<p><strong>ನವದೆಹಲಿ:</strong> ‘ಜಗತ್ತಿನಾದ್ಯಂತ ಯುದ್ಧಗಳು, ಸಂಘರ್ಷಗಳು ನಡೆಯುತ್ತಿವೆ. ಇವುಗಳು ಅಂತರರಾಷ್ಟ್ರೀಯ ಸಹಕಾರದ ರೂಪುರೇಷೆಗೆ ಬೆದರಿಕೆ ಒಡ್ಡುತ್ತಿವೆ. ಈ ಹೊತ್ತಿನಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಣ ಸಂಬಂಧವು ಐಷಾರಾಮಿ ಅಗತ್ಯವಾಗದೆ, ಜೀವನಾಡಿಯಾಗಿ ಕೆಲಸ ಮಾಡಲಿದೆ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅಭಿಪ್ರಾಯಪಟ್ಟರು.</p>.<p>ಇತ್ತೀಚೆಗೆ ನಡೆದ ಭಾರತ–ಫ್ರಾನ್ಸ್ ಕಾನೂನು ಮತ್ತು ವ್ಯಾಪಾರ ಸಮ್ಮೇಳನದಲ್ಲಿ ‘ಗಡಿ ವಿವಾದಗಳ ನ್ಯಾಯತೀರ್ಮಾನ: ನ್ಯಾಯಾಲಯಗಳು, ಮಧ್ಯಸ್ಥಿಕೆ ಮತ್ತು ಭಾರತ–ಫ್ರಾನ್ಸ್ನ 2026ರ ನಾವೀನ್ಯ’ ವಿಷಯದ ಕುರಿತು ಅವರು ಮಾತನಾಡಿದರು.</p>.<p>‘ಭಾರತ ಮತ್ತು ಫ್ರಾನ್ಸ್ ದೇಶಗಳು ಹೊಸದೊಂದು ಘಟ್ಟಕ್ಕೆ ಪದಾರ್ಪಣೆ ಮಾಡಿದ್ದೇವೆ. ವಿವಾದಗಳ ನ್ಯಾಯ ತೀರ್ಮಾನದ ಸ್ವರೂಪವು ಪ್ರತಿಕ್ರಿಯಾತ್ಮಾಕವಾಗಿರದೆ, ನಿರ್ಧಾರಾತ್ಮಕವಾಗಿರಲಿದೆ. ಮಾರ್ಗದರ್ಶನವಾಗಿರದೆ, ತತ್ವಗಳ ಆಧಾರದಲ್ಲಿ ಇರಲಿದೆ ಮತ್ತು ನ್ಯಾಯ ತೀರ್ಮಾನವು ಕೇವಲ ಪರಿಣಾಮಕಾರಿಯಾಗಿರದೆ, ಅನಂತವಾಗಿರಲಿದೆ’ ಎಂದರು.</p>.<p>‘ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಎರಡೂ ದೇಶಗಳ ನುರಿತ ವೃತ್ತಿಪರರನ್ನು ನಿಯೋಜಿಸಲು ದಾರಿ ಸೃಷ್ಟಿಯಾಗಿದೆ. ಇದರಿಂದ ತಾಂತ್ರಿಕವಾದ ಮತ್ತು ಸಾಂಸ್ಕೃತಿಕ ತಜ್ಞತೆಯೂ ದೊರಕಲಿದೆ. ನ್ಯಾಯ ತೀರ್ಮಾನ ಸುಲಲಿತವಾಗಲಿದೆ’ ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಜಗತ್ತಿನಾದ್ಯಂತ ಯುದ್ಧಗಳು, ಸಂಘರ್ಷಗಳು ನಡೆಯುತ್ತಿವೆ. ಇವುಗಳು ಅಂತರರಾಷ್ಟ್ರೀಯ ಸಹಕಾರದ ರೂಪುರೇಷೆಗೆ ಬೆದರಿಕೆ ಒಡ್ಡುತ್ತಿವೆ. ಈ ಹೊತ್ತಿನಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಣ ಸಂಬಂಧವು ಐಷಾರಾಮಿ ಅಗತ್ಯವಾಗದೆ, ಜೀವನಾಡಿಯಾಗಿ ಕೆಲಸ ಮಾಡಲಿದೆ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅಭಿಪ್ರಾಯಪಟ್ಟರು.</p>.<p>ಇತ್ತೀಚೆಗೆ ನಡೆದ ಭಾರತ–ಫ್ರಾನ್ಸ್ ಕಾನೂನು ಮತ್ತು ವ್ಯಾಪಾರ ಸಮ್ಮೇಳನದಲ್ಲಿ ‘ಗಡಿ ವಿವಾದಗಳ ನ್ಯಾಯತೀರ್ಮಾನ: ನ್ಯಾಯಾಲಯಗಳು, ಮಧ್ಯಸ್ಥಿಕೆ ಮತ್ತು ಭಾರತ–ಫ್ರಾನ್ಸ್ನ 2026ರ ನಾವೀನ್ಯ’ ವಿಷಯದ ಕುರಿತು ಅವರು ಮಾತನಾಡಿದರು.</p>.<p>‘ಭಾರತ ಮತ್ತು ಫ್ರಾನ್ಸ್ ದೇಶಗಳು ಹೊಸದೊಂದು ಘಟ್ಟಕ್ಕೆ ಪದಾರ್ಪಣೆ ಮಾಡಿದ್ದೇವೆ. ವಿವಾದಗಳ ನ್ಯಾಯ ತೀರ್ಮಾನದ ಸ್ವರೂಪವು ಪ್ರತಿಕ್ರಿಯಾತ್ಮಾಕವಾಗಿರದೆ, ನಿರ್ಧಾರಾತ್ಮಕವಾಗಿರಲಿದೆ. ಮಾರ್ಗದರ್ಶನವಾಗಿರದೆ, ತತ್ವಗಳ ಆಧಾರದಲ್ಲಿ ಇರಲಿದೆ ಮತ್ತು ನ್ಯಾಯ ತೀರ್ಮಾನವು ಕೇವಲ ಪರಿಣಾಮಕಾರಿಯಾಗಿರದೆ, ಅನಂತವಾಗಿರಲಿದೆ’ ಎಂದರು.</p>.<p>‘ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಎರಡೂ ದೇಶಗಳ ನುರಿತ ವೃತ್ತಿಪರರನ್ನು ನಿಯೋಜಿಸಲು ದಾರಿ ಸೃಷ್ಟಿಯಾಗಿದೆ. ಇದರಿಂದ ತಾಂತ್ರಿಕವಾದ ಮತ್ತು ಸಾಂಸ್ಕೃತಿಕ ತಜ್ಞತೆಯೂ ದೊರಕಲಿದೆ. ನ್ಯಾಯ ತೀರ್ಮಾನ ಸುಲಲಿತವಾಗಲಿದೆ’ ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>