<p><strong>ಶ್ರೀನಗರ</strong>: ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಎರಡನೇ ಹಂತದಲ್ಲಿ ವಿಧಾನಸಭೆಯ 26 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, ಸರಾಸರಿ ಶೇ 56.05ರಷ್ಟು ಮತದಾನವಾಗಿದೆ. ಮತದಾನ ಪ್ರಕ್ರಿಯೆ ಶಾಂತಿಯುತವಾಗಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. </p><p>ಮೊದಲ ಬಾರಿಯ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದರು. ವಿವಿಧ ಮತಗಟ್ಟೆಗಳಲ್ಲಿ ಉದ್ದನೆ ಸಾಲು ಕಂಡುಬಂತು. ವಾಗ್ವಾದದ ಕೆಲ ಘಟನೆ ಹೊರತುಪಡಿಸಿ, ಮತದಾನ ಸುಗಮವಾಗಿ ನಡೆದಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಪಿ.ಕೆ.ಪೋಲೆ ತಿಳಿಸಿದರು.</p><p>‘ರಾಜ್ಯದಲ್ಲಿ ಶಾಂತಿ ಸ್ಥಾಪನೆಯಷ್ಟೇ ಅಲ್ಲ. ಯುವಜನರಿಗೆ ಉದ್ಯೋಗ, ಕೌಶಲಯುಕ್ತ ಶಿಕ್ಷಣ ನೀಡುವ ಸರ್ಕಾರ ಅಗತ್ಯ‘ ಎಂದು ಮೊದಲ ಬಾರಿಗೆ ಮತಹಕ್ಕು ಚಲಾಯಿಸಿದ ಅನನ್ಯಾ ಮತ್ತು ವಿದ್ಯಾರ್ಥಿ ಸಾರ್ವರ್ ಅವರು ಪ್ರತಿಕ್ರಿಯಿಸಿದರು. </p><p>ಮೂರು ವರ್ಷಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗಿ ಬಾಧಿಸಿದ್ದ ಗಡಿಭಾಗದ ರಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿಯೂ ಮತದಾರರು ಹೆಚ್ಚು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಗಮನಸೆಳೆಯಿತು.</p><p>ಪೀರ್ ಪಾಂಜಲ್ ವಲಯ ಎಂದೇ ಈ ಜಿಲ್ಲೆಗಳನ್ನು ಗುರುತಿಸಲಾಗುತ್ತದೆ. ಗಡಿನಿಯಂತ್ರಣ ರೇಖೆಗೆ (ಎಲ್ಒಸಿ) ಹೊಂದಿಕೊಂಡಂತೆ ಮತಗಟ್ಟೆಗಳಿದ್ದ ಕಡೆಯೂ ಶಾಂತಿಯುತವಾಗಿ ಮತದಾನ ಜರುಗಿದೆ. ಈ ಭಾಗದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿತ್ತು. </p><p>ಜಮ್ಮು ವಲಯದ ಶ್ರೀಮಾತಾ ವೈಷ್ಣೋದೇವಿ ಕ್ಷೇತ್ರದಲ್ಲಿ ಗರಿಷ್ಠ, ಅಂದರೆ ಶೇ 75.29ರಷ್ಟು ಮತದಾನವಾಗಿದೆ. ಪೂಂಛ್ ಹವೇಲಿ (ಶೇ 72.71), ಗುಲಾಬ್ಗಢ (ಶೇ 72.19), ಸುರಾನ್ಕೋಟ (ಶೇ 72.18) ಕ್ಷೇತ್ರಗಳಲ್ಲಿ ಉತ್ತಮ ಮತದಾನವಾಗಿದೆ. </p>. <p>ಚುನಾವಣೆ ನಡೆದ 26 ಕ್ಷೇತ್ರಗಳ ಪೈಕಿ 20ರಲ್ಲಿ 2014ರ ಚುನಾವಣೆಗಿಂತಲೂ ಕಡಿಮೆ ಪ್ರಮಾಣದ ಮತದಾನವಾಗಿದೆ. ಚುನಾವಣಾ ಆಯೋಗದ ಅಂಕಿ–ಅಂಶಗಳ ಪ್ರಕಾರ, 2014ರಲ್ಲಿ ಈ ಕ್ಷೇತ್ರದಲ್ಲಿ ಸರಾಸರಿ ಶೇ 60ಕ್ಕಿಂತಲೂ ಅಧಿಕ ಮತದಾನವಾಗಿತ್ತು.</p><p>ಕಾಶ್ಮೀರ ವಲಯದಲ್ಲಿ ಖಾನ್ಸಾಹಿಬ್ ಕ್ಷೇತ್ರದಲ್ಲಿ ಗರಿಷ್ಠ ಶೇ 67.70ರಷ್ಟು ಮತದಾನವಾಗಿದ್ದರೆ, ಕಂಗನ್ (ಶೇ 67.60), ಛಾರ್ ಐ ಶರೀಫ್ ಕ್ಷೇತ್ರದಲ್ಲಿ ಶೇ 66ರಷ್ಟು ಮತದಾನವಾಗಿತ್ತು. ಹಬ್ಬ ಕದಲ್ ಕ್ಷೇತ್ರದಲ್ಲಿ ಕನಿಷ್ಠ ಶೇ 15.80ರಷ್ಟು ಮತದಾನವಾಗಿದೆ.</p><p><strong>ಪ್ರಜಾಪ್ರಭುತ್ವ ಕ್ರಮದಲ್ಲಿ ಮತದಾನ: ಆಂಡ್ರ್ಯೂಸ್</strong></p><p>ಕೇಂದ್ರ ಸರ್ಕಾರದ ಆಹ್ವಾನದಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ 15 ದೇಶಗಳ ರಾಯಭಾರಿಗಳಿದ್ದ ನಿಯೋಗವು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿತು. ನಿಯೋಗದ ಜೊತೆ ವಿದೇಶಾಂಗ ಸಚಿವಾಲಯದ ಪ್ರತಿನಿಧಿಗಳೂ ಇದ್ದರು.</p><p>ನಿಯೋಗದಲ್ಲಿ ಅಮೆರಿಕ, ಮೆಕ್ಸಿಕೊ, ಗಯಾನಾ, ದಕ್ಷಿಣ ಕೊರಿಯಾ, ಸೊಮಾಲಿಯಾ, ಪನಾಮಾ, ಸಿಂಗಪುರ, ನೈಜಿರಿಯಾ, ಸ್ಪೇನ್, ದಕ್ಷಿಣ ಆಫ್ರಿಕಾ, ನಾರ್ವೆ, ತಾಂಜಾನಿಯಾ, ರುವಾಂಡಾ, ಅಲ್ಜಿರಿಯಾ, ಫಿಲಿಪ್ಪೀನ್ಸ್ ಪ್ರತಿನಿಧಿಗಳಿದ್ದರು. ಶ್ರೀನಗರ, ಬಡಗಾಮ್ ಜಿಲ್ಲೆಗಳಿಗೆ ಭೇಟಿ ನೀಡಿದ್ದರು. </p><p>ನಿಯೋಗದ ನೇತೃತ್ವ ವಹಿಸಿದ್ದ ಅಮೆರಿಕ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಜೋರ್ಗನ್ ಕೆ. ಆಂಡ್ರ್ಯೂಸ್, ‘ಮತದಾನ ಪ್ರಕ್ರಿಯೆ ಆರೋಗ್ಯಕರ ಮತ್ತು ಪ್ರಜಾಪ್ರಭುತ್ವ ಕ್ರಮದಲ್ಲಿದೆ. ಹೆಚ್ಚಿನ ಉತ್ಸಾಹ ಕಂಡುಬರುತ್ತಿದೆ’ ಎಂದು ತಿಳಿಸಿದರು.