<p><strong>ರುದ್ರಪ್ರಯಾಗ (ಉತ್ತರಾಖಂಡ)</strong>: ಕೇದಾರನಾಥದಿಂದ ಗುಪ್ತಕಾಶಿಗೆ ಸಾಗುತ್ತಿದ್ದ ಹೆಲಿಕಾಪ್ಟರ್ ಗೌರಿಕುಂಡ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಪತನಗೊಂಡಿದ್ದು, ಪೈಲಟ್, ಹೆಣ್ಣುಮಗು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.</p><p>ಪ್ರತಿಕೂಲ ಹವಾಮಾನ ಅವಘಡಕ್ಕೆ ಕಾರಣವಾಗಿದೆ. ‘ಆರ್ಯನ್ ಏವಿಯೇಷನ್’ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ ‘ಬೆಲ್ 407’ ಹೆಲಿಕಾಪ್ಟರ್ ಗೌರಿಕುಂಡ ಮತ್ತು ತ್ರಿಯುಗಿ ನಾರಾಯಣ ನಡುವೆ ಪತನಗೊಂಡಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಭಸ್ಮವಾಗಿದೆ. </p><p>ರುದ್ರಪ್ರಯಾಗ್ ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಜ್ವಾರ್ ಅವರ ಪ್ರಕಾರ, ‘ಪ್ರತಿಕೂಲ ಹವಾಮಾನದ ಕಾರಣ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಇದು, ಅಪಘಾತಕ್ಕೆ ಕಾರಣವಾಗಿರಬಹುದು.’</p><p>‘ಮೃತರಲ್ಲಿ 2 ವರ್ಷದ ಮಗು ಸೇರಿ ಆರು ಪ್ರಯಾಣಿಕರು, ಒಬ್ಬ ಸಿಬ್ಬಂದಿ ಸೇರಿದ್ದಾರೆ. ಹೆಲಿಕಾಪ್ಟರ್ ಬೆಳಿಗ್ಗೆ 5.10ಕ್ಕೆ ನಿರ್ಗಮಿಸಿದ್ದು, ಕೇದಾರನಾಥ ಹೆಲಿಪ್ಯಾಡ್ನಲ್ಲಿ 5.18ಕ್ಕೆ ಇಳಿಸಲಾಗಿತ್ತು. ಮತ್ತೆ 5.19ಕ್ಕೆ ಅಲ್ಲಿಂದ ಟೇಕ್ಆಫ್ ಆಗಿತ್ತು’ ಎಂದು ತಿಳಿಸಿದ್ದಾರೆ. </p><p>ಮೃತರು ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶದವರು. ಪೈಲಟ್ ರಾಜವೀರ್ ಸಿಂಗ್ ಚೌಹಾಣ್ ಈ ಹಿಂದೆ ಭಾರತೀಯ ಸೇನೆಯಲ್ಲಿ 15 ವರ್ಷ ಕೆಲಸ ಮಾಡಿದ್ದು, ವಿಸ್ತೃತ ಸೇವಾ ಅನುಭವ ಹೊಂದಿದ್ದರು.</p><p>ಸದ್ಯ, ಜೈಪುರದ ನಿವಾಸಿಯಾಗಿರುವ ಚೌಹಾಣ್ ಅವರು ಆರ್ಯನ್ ಏವಿಯೇಷನ್ ಸಂಸ್ಥೆಯಲ್ಲಿ 2024ರ ಅಕ್ಟೋಬರ್ನಿಂದಲೂ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. </p><p>ಪೈಲಟ್ ಹೊರತುಪಡಿಸಿ ಮಹಾರಾಷ್ಟ್ರದ ಉದ್ಯಮಿ ರಾಜಕುಮಾರ್ ಜೈಸ್ವಾಲ್, ಅವರ ಪತ್ನಿ ಶ್ರದ್ಧಾ, ಇವರ ಪುತ್ರಿ ಕಾಶಿ (2), ಬದರಿನಾಥ ದೇಗುಲ ಟ್ರಸ್ಟ್ ಸದಸ್ಯ ವಿಕ್ರಮ್ ಸಿಂಗ್ ರಾವುತ್, ಉತ್ತರ ಪ್ರದೇಶದ ವಿನೋದಾ ದೇವಿ (66), ತುಷ್ಟಿಸಿಂಗ್ (19) ಮೃತಪಟ್ಟಿದ್ದಾರೆ.