<p><strong>ಪುಣೆ:</strong> ನ್ಯಾಯಾಧೀಶರ ವರ್ಗಾವಣೆಯು ನ್ಯಾಯಾಂಗದ ಆಂತರಿಕ ವಿಚಾರವಾಗಿದ್ದು, ಈ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಾಲ್ ಭುಯಾನ್ ಅವರು ಶನಿವಾರ ಪ್ರತಿಪಾದಿಸಿದ್ದಾರೆ. </p>.<p>ಇಲ್ಲಿನ ಐಎಲ್ಎಸ್ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,‘ನ್ಯಾಯಾಂಗದ ಉತ್ತಮ ಆಡಳಿತದ ಉದ್ದೇಶದಿಂದಾಗಿ ನ್ಯಾಯಾಧೀಶರ ವರ್ಗಾವಣೆಗಳನ್ನು ಮಾಡಲಾಗುತ್ತದೆ’ ಎಂದಿದ್ದಾರೆ.</p>.<p>ಪ್ರಕರಣವೊಂದರಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಿಲುವು ತಳೆದಿದ್ದರು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಸಲಹೆಯಂತೆ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಧರನ್ ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಕೈಗೊಂಡಿತ್ತು. ಅದನ್ನು ನ್ಯಾ. ಭುಯಾನ್ ವಿರೋಧಿಸಿದ್ದರು.</p>.<p>ಆ ಪ್ರಕರಣವನ್ನು ಪ್ರಸ್ತಾಪಿಸದೇ ಮಾತನಾಡಿದ ಅವರು, ‘ಇಂತಹ ನ್ಯಾಯಾಧೀಶರನ್ನು ಇಂಥದ್ದೇ ನ್ಯಾಯಾಲಯಕ್ಕೆ ವರ್ಗಾಯಿಸಿ ಎಂದೋ, ವರ್ಗಾಯಿಸಬಾರದು ಎಂದೋ ಹೇಳುವ ಹಕ್ಕು ಸರ್ಕಾರಕ್ಕೆ ಇಲ್ಲ. ನ್ಯಾಯಾಂಗದ ಸ್ವಾತಂತ್ರ್ಯವು ಸಂವಿಧಾನದ ಮೂಲ ಲಕ್ಷಣವಾಗಿದ್ದು, ಅದರೊಂದಿಗೆ ಯಾವುದೇ ರೀತಿಯ ರಾಜಿಯೂ ಸಲ್ಲದು’ ಎಂದೂ ಹೇಳಿದ್ದಾರೆ. </p>.<p>ಜತೆಗೆ ಸ್ವತಂತ್ರ ನ್ಯಾಯಾಂಗವು ಕಾನೂನು ನಿಯಮಗಳನ್ನು ರಕ್ಷಿಸಲು ಮಾತ್ರ ಬೇಕಿರುವುದಲ್ಲ ಅದು ಪ್ರಜಾಪ್ರಭುತ್ವದ ಆಧಾರ ಸ್ತಂಭ ಎಂದೂ ಭುಯಾನ್ ಹೇಳಿದ್ದಾರೆ.</p>.<h2>ಸಂಸತ್ತಿಗಿಂತ ಸಂವಿಧಾನವೇ ಸರ್ವೋಚ್ಚ:</h2>.<p>‘ದೇಶದ ಸ್ಥಾಪಕ ಪಿತಾಮಹರು ಸಂಸತ್ತಿನ ಸಾರ್ವಭೌಮತ್ವಕ್ಕಿಂತ ಸಂವಿಧಾನದ ಶ್ರೇಷ್ಠತೆಗೆ ಒತ್ತು ನೀಡಿದ್ದಾರೆ. ಭಾರತದಲ್ಲಿ ಸಂಸತ್ತು ಸರ್ವೋಚ್ಚವಲ್ಲ, ಸಂವಿಧಾನವೇ ಸರ್ವೋಚ್ಚ’ ಎಂದು ನ್ಯಾಯಮೂರ್ತಿ ಉಜ್ವಲ್ ಭುಯಾನ್ ಹೇಳಿದ್ದಾರೆ.</p>.<p>‘ದೇಶವು ಕಾನೂನು ನಿಯಮಗಳಿಂದ ನಡೆಸಲ್ಪಡುತ್ತಿದೆಯೇ ವಿನಃ ವ್ಯಕ್ತಿಗಳಿಂದ ಅಥವಾ ಬಹುಸಂಖ್ಯಾತರ ಆಳ್ವಿಕೆಯಿಂದಲ್ಲ ಎಂಬುದನ್ನು ಖಾತರಿ ಪಡಿಸುವುದೇ ಸಾಂವಿಧಾನಿಕ ನೈತಿಕತೆ. ಅಧಿಕಾರದಲ್ಲಿ ಇರುವವರು ಅಧಿಕಾರ, ಶಕ್ತಿಯನ್ನು ಬಳಸಿಕೊಂಡು ನಿರ್ಧಾರಗಳನ್ನು ಬದಲಿಸುವ ಬದಲು ಸಾಂವಿಧಾನಿಕ ಮೌಲ್ಯಗಳನ್ನು ಅನುಸರಿಸಬೇಕು’ ಎಂದೂ ಅವರು ಕರೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ:</strong> ನ್ಯಾಯಾಧೀಶರ ವರ್ಗಾವಣೆಯು ನ್ಯಾಯಾಂಗದ ಆಂತರಿಕ ವಿಚಾರವಾಗಿದ್ದು, ಈ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಾಲ್ ಭುಯಾನ್ ಅವರು ಶನಿವಾರ ಪ್ರತಿಪಾದಿಸಿದ್ದಾರೆ. </p>.