‘ಕರ್ನಾಟಕದ ಜನರು ಕಾಂಗ್ರೆಸ್ಗೆ ಅಧಿಕಾರ ನೀಡಿದ್ದಾರೆ. ಚುನಾವಣಾ ಪೂರ್ವದಲ್ಲಿ ತಾನು ನೀಡಿದ್ದ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸುತ್ತದೆ ಎಂದು ನಾವು ನಿರೀಕ್ಷೆ ಮಾಡುತ್ತೇವೆ. ಆದರೆ, ಕರ್ನಾಟಕ, ಉತ್ತರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಬಿಹಾರ್, ಜಾರ್ಖಂಡ್ ಅಥವಾ ಪಶ್ಚಿಮ ಬಂಗಾಳ– ಹೀಗೆ ರಾಜ್ಯ ಯಾವುದೇ ಆಗಿರಲಿ ಅಲ್ಲಿ ನಾವು ಎಐಎಂಐಎಂ ಪಕ್ಷವನ್ನು ಬಲಗೊಳಿಸುವುದನ್ನು ಮುಂದುವರಿಸುತ್ತೇವೆ’ ಎಂದು ಒವೈಸಿ ತಿಳಿಸಿದರು.