</p><p>ತನಿಖೆ: ‘ಹೆಲಿಕಾಪ್ಟರ್ ಅವಘಡದ ಕುರಿತು ವೈಮಾನಿಕ ಅಪಘಾತ ತನಿಖಾ ಮಂಡಳಿ (ಎಎಐಬಿ) ತನಿಖೆ ನಡೆಸಲಿದೆ’ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಿಸಿದೆ. </p><p>ಮುಂಜಾಗ್ರತಾ ಕ್ರಮವಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಯಾತ್ರಾ ಸ್ಥಳಗಳಾದ ಕೇದಾರನಾಥ, ಬದರಿನಾಥ, ಯಮುನೋತ್ರಿ, ಗಂಗೋತ್ರಿಗೆ ಎರಡು ದಿನ ಹೆಲಿಕಾಪ್ಟರ್ ಪ್ರಯಾಣ ರದ್ದುಪಡಿಸಿದೆ.</p>.<blockquote><strong>ಈ ವರ್ಷದಲ್ಲಿನ ಐದನೇ ಅಪಘಾತ</strong> </blockquote>.<p> <strong>ಮುಂಬೈ</strong>: ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ ಹೆಲಿಕಾಪ್ಟರ್ ದುರಂತದ ಐದನೇ ಪ್ರಕರಣ ಇದಾಗಿದೆ.</p><p><strong>ಹಿಂದಿನ ಅವಗಢಗಳ ವಿವರ ಹೀಗಿದೆ:</strong></p><p>ಮೇ 8: ಗಂಗೋತ್ರಿ ಧಾಮ್ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಗಂಗಾನಾನಿ ನಾಗರಾಜ ದೇವಸ್ಥಾನದ ಬಳಿ ಬೆಟ್ಟಪ್ರದೇಶದಲ್ಲಿ ಅಪಘಾತಕ್ಕೀಡಾಗಿತ್ತು. 6 ಮಂದಿ ಮೃತಪಟ್ಟಿದ್ದರು.</p><p>ಮೇ 12: ಪೈಲಟ್ನ ನಿಯಂತ್ರಣ ತಪ್ಪಿದ್ದ ಹೆಲಿಕಾಪ್ಟರ್ ಬದರೀನಾಥ ಹೆಲಿಪ್ಯಾಡ್ನಿಂದ ಟೇಕ್ ಆಫ್ ಆಗಿದ್ದ ಕೆಲ ಹೊತ್ತಿನಲ್ಲೇ ಅಪಘಾತಕ್ಕೀಡಾಗಿದ್ದು ನಿಲುಗಡೆ ಮಾಡಿದ್ದ ವಾಹನಗಳಿಗೆ ಅಪ್ಪಳಿಸಿತ್ತು. ಜೀವಹಾನಿ ಆಗಿರಲಿಲ್ಲ.</p><p>ಮೇ 17: ಹೃಷಿಕೇಶದ ಎಐಐಎಂಸ್ ನಿಯೋಜಿಸಿದ್ದ ಏರ್ ಆಂಬುಲೆನ್ಸ್ ಕೇದಾರನಾಥ ಹೆಲಿಪ್ಯಾಡ್ ಬಳಿ ಅಪಘಾತಕ್ಕೆ ಈಡಾಗಿತ್ತು. ಹೆಲಿಕಾಪ್ಟರ್ ಹಿಂಬದಿಯ ಭಾಗ ನೆಲಕ್ಕೆ ತಗುಲಿದ್ದು ಅಪಘಾತಕ್ಕೆ ಕಾರಣವಾಗಿತ್ತು. ಆಗ ಹೆಲಿಕಾಪ್ಟರ್ನಲ್ಲಿ ಪೈಲಟ್ ವೈದ್ಯ ಮತ್ತು ಶುಶ್ರೂಷಕ ಇದ್ದು ಅದೃಷ್ಟವಶಾತ್ ಪಾರಾಗಿದ್ದರು.