‘ದೇಗುಲವೊಂದನ್ನು ಧ್ವಂಸಗೊಳಿಸಿ ಮಸೀದಿ ಕಟ್ಟಲಾಯಿತು ಎಂಬುದು ಪ್ರಕರಣದ ಪ್ರಮುಖಾಂಶ. ಆದರೆ, ಮಂದಿರ ನಾಶ ಮಾಡಿ ಮಸೀದಿ ಕಟ್ಟಿದ ಬಗ್ಗೆ ಸೂಕ್ತ ಸಾಕ್ಷ್ಯಗಳಿಲ್ಲ ಎಂದು ಕೋರ್ಟ್ ಹೇಳಿದೆ. ಹಾಗೆಂದ ಮೇಲೆ ಜಾಗ ನಮ್ಮದೇ ಎಂದು ಸಾಬೀತಾಯಿತು. ಆದರೆ, ಅಂತಿಮ ತೀರ್ಪಿನಲ್ಲಿ ಇದಕ್ಕೆ ವ್ಯತಿರಿಕ್ತವಾದ ತೀರ್ಪು ಪ್ರಕಟವಾಗಿದೆ. ಇದೇನೆಂದು ಅರ್ಥವಾಗುತ್ತಿಲ್ಲ. ಹೀಗಾಗಿ ನಾವು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದೇವೆ,’ ಎಂದು ಅವರು ಹೇಳಿದ್ದಾರೆ.