್ಲಿನ ದ್ವೇಷವನ್ನು ನೆಲಸಮ ಮಾಡಿಕೊಳ್ಳಬೇಕು<br />ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ</p>.<p>ದೇಶದೆಲ್ಲೆಡೆ ದಂಗೆಗಳು ನಡೆಯುತ್ತಿವೆ. ಬಿಜೆಪಿಯೇ ಈ ದಂಗೆಗಳನ್ನು ಮಾಡಿಸುತ್ತಿದೆ. ಬಿಜೆಪಿಯ ಕೇಂದ್ರ ಕಚೇರಿಯನ್ನು ನೆಲಸಮ ಮಾಡಿಬಿಡಿ, ದಂಗೆಗಳು ನಿಂತುಹೋಗುತ್ತವೆ</p>.<p><strong>ಅತಿಶಿ ಮರ್ಲೇನಾ, ಎಎಪಿ ನಾಯಕಿ</strong></p>.<p>ಅಪರಾಧ ಮತ್ತು ಸಂಚಿನ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಜಾತಿ ಮತ್ತು ಸಮುದಾಯದ ಆಧಾರದಲ್ಲಿ ಅಲ್ಲ. ತಪ್ಪಿತಸ್ಥರನ್ನು ಅವರು ಮಾಡಿದ ಅಪರಾಧದ ಆಧಾರದಲ್ಲಿ ಬಂಧಿಸಲಾಗಿದೆ.<br />ಜಾತಿಯ ಆಧಾರದಲ್ಲಿ ಅಲ್ಲ</p>.<p><strong>ಮುಕ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಇದೇ 16ರಂದು ಹಿಂಸಾ ಚಾರ ನಡೆದ ಜಹಾಂಗೀರ್ಪುರಿಯ ಮಸೀದಿಯ ಆವರಣ ಗೋಡೆ ಮತ್ತು ಸುತ್ತಲೂ ಇದ್ದ ಕೆಲವು ಕಟ್ಟಡಗಳನ್ನು ಉತ್ತರ ದೆಹಲಿ ಮಹಾನಗರಪಾಲಿಕೆಯು (ಎನ್ಡಿಎಂಸಿ) ಬುಲ್ಡೋಜರ್ ಬಳಸಿ ಬುಧವಾರ ನೆಲಸಮ ಮಾಡಿದೆ.</p>.<p>ಬಿಜೆಪಿ ಆಳ್ವಿಕೆ ಇರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್ನಲ್ಲಿ ಇದೇ ರೀತಿಯ ಕಾರ್ಯಾಚರಣೆ ಈ ಹಿಂದೆ ನಡೆದಿತ್ತು. ಎನ್ಡಿಎಂಸಿಯಲ್ಲಿ ಬಿಜೆಪಿ ಆಳ್ವಿಕೆ ಇದೆ. ಜಹಾಂಗೀರ್ಪುರಿ ಮುಸ್ಲಿಮರೇ ಹೆಚ್ಚಾಗಿರುವ ಪ್ರದೇಶ.</p>.<p>ಜಹಾಂಗೀರ್ಪುರಿ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರವೂ 90 ನಿಮಿಷ ಕಾರ್ಯಾಚರಣೆ ಮುಂದುವರಿಯಿತು.</p>.<p>ಗುರುವಾರದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಿ, ಗುರುವಾರ ಪ್ರಕರಣ<br />ವನ್ನು ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು ಆದೇಶ ನೀಡಿತು.