ಬಳಿಕ ರಾಹುಲ್ ಗಾಂಧಿ ಮೇಡಿಗಡ್ಡ ಬ್ಯಾರೇಜ್ಗೆ ಭೇಟಿ ನೀಡಿದರು. ‘ತೆಲಂಗಾಣದ ಕಾಳೇಶ್ವರಂ ಯೋಜನೆಯ ಭಾಗವಾಗಿರುವ ಮೇಡಿಗಡ್ಡ ಬ್ಯಾರೇಜ್ಗೆ ನಾನು ಭೇಟಿ ನೀಡಿದ್ದೇನೆ, ಕಳಪೆ ಕಾಮಗಾರಿಯಿಂದಾಗಿ ಪಿಲ್ಲರ್ಗಳು ಮುಳುಗುತ್ತಿವೆ. ಹಲವು ಪಿಲ್ಲರ್ಗಳಲ್ಲಿ ಬಿರುಕು ಉಂಟಾಗಿದೆ‘ ಎಂದು ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ರೇವಂತ್ ರೆಡ್ಡಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ನಾಯಕ ಭಟ್ಟಿ ವಿಕ್ರಮಾರ್ಕ ಮತ್ತು ಇತರ ಕಾಂಗ್ರೆಸ್ ಮುಖಂಡರು ಮೇಡಿಗಡ್ಡ ಬ್ಯಾರೇಜ್ಗೆ ಭೇಟಿ ನೀಡಿದ್ದರು.