<p>ಇಲ್ಲಿನ ಐಎಲ್ಎಸ್ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,‘ನ್ಯಾಯಾಂಗದ ಉತ್ತಮ ಆಡಳಿತದ ಉದ್ದೇಶದಿಂದಾಗಿ ನ್ಯಾಯಾಧೀಶರ ವರ್ಗಾವಣೆಗಳನ್ನು ಮಾಡಲಾಗುತ್ತದೆ’ ಎಂದಿದ್ದಾರೆ.</p>.<p>ಪ್ರಕರಣವೊಂದರಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಿಲುವು ತಳೆದಿದ್ದರು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಸಲಹೆಯಂತೆ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಧರನ್ ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಕೈಗೊಂಡಿತ್ತು. ಅದನ್ನು ನ್ಯಾ. ಭುಯಾನ್ ವಿರೋಧಿಸಿದ್ದರು.</p>.<p>ಆ ಪ್ರಕರಣವನ್ನು ಪ್ರಸ್ತಾಪಿಸದೇ ಮಾತನಾಡಿದ ಅವರು, ‘ಇಂತಹ ನ್ಯಾಯಾಧೀಶರನ್ನು ಇಂಥದ್ದೇ ನ್ಯಾಯಾಲಯಕ್ಕೆ ವರ್ಗಾಯಿಸಿ ಎಂದೋ, ವರ್ಗಾಯಿಸಬಾರದು ಎಂದೋ ಹೇಳುವ ಹಕ್ಕು ಸರ್ಕಾರಕ್ಕೆ ಇಲ್ಲ. ನ್ಯಾಯಾಂಗದ ಸ್ವಾತಂತ್ರ್ಯವು ಸಂವಿಧಾನದ ಮೂಲ ಲಕ್ಷಣವಾಗಿದ್ದು, ಅದರೊಂದಿಗೆ ಯಾವುದೇ ರೀತಿಯ ರಾಜಿಯೂ ಸಲ್ಲದು’ ಎಂದೂ ಹೇಳಿದ್ದಾರೆ. </p>.<p>ಜತೆಗೆ ಸ್ವತಂತ್ರ ನ್ಯಾಯಾಂಗವು ಕಾನೂನು ನಿಯಮಗಳನ್ನು ರಕ್ಷಿಸಲು ಮಾತ್ರ ಬೇಕಿರುವುದಲ್ಲ ಅದು ಪ್ರಜಾಪ್ರಭುತ್ವದ ಆಧಾರ ಸ್ತಂಭ ಎಂದೂ ಭುಯಾನ್ ಹೇಳಿದ್ದಾರೆ.</p>.<h2>ಸಂಸತ್ತಿಗಿಂತ ಸಂವಿಧಾನವೇ ಸರ್ವೋಚ್ಚ:</h2>.<p>‘ದೇಶದ ಸ್ಥಾಪಕ ಪಿತಾಮಹರು ಸಂಸತ್ತಿನ ಸಾರ್ವಭೌಮತ್ವಕ್ಕಿಂತ ಸಂವಿಧಾನದ ಶ್ರೇಷ್ಠತೆಗೆ ಒತ್ತು ನೀಡಿದ್ದಾರೆ. ಭಾರತದಲ್ಲಿ ಸಂಸತ್ತು ಸರ್ವೋಚ್ಚವಲ್ಲ, ಸಂವಿಧಾನವೇ ಸರ್ವೋಚ್ಚ’ ಎಂದು ನ್ಯಾಯಮೂರ್ತಿ ಉಜ್ವಲ್ ಭುಯಾನ್ ಹೇಳಿದ್ದಾರೆ.</p>.<p>‘ದೇಶವು ಕಾನೂನು ನಿಯಮಗಳಿಂದ ನಡೆಸಲ್ಪಡುತ್ತಿದೆಯೇ ವಿನಃ ವ್ಯಕ್ತಿಗಳಿಂದ ಅಥವಾ ಬಹುಸಂಖ್ಯಾತರ ಆಳ್ವಿಕೆಯಿಂದಲ್ಲ ಎಂಬುದನ್ನು ಖಾತರಿ ಪಡಿಸುವುದೇ ಸಾಂವಿಧಾನಿಕ ನೈತಿಕತೆ. ಅಧಿಕಾರದಲ್ಲಿ ಇರುವವರು ಅಧಿಕಾರ, ಶಕ್ತಿಯನ್ನು ಬಳಸಿಕೊಂಡು ನಿರ್ಧಾರಗಳನ್ನು ಬದಲಿಸುವ ಬದಲು ಸಾಂವಿಧಾನಿಕ ಮೌಲ್ಯಗಳನ್ನು ಅನುಸರಿಸಬೇಕು’ ಎಂದೂ ಅವರು ಕರೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>