ಕೋರ್ಟ್ ಆದೇಶದ ಬಳಿಕವೂ ನೆಲಸಮ ಕಾರ್ಯಾಚರಣೆಯನ್ನು ನಿಲ್ಲಿಸಿಲ್ಲ ಎಂಬುದನ್ನು ಅರ್ಜಿದಾರರ ಪರ ವಕೀಲ ದುಷ್ಯಂತ್ ದವೆ ಅವರು ಪೀಠದ ಗಮನಕ್ಕೆ ತಂದರು.</p>.<p>‘ಕೋರ್ಟ್ ಆದೇಶವು ಅಧಿಕೃತವಾಗಿ ಸಿಕ್ಕಿಲ್ಲ. ಹಾಗಾಗಿ, ನೆಲಸಮ ಕಾರ್ಯಾಚರಣೆ ನಿಲ್ಲಿಸಲಾಗದು ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸ್ ಆಯುಕ್ತರು, ಮೇಯರ್ ಮತ್ತು ಎನ್ಡಿಎಂಸಿ ಆಯುಕ್ತರಿಗೆ ರಿಜಿಸ್ಟ್ರಾರ್ ಮೂಲಕ ಆದೇಶ ತಲುಪಿಸಬೇಕು’ ಎಂದು ದವೆ ಹೇಳಿದರು.</p>.<p>ಆದೇಶವನ್ನು ಸಂಬಂಧಪಟ್ಟವರಿಗೆ ತಕ್ಷಣ ತಲುಪಿಸುವಂತೆ ಮುಖ್ಯ ನ್ಯಾಯಮೂರ್ತಿ ಅವರು ಕೋರ್ಟ್ನ ರಿಜಿಸ್ಟ್ರಾರ್ಗೆ ಸೂಚಿಸಿದರು.</p>.<p>ಅದಕ್ಕೂ ಮೊದಲು, ಒತ್ತುವರಿ ತೆರವು ಕಾರ್ಯಾಚರಣೆಗೆ 5ರಿಂದ 15 ದಿನ ಗಳ ನೋಟಿಸ್ ನೀಡಬೇಕು. ಆದರೆ, ಜಹಾಂಗೀರ್ಪುರಿ ಕಾರ್ಯಾ ಚರಣೆಗೆ ಮುನ್ನ ಯಾವುದೇ ನೋಟಿಸ್ ನೀಡಲಾ ಗಿಲ್ಲ. ಹಾಗಾಗಿ, ಈ ಕಾರ್ಯಾಚರಣೆಯು ಸಂವಿಧಾನಬಾಹಿರ ಮತ್ತು ಅಕ್ರಮ ಎಂದು ದವೆ ವಾದಿಸಿ ದ್ದರು.</p>.<p>ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಶನಿವಾರ ಹಿಂಸಾಚಾರ ನಡೆದ ಸ್ಥಳದಲ್ಲಿಯೇ ಕಟ್ಟಡ ಧ್ವಂಸ ಕಾರ್ಯಾಚರಣೆ ನಡೆದಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳವು ಸಂಘಟಿಸಿದ್ದ ಮೆರವಣಿಗೆ ಸಂದರ್ಭದಲ್ಲಿ ಸಂಘರ್ಷ ಏರ್ಪಟ್ಟಿತ್ತು. ಈ ಮೆರವಣಿಗೆಗೆ ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.</p>.<p>ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ರಾಮ ನವಮಿ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ನಡೆದ ಸ್ಥಳಗಳಲ್ಲಿ ಕೂಡ ಇದೇ ರೀತಿಯ ನೆಲಸಮ ಕಾರ್ಯಾಚರಣೆಯನ್ನು ಅಲ್ಲಿನ ನಗರ ಸ್ಥಳೀಯ ಸಂಸ್ಥೆಗಳು ನಡೆಸಿವೆ.</p>.