</p><p>‘ಸಿಂಗಪುರದಲ್ಲಿದ್ದಂತೆ ಹೆಚ್ಚಿನ ಹಬ್ಬದ ಸಂಭ್ರಮ ಕಾಣಲಿಲ್ಲ’ ಎಂದು ಸದಸ್ಯೆ, ಸಿಂಗಪುರದ ಅಲೈಸ್ ಚೇನ್ ಪ್ರತಿಕ್ರಿಯಿಸಿದರು.</p><p>‘20 ದೇಶಗಳ ಪ್ರತಿನಿಧಿಗಳನ್ನು<br>ಆಹ್ವಾನಿಸಿದ್ದು, 15 ಮಂದಿ ಭೇಟಿ ನೀಡಿದ್ದಾರೆ. 3ನೇ ಹಂತದ ಮತದಾನದ ವೇಳೆ ಉಳಿದವರು ಭೇಟಿ ನೀಡಬಹುದು’ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.</p><p><strong>'ಇತಿಹಾಸ ನಿರ್ಮಾಣವಾಗುತ್ತಿದೆ’</strong></p><p> ‘ಹಿಂದೆ, ಮತದಾನ ಬಹಿಷ್ಕರಿಸುತ್ತಿದ್ದವರು ಇಂದು ಸಾಲಿನಲ್ಗಿ ನಿಂತು ಮತಹಕ್ಕು ಚಲಾಯಿಸುತ್ತಿದ್ದಾರೆ. ಇತಿಹಾಸ ನಿರ್ಮಾಣವಾಗುತ್ತಿದೆ’ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.</p><p>ಸುದ್ದಿಗಾರರ ಜೊತೆ ಮಾತನಾಡಿದ ಸಿಇಸಿ ರಾಜೀವ್ ಕುಮಾರ್, ‘ಎರಡು ಹಂತದ ಮತದಾನ ಸಿಸಿಟಿವಿ ದೃಶ್ಯಗಳಿವೆ. ಯುವಜನರು,<br>ಮಹಿಳೆಯರು, ಹಿರಿಯರು ಸಾಲಿನಲ್ಲಿ ನಿಂತು ಹಕ್ಕುಚಲಾಯಿಸಿದ್ದಾರೆ‘ ಎಂದರು.</p><p>‘ಇದು, ಜನತಂತ್ರದ ಹಬ್ಬ. ಹಿಂದೆ ಮತದಾನ ಬಹಿಷ್ಕರಿಸುತ್ತಿದ್ದ ಕಡೆಯೂ ಮತದಾನ ಜರುಗುತ್ತಿದೆ. ಇದು, ಪ್ರಜಾಪ್ರಭುತ್ವಕ್ಕೆ ಸಲ್ಲುವ ಗೌರವ’ ಎಂದು ಆಯುಕ್ತರಾದ ಗ್ಯಾನೇಶ್ ಕುಮಾರ್, ಸುಖ್ಬೀರ್ ಸಿಂಗ್ ಸಂಧು ಹೇಳಿದರು.</p>.<div><blockquote>ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸ್ಥಳೀಯ ಸೊಪೊರ್ ತಳಿಯ ಸೇಬಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಒತ್ತು ನೀಡಲಿದೆ</blockquote><span class="attribution">-ರಾಹುಲ್ಗಾಂಧಿ ಲೋಕಸಭೆಯ ವಿರೋಧಪಕ್ಷದ ನಾಯಕ</span></div>.<div><blockquote>ವಿದೇಶಿ ರಾಯಭಾರಿಗಳ ನಿಯೋಗ ಏಕೆ ಬಂದಿದೆಯೊ ನನಗೆ ತಿಳಿದಿಲ್ಲ. ಚುನಾವಣೆ ನಮ್ಮ ಆಂತರಿಕ ವ್ಯವಸ್ಥೆ. ನಮಗೆ ಅವರ ಪ್ರಮಾಣಪತ್ರ ಅಗತ್ಯವಿಲ್ಲ </blockquote><span class="attribution">-ಒಮರ್ ಅಬ್ದುಲ್ಲಾ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಎರಡನೇ ಹಂತದಲ್ಲಿ ವಿಧಾನಸಭೆಯ 26 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, ಸರಾಸರಿ ಶೇ 56.05ರಷ್ಟು ಮತದಾನವಾಗಿದೆ. ಮತದಾನ ಪ್ರಕ್ರಿಯೆ ಶಾಂತಿಯುತವಾಗಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. </p><p>ಮೊದಲ ಬಾರಿಯ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದರು. ವಿವಿಧ ಮತಗಟ್ಟೆಗಳಲ್ಲಿ ಉದ್ದನೆ ಸಾಲು ಕಂಡುಬಂತು. ವಾಗ್ವಾದದ ಕೆಲ ಘಟನೆ ಹೊರತುಪಡಿಸಿ, ಮತದಾನ ಸುಗಮವಾಗಿ ನಡೆದಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಪಿ.ಕೆ.ಪೋಲೆ ತಿಳಿಸಿದರು.</p><p>‘ರಾಜ್ಯದಲ್ಲಿ ಶಾಂತಿ ಸ್ಥಾಪನೆಯಷ್ಟೇ ಅಲ್ಲ. ಯುವಜನರಿಗೆ ಉದ್ಯೋಗ, ಕೌಶಲಯುಕ್ತ ಶಿಕ್ಷಣ ನೀಡುವ ಸರ್ಕಾರ ಅಗತ್ಯ‘ ಎಂದು ಮೊದಲ ಬಾರಿಗೆ ಮತಹಕ್ಕು ಚಲಾಯಿಸಿದ ಅನನ್ಯಾ ಮತ್ತು ವಿದ್ಯಾರ್ಥಿ ಸಾರ್ವರ್ ಅವರು ಪ್ರತಿಕ್ರಿಯಿಸಿದರು. </p><p>ಮೂರು ವರ್ಷಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗಿ ಬಾಧಿಸಿದ್ದ ಗಡಿಭಾಗದ ರಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿಯೂ ಮತದಾರರು ಹೆಚ್ಚು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಗಮನಸೆಳೆಯಿತು.</p><p>ಪೀರ್ ಪಾಂಜಲ್ ವಲಯ ಎಂದೇ ಈ ಜಿಲ್ಲೆಗಳನ್ನು ಗುರುತಿಸಲಾಗುತ್ತದೆ. ಗಡಿನಿಯಂತ್ರಣ ರೇಖೆಗೆ (ಎಲ್ಒಸಿ) ಹೊಂದಿಕೊಂಡಂತೆ ಮತಗಟ್ಟೆಗಳಿದ್ದ ಕಡೆಯೂ ಶಾಂತಿಯುತವಾಗಿ ಮತದಾನ ಜರುಗಿದೆ. ಈ ಭಾಗದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿತ್ತು. </p><p>ಜಮ್ಮು ವಲಯದ ಶ್ರೀಮಾತಾ ವೈಷ್ಣೋದೇವಿ ಕ್ಷೇತ್ರದಲ್ಲಿ ಗರಿಷ್ಠ, ಅಂದರೆ ಶೇ 75.29ರಷ್ಟು ಮತದಾನವಾಗಿದೆ. ಪೂಂಛ್ ಹವೇಲಿ (ಶೇ 72.71), ಗುಲಾಬ್ಗಢ (ಶೇ 72.19), ಸುರಾನ್ಕೋಟ (ಶೇ 72.18) ಕ್ಷೇತ್ರಗಳಲ್ಲಿ ಉತ್ತಮ ಮತದಾನವಾಗಿದೆ. </p>. <p>ಚುನಾವಣೆ ನಡೆದ 26 ಕ್ಷೇತ್ರಗಳ ಪೈಕಿ 20ರಲ್ಲಿ 2014ರ ಚುನಾವಣೆಗಿಂತಲೂ ಕಡಿಮೆ ಪ್ರಮಾಣದ ಮತದಾನವಾಗಿದೆ. ಚುನಾವಣಾ ಆಯೋಗದ ಅಂಕಿ–ಅಂಶಗಳ ಪ್ರಕಾರ, 2014ರಲ್ಲಿ ಈ ಕ್ಷೇತ್ರದಲ್ಲಿ ಸರಾಸರಿ ಶೇ 60ಕ್ಕಿಂತಲೂ ಅಧಿಕ ಮತದಾನವಾಗಿತ್ತು.</p><p>ಕಾಶ್ಮೀರ ವಲಯದಲ್ಲಿ ಖಾನ್ಸಾಹಿಬ್ ಕ್ಷೇತ್ರದಲ್ಲಿ ಗರಿಷ್ಠ ಶೇ 67.70ರಷ್ಟು ಮತದಾನವಾಗಿದ್ದರೆ, ಕಂಗನ್ (ಶೇ 67.60), ಛಾರ್ ಐ ಶರೀಫ್ ಕ್ಷೇತ್ರದಲ್ಲಿ ಶೇ 66ರಷ್ಟು ಮತದಾನವಾಗಿತ್ತು. ಹಬ್ಬ ಕದಲ್ ಕ್ಷೇತ್ರದಲ್ಲಿ ಕನಿಷ್ಠ ಶೇ 15.80ರಷ್ಟು ಮತದಾನವಾಗಿದೆ.</p><p><strong>ಪ್ರಜಾಪ್ರಭುತ್ವ ಕ್ರಮದಲ್ಲಿ ಮತದಾನ: ಆಂಡ್ರ್ಯೂಸ್</strong></p><p>ಕೇಂದ್ರ ಸರ್ಕಾರದ ಆಹ್ವಾನದಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ 15 ದೇಶಗಳ ರಾಯಭಾರಿಗಳಿದ್ದ ನಿಯೋಗವು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿತು. ನಿಯೋಗದ ಜೊತೆ ವಿದೇಶಾಂಗ ಸಚಿವಾಲಯದ ಪ್ರತಿನಿಧಿಗಳೂ ಇದ್ದರು.</p><p>ನಿಯೋಗದಲ್ಲಿ ಅಮೆರಿಕ, ಮೆಕ್ಸಿಕೊ, ಗಯಾನಾ, ದಕ್ಷಿಣ ಕೊರಿಯಾ, ಸೊಮಾಲಿಯಾ, ಪನಾಮಾ, ಸಿಂಗಪುರ, ನೈಜಿರಿಯಾ, ಸ್ಪೇನ್, ದಕ್ಷಿಣ ಆಫ್ರಿಕಾ, ನಾರ್ವೆ, ತಾಂಜಾನಿಯಾ, ರುವಾಂಡಾ, ಅಲ್ಜಿರಿಯಾ, ಫಿಲಿಪ್ಪೀನ್ಸ್ ಪ್ರತಿನಿಧಿಗಳಿದ್ದರು. ಶ್ರೀನಗರ, ಬಡಗಾಮ್ ಜಿಲ್ಲೆಗಳಿಗೆ ಭೇಟಿ ನೀಡಿದ್ದರು. </p><p>ನಿಯೋಗದ ನೇತೃತ್ವ ವಹಿಸಿದ್ದ ಅಮೆರಿಕ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಜೋರ್ಗನ್ ಕೆ. ಆಂಡ್ರ್ಯೂಸ್, ‘ಮತದಾನ ಪ್ರಕ್ರಿಯೆ ಆರೋಗ್ಯಕರ ಮತ್ತು ಪ್ರಜಾಪ್ರಭುತ್ವ ಕ್ರಮದಲ್ಲಿದೆ. ಹೆಚ್ಚಿನ ಉತ್ಸಾಹ ಕಂಡುಬರುತ್ತಿದೆ’ ಎಂದು ತಿಳಿಸಿದರು.</p><p>‘ಸಿಂಗಪುರದಲ್ಲಿದ್ದಂತೆ ಹೆಚ್ಚಿನ ಹಬ್ಬದ ಸಂಭ್ರಮ ಕಾಣಲಿಲ್ಲ’ ಎಂದು ಸದಸ್ಯೆ, ಸಿಂಗಪುರದ ಅಲೈಸ್ ಚೇನ್ ಪ್ರತಿಕ್ರಿಯಿಸಿದರು.