</p><p>ಜೂನ್ 7: ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಗುಪ್ತಕಾಶಿ–ಗೌರಿಕುಂಡ ಹೆದ್ದಾರಿಯಲ್ಲಿ ತಾಂತ್ರಿಕ ದೋಷದ ಕಾರಣ ತುರ್ತು ಭೂ ಸ್ಪರ್ಶ ಮಾಡಿತ್ತು. ಪೈಲಟ್ ಗಾಯಗೊಂಡಿದ್ದು ಐವರು ಯಾತ್ರಿಕರು ಪಾರಾಗಿದ್ದರು.</p><p><strong>ತಜ್ಞರ ಸಮಿತಿ ರಚನೆ</strong></p><p><strong>ಡೆಹ್ರಾಡೂನ್</strong>: ಚಾರ್ಧಾಮ್ ಯಾತ್ರೆಯ ಮಾರ್ಗದಲ್ಲಿ ಇತ್ತೀಚೆಗೆ ಆಗಾಗ್ಗೆ ಹೆಲಿಕಾಪ್ಟರ್ ಅಪಘಾತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ನಿರ್ವಹಣೆ ಮತ್ತು ಸುರಕ್ಷತಾ ಕ್ರಮ ಕುರಿತು ಹೊಸ ಮಾರ್ಗಸೂಚಿ ಹೊರಡಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ. ಈ ಕುರಿತು ಅಗತ್ಯ ಸಲಹೆ ನೀಡಲು ತಜ್ಞರ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.</p><p>ಎಲ್ಲ ಪ್ರಯಾಣಿಕರ ಸುರಕ್ಷತೆ ಕುರಿತು ಖಾತರಿಪಡಿಸಿಕೊಂಡ ನಂತರವೇ ಹೆಲಿಕಾಪ್ಟರ್ ಸೇವೆ ಆರಂಭವಾಗಲಿದೆ. ಯಾತ್ರಿಗಳ ಸುರಕ್ಷತೆಯನ್ನು ಕಡೆಗಣಿಸಲಾಗದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರುದ್ರಪ್ರಯಾಗ (ಉತ್ತರಾಖಂಡ)</strong>: ಕೇದಾರನಾಥದಿಂದ ಗುಪ್ತಕಾಶಿಗೆ ಸಾಗುತ್ತಿದ್ದ ಹೆಲಿಕಾಪ್ಟರ್ ಗೌರಿಕುಂಡ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಪತನಗೊಂಡಿದ್ದು, ಪೈಲಟ್, ಹೆಣ್ಣುಮಗು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.</p><p>ಪ್ರತಿಕೂಲ ಹವಾಮಾನ ಅವಘಡಕ್ಕೆ ಕಾರಣವಾಗಿದೆ. ‘ಆರ್ಯನ್ ಏವಿಯೇಷನ್’ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ ‘ಬೆಲ್ 407’ ಹೆಲಿಕಾಪ್ಟರ್ ಗೌರಿಕುಂಡ ಮತ್ತು ತ್ರಿಯುಗಿ ನಾರಾಯಣ ನಡುವೆ ಪತನಗೊಂಡಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಭಸ್ಮವಾಗಿದೆ. </p><p>ರುದ್ರಪ್ರಯಾಗ್ ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಜ್ವಾರ್ ಅವರ ಪ್ರಕಾರ, ‘ಪ್ರತಿಕೂಲ ಹವಾಮಾನದ ಕಾರಣ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಇದು, ಅಪಘಾತಕ್ಕೆ ಕಾರಣವಾಗಿರಬಹುದು.’</p><p>‘ಮೃತರಲ್ಲಿ 2 ವರ್ಷದ ಮಗು ಸೇರಿ ಆರು ಪ್ರಯಾಣಿಕರು, ಒಬ್ಬ ಸಿಬ್ಬಂದಿ ಸೇರಿದ್ದಾರೆ. ಹೆಲಿಕಾಪ್ಟರ್ ಬೆಳಿಗ್ಗೆ 5.10ಕ್ಕೆ ನಿರ್ಗಮಿಸಿದ್ದು, ಕೇದಾರನಾಥ ಹೆಲಿಪ್ಯಾಡ್ನಲ್ಲಿ 5.18ಕ್ಕೆ ಇಳಿಸಲಾಗಿತ್ತು. ಮತ್ತೆ 5.19ಕ್ಕೆ ಅಲ್ಲಿಂದ ಟೇಕ್ಆಫ್ ಆಗಿತ್ತು’ ಎಂದು ತಿಳಿಸಿದ್ದಾರೆ. </p><p>ಮೃತರು ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶದವರು. ಪೈಲಟ್ ರಾಜವೀರ್ ಸಿಂಗ್ ಚೌಹಾಣ್ ಈ ಹಿಂದೆ ಭಾರತೀಯ ಸೇನೆಯಲ್ಲಿ 15 ವರ್ಷ ಕೆಲಸ ಮಾಡಿದ್ದು, ವಿಸ್ತೃತ ಸೇವಾ ಅನುಭವ ಹೊಂದಿದ್ದರು.</p><p>ಸದ್ಯ, ಜೈಪುರದ ನಿವಾಸಿಯಾಗಿರುವ ಚೌಹಾಣ್ ಅವರು ಆರ್ಯನ್ ಏವಿಯೇಷನ್ ಸಂಸ್ಥೆಯಲ್ಲಿ 2024ರ ಅಕ್ಟೋಬರ್ನಿಂದಲೂ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. </p><p>ಪೈಲಟ್ ಹೊರತುಪಡಿಸಿ ಮಹಾರಾಷ್ಟ್ರದ ಉದ್ಯಮಿ ರಾಜಕುಮಾರ್ ಜೈಸ್ವಾಲ್, ಅವರ ಪತ್ನಿ ಶ್ರದ್ಧಾ, ಇವರ ಪುತ್ರಿ ಕಾಶಿ (2), ಬದರಿನಾಥ ದೇಗುಲ ಟ್ರಸ್ಟ್ ಸದಸ್ಯ ವಿಕ್ರಮ್ ಸಿಂಗ್ ರಾವುತ್, ಉತ್ತರ ಪ್ರದೇಶದ ವಿನೋದಾ ದೇವಿ (66), ತುಷ್ಟಿಸಿಂಗ್ (19) ಮೃತಪಟ್ಟಿದ್ದಾರೆ.</p><p>ತನಿಖೆ: ‘ಹೆಲಿಕಾಪ್ಟರ್ ಅವಘಡದ ಕುರಿತು ವೈಮಾನಿಕ ಅಪಘಾತ ತನಿಖಾ ಮಂಡಳಿ (ಎಎಐಬಿ) ತನಿಖೆ ನಡೆಸಲಿದೆ’ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಿಸಿದೆ. </p><p>ಮುಂಜಾಗ್ರತಾ ಕ್ರಮವಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಯಾತ್ರಾ ಸ್ಥಳಗಳಾದ ಕೇದಾರನಾಥ, ಬದರಿನಾಥ, ಯಮುನೋತ್ರಿ, ಗಂಗೋತ್ರಿಗೆ ಎರಡು ದಿನ ಹೆಲಿಕಾಪ್ಟರ್ ಪ್ರಯಾಣ ರದ್ದುಪಡಿಸಿದೆ.</p>.<blockquote><strong>ಈ ವರ್ಷದಲ್ಲಿನ ಐದನೇ ಅಪಘಾತ</strong> </blockquote>.<p> <strong>ಮುಂಬೈ</strong>: ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ ಹೆಲಿಕಾಪ್ಟರ್ ದುರಂತದ ಐದನೇ ಪ್ರಕರಣ ಇದಾಗಿದೆ.