<p>ಜಹಾಂಗೀರ್ಪುರಿಯಲ್ಲಿ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಕಾರ್ಯಾಚರಣೆ ಆರಂಭಿಸಲಾಯಿತು. ಭಾರಿ ಪೊಲೀಸ್ ಬಂದೋಬಸ್ತ್ನಲ್ಲಿ ಕಾರ್ಯಾಚರಣೆ ನಡೆಯಿತು. ಕಟ್ಟಡ ತೆರವಿಗೆ ಮುನ್ನ ಪೊಲೀಸರು ಪಥಸಂಚಲನವನ್ನೂ ನಡೆಸಿದರು. ಪರಿಸ್ಥಿತಿಯ ಮೇಲೆ ನಿಗಾ ಇರಿಸಲು ಡ್ರೋನ್ ಅನ್ನು ಕೂಡ ಬಳಸಲಾಗಿತ್ತು.</p>.<p>ಮಂಗಳವಾರವೇ ಕಾರ್ಯಾಚರಣೆ ಆರಂಭಿಸಲು ಎನ್ಡಿಎಂಸಿ ಬಯಸಿತ್ತು. ಆದರೆ, ಪೊಲೀಸ್ ಸಿಬ್ಬಂದಿ ಲಭ್ಯವಾಗದ ಕಾರಣ ಕಾರ್ಯಾಚರಣೆಯನ್ನು ಬುಧ ವಾರಕ್ಕೆ ಮುಂದೂಡಬೇಕಾಯಿತು ಎಂದು ಎನ್ಡಿಎಂಇ ಮೇಯರ್<br />ಹೇಳಿದ್ದಾರೆ.</p>.<p>ಕಾನೂನುಬಾಹಿರ ತೆರವು ಕಾರ್ಯಾಚರಣೆಗಳ ಮೂಲಕ ಕಾನೂನುಗಳು ಮತ್ತು ಸಂವಿಧಾನವನ್ನು ನೆಲಸಮ ಮಾಡಲಾಗಿದೆ. ಕನಿಷ್ಠ, ಸುಪ್ರೀಂ ಕೋರ್ಟ್ ಮತ್ತು ಅದರ ಆದೇಶವನ್ನಾದರೂ ನೆಲಸಮ ಮಾಡಬಾರದು</p>.<p><strong>ಬೃಂದಾ ಕಾರಟ್, ಸಿಪಿಎಂ ನಾಯಕಿ</strong></p>.<p>ಇದು ಸಾಂವಿಧಾನಿಕ ಮೌಲ್ಯಗಳ ನೆಲಸಮ. ಇದು ಬಡವರು ಮತ್ತು ಅಲ್ಪಸಂಖ್ಯಾತರ ಮೇಲೆ ಸರ್ಕಾರ ನಡೆಸಿದ ಹಲ್ಲೆ. ಬಿಜೆಪಿಯವರು ಮೊದಲು ತಮ್ಮ ಹೃದಯದಲ್ಲಿನ ದ್ವೇಷವನ್ನು ನೆಲಸಮ ಮಾಡಿಕೊಳ್ಳಬೇಕು<br />ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ</p>.<p>ದೇಶದೆಲ್ಲೆಡೆ ದಂಗೆಗಳು ನಡೆಯುತ್ತಿವೆ. ಬಿಜೆಪಿಯೇ ಈ ದಂಗೆಗಳನ್ನು ಮಾಡಿಸುತ್ತಿದೆ. ಬಿಜೆಪಿಯ ಕೇಂದ್ರ ಕಚೇರಿಯನ್ನು ನೆಲಸಮ ಮಾಡಿಬಿಡಿ, ದಂಗೆಗಳು ನಿಂತುಹೋಗುತ್ತವೆ</p>.<p><strong>ಅತಿಶಿ ಮರ್ಲೇನಾ, ಎಎಪಿ ನಾಯಕಿ</strong></p>.<p>ಅಪರಾಧ ಮತ್ತು ಸಂಚಿನ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಜಾತಿ ಮತ್ತು ಸಮುದಾಯದ ಆಧಾರದಲ್ಲಿ ಅಲ್ಲ. ತಪ್ಪಿತಸ್ಥರನ್ನು ಅವರು ಮಾಡಿದ ಅಪರಾಧದ ಆಧಾರದಲ್ಲಿ ಬಂಧಿಸಲಾಗಿದೆ.<br />ಜಾತಿಯ ಆಧಾರದಲ್ಲಿ ಅಲ್ಲ</p>.<p><strong>ಮುಕ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>