</p><p>‘20 ದೇಶಗಳ ಪ್ರತಿನಿಧಿಗಳನ್ನು<br>ಆಹ್ವಾನಿಸಿದ್ದು, 15 ಮಂದಿ ಭೇಟಿ ನೀಡಿದ್ದಾರೆ. 3ನೇ ಹಂತದ ಮತದಾನದ ವೇಳೆ ಉಳಿದವರು ಭೇಟಿ ನೀಡಬಹುದು’ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.</p><p><strong>'ಇತಿಹಾಸ ನಿರ್ಮಾಣವಾಗುತ್ತಿದೆ’</strong></p><p> ‘ಹಿಂದೆ, ಮತದಾನ ಬಹಿಷ್ಕರಿಸುತ್ತಿದ್ದವರು ಇಂದು ಸಾಲಿನಲ್ಗಿ ನಿಂತು ಮತಹಕ್ಕು ಚಲಾಯಿಸುತ್ತಿದ್ದಾರೆ. ಇತಿಹಾಸ ನಿರ್ಮಾಣವಾಗುತ್ತಿದೆ’ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.</p><p>ಸುದ್ದಿಗಾರರ ಜೊತೆ ಮಾತನಾಡಿದ ಸಿಇಸಿ ರಾಜೀವ್ ಕುಮಾರ್, ‘ಎರಡು ಹಂತದ ಮತದಾನ ಸಿಸಿಟಿವಿ ದೃಶ್ಯಗಳಿವೆ. ಯುವಜನರು,<br>ಮಹಿಳೆಯರು, ಹಿರಿಯರು ಸಾಲಿನಲ್ಲಿ ನಿಂತು ಹಕ್ಕುಚಲಾಯಿಸಿದ್ದಾರೆ‘ ಎಂದರು.</p><p>‘ಇದು, ಜನತಂತ್ರದ ಹಬ್ಬ. ಹಿಂದೆ ಮತದಾನ ಬಹಿಷ್ಕರಿಸುತ್ತಿದ್ದ ಕಡೆಯೂ ಮತದಾನ ಜರುಗುತ್ತಿದೆ. ಇದು, ಪ್ರಜಾಪ್ರಭುತ್ವಕ್ಕೆ ಸಲ್ಲುವ ಗೌರವ’ ಎಂದು ಆಯುಕ್ತರಾದ ಗ್ಯಾನೇಶ್ ಕುಮಾರ್, ಸುಖ್ಬೀರ್ ಸಿಂಗ್ ಸಂಧು ಹೇಳಿದರು.</p>.<div><blockquote>ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸ್ಥಳೀಯ ಸೊಪೊರ್ ತಳಿಯ ಸೇಬಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಒತ್ತು ನೀಡಲಿದೆ</blockquote><span class="attribution">-ರಾಹುಲ್ಗಾಂಧಿ ಲೋಕಸಭೆಯ ವಿರೋಧಪಕ್ಷದ ನಾಯಕ</span></div>.<div><blockquote>ವಿದೇಶಿ ರಾಯಭಾರಿಗಳ ನಿಯೋಗ ಏಕೆ ಬಂದಿದೆಯೊ ನನಗೆ ತಿಳಿದಿಲ್ಲ. ಚುನಾವಣೆ ನಮ್ಮ ಆಂತರಿಕ ವ್ಯವಸ್ಥೆ. ನಮಗೆ ಅವರ ಪ್ರಮಾಣಪತ್ರ ಅಗತ್ಯವಿಲ್ಲ </blockquote><span class="attribution">-ಒಮರ್ ಅಬ್ದುಲ್ಲಾ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>