ಹಲವು ಸಚಿವರು ಮತ್ತು ಶಾಸಕರು ಸಮಾಜದ ಒಂದು ನಿರ್ದಿಷ್ಟ ವರ್ಗದವರ ಅಪರಾಧದ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿರುವ ಅರ್ಜಿದಾರರು, ಗುಜರಾತ್ ಮತ್ತು ಉತ್ತರಪ್ರದೇಶ ರಾಜ್ಯಗಳು ಕೈಗೊಂಡ ಆರೋಪಿಗಳ ಆಸ್ತಿ ನೆಲಸಮ ಕ್ರಮಗಳನ್ನು ಉಲ್ಲೇಖಿಸಿ, ಇದು ‘ನ್ಯಾಯಾಲಯಗಳ ಪ್ರಮುಖ ಪಾತ್ರ ಸೇರಿದಂತೆ ನಮ್ಮ ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಹೇಳಿದ್ದಾರೆ.