</p><p><strong>ಹಿಂದಿನ ಅವಗಢಗಳ ವಿವರ ಹೀಗಿದೆ:</strong></p><p>ಮೇ 8: ಗಂಗೋತ್ರಿ ಧಾಮ್ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಗಂಗಾನಾನಿ ನಾಗರಾಜ ದೇವಸ್ಥಾನದ ಬಳಿ ಬೆಟ್ಟಪ್ರದೇಶದಲ್ಲಿ ಅಪಘಾತಕ್ಕೀಡಾಗಿತ್ತು. 6 ಮಂದಿ ಮೃತಪಟ್ಟಿದ್ದರು.</p><p>ಮೇ 12: ಪೈಲಟ್ನ ನಿಯಂತ್ರಣ ತಪ್ಪಿದ್ದ ಹೆಲಿಕಾಪ್ಟರ್ ಬದರೀನಾಥ ಹೆಲಿಪ್ಯಾಡ್ನಿಂದ ಟೇಕ್ ಆಫ್ ಆಗಿದ್ದ ಕೆಲ ಹೊತ್ತಿನಲ್ಲೇ ಅಪಘಾತಕ್ಕೀಡಾಗಿದ್ದು ನಿಲುಗಡೆ ಮಾಡಿದ್ದ ವಾಹನಗಳಿಗೆ ಅಪ್ಪಳಿಸಿತ್ತು. ಜೀವಹಾನಿ ಆಗಿರಲಿಲ್ಲ.</p><p>ಮೇ 17: ಹೃಷಿಕೇಶದ ಎಐಐಎಂಸ್ ನಿಯೋಜಿಸಿದ್ದ ಏರ್ ಆಂಬುಲೆನ್ಸ್ ಕೇದಾರನಾಥ ಹೆಲಿಪ್ಯಾಡ್ ಬಳಿ ಅಪಘಾತಕ್ಕೆ ಈಡಾಗಿತ್ತು. ಹೆಲಿಕಾಪ್ಟರ್ ಹಿಂಬದಿಯ ಭಾಗ ನೆಲಕ್ಕೆ ತಗುಲಿದ್ದು ಅಪಘಾತಕ್ಕೆ ಕಾರಣವಾಗಿತ್ತು. ಆಗ ಹೆಲಿಕಾಪ್ಟರ್ನಲ್ಲಿ ಪೈಲಟ್ ವೈದ್ಯ ಮತ್ತು ಶುಶ್ರೂಷಕ ಇದ್ದು ಅದೃಷ್ಟವಶಾತ್ ಪಾರಾಗಿದ್ದರು.</p><p>ಜೂನ್ 7: ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಗುಪ್ತಕಾಶಿ–ಗೌರಿಕುಂಡ ಹೆದ್ದಾರಿಯಲ್ಲಿ ತಾಂತ್ರಿಕ ದೋಷದ ಕಾರಣ ತುರ್ತು ಭೂ ಸ್ಪರ್ಶ ಮಾಡಿತ್ತು. ಪೈಲಟ್ ಗಾಯಗೊಂಡಿದ್ದು ಐವರು ಯಾತ್ರಿಕರು ಪಾರಾಗಿದ್ದರು.</p><p><strong>ತಜ್ಞರ ಸಮಿತಿ ರಚನೆ</strong></p><p><strong>ಡೆಹ್ರಾಡೂನ್</strong>: ಚಾರ್ಧಾಮ್ ಯಾತ್ರೆಯ ಮಾರ್ಗದಲ್ಲಿ ಇತ್ತೀಚೆಗೆ ಆಗಾಗ್ಗೆ ಹೆಲಿಕಾಪ್ಟರ್ ಅಪಘಾತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ನಿರ್ವಹಣೆ ಮತ್ತು ಸುರಕ್ಷತಾ ಕ್ರಮ ಕುರಿತು ಹೊಸ ಮಾರ್ಗಸೂಚಿ ಹೊರಡಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ. ಈ ಕುರಿತು ಅಗತ್ಯ ಸಲಹೆ ನೀಡಲು ತಜ್ಞರ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.</p><p>ಎಲ್ಲ ಪ್ರಯಾಣಿಕರ ಸುರಕ್ಷತೆ ಕುರಿತು ಖಾತರಿಪಡಿಸಿಕೊಂಡ ನಂತರವೇ ಹೆಲಿಕಾಪ್ಟರ್ ಸೇವೆ ಆರಂಭವಾಗಲಿದೆ. ಯಾತ್ರಿಗಳ ಸುರಕ್ಷತೆಯನ್ನು ಕಡೆಗಣಿಸಲಾಗದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>