<p><strong>ಹೈದರಾಬಾದ್</strong>: ಮುಂಬರಲಿರುವ ವಿಧಾನಸಭೆ ಚುನಾವಣೆ ವೇಳೆಗೆ ಹೊಸ ಪಕ್ಷ ರಚಿಸುವುದಾಗಿ ಬಿಆರ್ಎಸ್ ಮುಖ್ಯಸ್ಥ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ, ಕೆ.ಕವಿತಾ ಅವರು ಸೋಮವಾರ ಘೋಷಿಸಿದ್ದಾರೆ.</p>.<p>ತೆಲಂಗಾಣ ಹುತಾತ್ಮರ ಸ್ಮಾರಕದಲ್ಲಿ ಈ ಬಗ್ಗೆ ಮಾತನಾಡಿದ ಅವರು, ತಮ್ಮ ಸಂಸ್ಥೆ ತೆಲಂಗಾಣ ಜಾಗೃತಿಯು ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ರಾಜಕೀಯ ಪಕ್ಷವಾಗಿ ಬೆಳೆದು, ತೆಲಂಗಾಣದ ಜನರ ಪರವಾಗಿ ಹೋರಾಟ ನಡೆಸಲು ಸಿದ್ಧವಾಗಿರುತ್ತದೆ ಎಂದಿದ್ದಾರೆ. </p>.<p>ಅಲ್ಲದೇ, ‘ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ರಾಜಕೀಯ ಪಕ್ಷವೊಂದು ಕಾರ್ಯನಿರ್ವಹಿಸಬೇಕು ಎಂದು ಬಯಸುವವರು, ಎಡಪಕ್ಷಗಳ ಸಹೋದರರು ನನಗೆ ಬೆಂಬಲ ನೀಡಿ’ ಎಂದೂ ಕವಿತಾ ಮನವಿ ಮಾಡಿದ್ದಾರೆ.</p>.<p>ಇದೇ ವೇಳೆ, ‘ತೆಲಂಗಾಣಕ್ಕಾಗಿ ಹೋರಾಡಿದ ಲಕ್ಷಾಂತರ ಕಾರ್ಯಕರ್ತರಿಗೆ ಟಿಆರ್ಎಸ್ನಲ್ಲಿ ಗೌರವ ಸಿಗಲಿಲ್ಲ. ಹಲವು ಹುದ್ದೆಗಳು ಇದ್ದರೂ ಅವರಿಗೆ ನೀಡಲಿಲ್ಲ. ತೆಲಂಗಾಣ ಚಳಿವಳಿಯಲ್ಲಿ ಭಾಗಿಯಾದ ಮಹಿಳೆಯರಿಗೂ ಯಾವುದೇ ಅವಕಾಶ ಸಿಗಲಿಲ್ಲ’ ಎಂದೂ ದೂರಿದ್ದಾರೆ.</p>.<p><strong>ಭಾವುಕರಾದ ಕವಿತಾ:</strong> ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಿಆರ್ಎಸ್ನಿಂದ ಬೇರಾಗುತ್ತಿರುವುದಾಗಿ ಪರಿಷತ್ನಲ್ಲಿ ತಿಳಿಸಿದ ಕವಿತಾ, ಅಲ್ಲಿಯೇ ವಿದಾಯ ಭಾಷಣವನ್ನೂ ಮಾಡಿ ಭಾವುಕರಾಗಿದ್ದರು.</p>.<p>‘ಬಿಆರ್ಎಸ್ ಜತೆಗಿನ ನನ್ನ ಹೋರಾಟವನ್ನು ಆಸ್ತಿಗಾಗಿ ನಡೆಯುತ್ತಿರುವ ಜಟಾಪಟಿ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ, ದೇವರು ಮತ್ತು ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ನನ್ನ ಹೋರಾಟ ಆಸ್ತಿಗಾಗಿ ಅಲ್ಲ. ಸ್ವಾಭಿಮಾನಕ್ಕಾಗಿ’ ಎಂದೂ ಕವಿತಾ ಹೇಳಿದ್ದಾರೆ. </p>.<p>‘ಜತೆಗೆ ಸಾಂವಿಧಾನಿಕ ಮನೋಭಾವವಿಲ್ಲದೇ, ಯಾವ ಸೂಚನೆಯನ್ನೂ ನೀಡದೇ ನನ್ನನ್ನು ಅಮಾನತುಗೊಳಿಸಲು ಬಿಆರ್ಎಸ್ ರಾತ್ರೋರಾತ್ರಿ ಶಿಸ್ತು ಸಮಿತಿ ರಚಿಸಿತು. ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪಕ್ಷದಲ್ಲಿ ಹತ್ತಿಕ್ಕಲಾಗಿತ್ತು’ ಎಂದು ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಮುಂಬರಲಿರುವ ವಿಧಾನಸಭೆ ಚುನಾವಣೆ ವೇಳೆಗೆ ಹೊಸ ಪಕ್ಷ ರಚಿಸುವುದಾಗಿ ಬಿಆರ್ಎಸ್ ಮುಖ್ಯಸ್ಥ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ, ಕೆ.ಕವಿತಾ ಅವರು ಸೋಮವಾರ ಘೋಷಿಸಿದ್ದಾರೆ.</p>.<p>ತೆಲಂಗಾಣ ಹುತಾತ್ಮರ ಸ್ಮಾರಕದಲ್ಲಿ ಈ ಬಗ್ಗೆ ಮಾತನಾಡಿದ ಅವರು, ತಮ್ಮ ಸಂಸ್ಥೆ ತೆಲಂಗಾಣ ಜಾಗೃತಿಯು ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ರಾಜಕೀಯ ಪಕ್ಷವಾಗಿ ಬೆಳೆದು, ತೆಲಂಗಾಣದ ಜನರ ಪರವಾಗಿ ಹೋರಾಟ ನಡೆಸಲು ಸಿದ್ಧವಾಗಿರುತ್ತದೆ ಎಂದಿದ್ದಾರೆ. </p>.<p>ಅಲ್ಲದೇ, ‘ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ರಾಜಕೀಯ ಪಕ್ಷವೊಂದು ಕಾರ್ಯನಿರ್ವಹಿಸಬೇಕು ಎಂದು ಬಯಸುವವರು, ಎಡಪಕ್ಷಗಳ ಸಹೋದರರು ನನಗೆ ಬೆಂಬಲ ನೀಡಿ’ ಎಂದೂ ಕವಿತಾ ಮನವಿ ಮಾಡಿದ್ದಾರೆ.</p>.<p>ಇದೇ ವೇಳೆ, ‘ತೆಲಂಗಾಣಕ್ಕಾಗಿ ಹೋರಾಡಿದ ಲಕ್ಷಾಂತರ ಕಾರ್ಯಕರ್ತರಿಗೆ ಟಿಆರ್ಎಸ್ನಲ್ಲಿ ಗೌರವ ಸಿಗಲಿಲ್ಲ. ಹಲವು ಹುದ್ದೆಗಳು ಇದ್ದರೂ ಅವರಿಗೆ ನೀಡಲಿಲ್ಲ. ತೆಲಂಗಾಣ ಚಳಿವಳಿಯಲ್ಲಿ ಭಾಗಿಯಾದ ಮಹಿಳೆಯರಿಗೂ ಯಾವುದೇ ಅವಕಾಶ ಸಿಗಲಿಲ್ಲ’ ಎಂದೂ ದೂರಿದ್ದಾರೆ.</p>.<p><strong>ಭಾವುಕರಾದ ಕವಿತಾ:</strong> ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಿಆರ್ಎಸ್ನಿಂದ ಬೇರಾಗುತ್ತಿರುವುದಾಗಿ ಪರಿಷತ್ನಲ್ಲಿ ತಿಳಿಸಿದ ಕವಿತಾ, ಅಲ್ಲಿಯೇ ವಿದಾಯ ಭಾಷಣವನ್ನೂ ಮಾಡಿ ಭಾವುಕರಾಗಿದ್ದರು.</p>.<p>‘ಬಿಆರ್ಎಸ್ ಜತೆಗಿನ ನನ್ನ ಹೋರಾಟವನ್ನು ಆಸ್ತಿಗಾಗಿ ನಡೆಯುತ್ತಿರುವ ಜಟಾಪಟಿ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ, ದೇವರು ಮತ್ತು ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ನನ್ನ ಹೋರಾಟ ಆಸ್ತಿಗಾಗಿ ಅಲ್ಲ. ಸ್ವಾಭಿಮಾನಕ್ಕಾಗಿ’ ಎಂದೂ ಕವಿತಾ ಹೇಳಿದ್ದಾರೆ. </p>.<p>‘ಜತೆಗೆ ಸಾಂವಿಧಾನಿಕ ಮನೋಭಾವವಿಲ್ಲದೇ, ಯಾವ ಸೂಚನೆಯನ್ನೂ ನೀಡದೇ ನನ್ನನ್ನು ಅಮಾನತುಗೊಳಿಸಲು ಬಿಆರ್ಎಸ್ ರಾತ್ರೋರಾತ್ರಿ ಶಿಸ್ತು ಸಮಿತಿ ರಚಿಸಿತು. ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪಕ್ಷದಲ್ಲಿ ಹತ್ತಿಕ್ಕಲಾಗಿತ್ತು’ ಎಂದು ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>