<p><strong>ತಿರುವನಂತಪುರ/ನವದೆಹಲಿ (ಪಿಟಿಐ): ‘ಛ</strong>ತ್ತೀಸಗಢದಲ್ಲಿ ಬಂಧಿತರಾಗಿರುವ ಕೇರಳದ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರು ಮಾನವ ಕಳ್ಳಸಾಗಣೆ ಮತ್ತು ಬಲವಂತದ ಮತಾಂತರದಲ್ಲಿ ಭಾಗಿಯಾಗಿಲ್ಲ’ ಎಂದು ಕೇರಳ ಬಿಜೆಪಿ ಮಂಗಳವಾರ ಪ್ರತಿಪಾದಿಸಿದೆ. </p>.<p>ಸನ್ಯಾಸಿನಿಯರಾದ ಪ್ರೀತಿ ಮೇರಿ, ವಂದನಾ ಫ್ರಾನ್ಸಿಸ್ ಅವರನ್ನು ಬಂಧಿಸಿರುವ ಕ್ರಮವನ್ನು ಸಮರ್ಥಿಸಿಕೊಂಡು ಛತ್ತೀಸಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ನೀಡಿದ ಹೇಳಿಕೆಗಳನ್ನು ಕೇರಳ ಬಿಜೆಪಿ ತಿರಸ್ಕರಿಸಿದೆ. </p>.<p>‘ಮಾನವ ಕಳ್ಳಸಾಗಣೆ ಸೇರಿದಂತೆ ಬಲವಂತದ ಮತಾಂತರ ಪ್ರಯತ್ನದಲ್ಲಿ ಸನ್ಯಾಸಿಗಳು ಭಾಗಿಯಾಗಿಲ್ಲ. ಅವರನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ಶ್ರಮಿಸಲಾಗುತ್ತಿದೆ’ ಎಂದು ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದರು. </p>.<p>ಬಜರಂಗ ದಳದ ವರ್ತನೆ ಖಂಡನೆ: ‘ಸನ್ಯಾಸಿನಿಯರ ಜತೆಗೆ ಆಕ್ಷೇಪಾರ್ಹವಾಗಿ ನಡೆದುಕೊಂಡ ಬಜರಂಗ ದಳದ ಸದಸ್ಯರ ವರ್ತನೆ ಖಂಡನೀಯ. ಅವರ ನ್ಯಾಯಸಮ್ಮತವಲ್ಲದ ವರ್ತನೆಯನ್ನು ಪಕ್ಷ ಸಹ ಖಂಡಿಸುತ್ತದೆ’ ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.</p>.<p>‘ಬಜರಂಗ ದಳ ಸ್ವತಂತ್ರ ಸಂಘಟನೆ ಮತ್ತು ಬಿಜೆಪಿ ಒಂದು ರಾಜಕೀಯ ಪಕ್ಷ. ಯಾರಾದರೂ ತಪ್ಪು ಮಾಡಿ, ನ್ಯಾಯದ ವಿರುದ್ಧ ಹೋದರೆ ಖಂಡಿತವಾಗಿಯೂ ಅವರಿಗೆ ಶಿಕ್ಷೆಯಾಗಲೇಬೇಕು’ ಎಂದು ಅವರು ಸ್ಪಷ್ಟಪಡಿಸಿದರು. </p>.<p>ಛತ್ತೀಸಗಢಕ್ಕೆ ನಿಯೋಗ: ಸನ್ಯಾಸಿನಿಯರಿಗೆ ಸಹಾಯ ಮಾಡಲು ಕೇರಳ ಬಿಜೆಪಿಯ ನಿಯೋಗ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ನ ಸಂಸದರ ನಿಯೋಗ ಪ್ರತ್ಯೇಕವಾಗಿ ಮಂಗಳವಾರ ಛತ್ತೀಸಗಢ ತಲುಪಿವೆ. </p>.<p>ಬಿಜೆಪಿಯ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ಅನೂಪ್ ಆ್ಯಂಟೊನಿ ಜೋಸೆಫ್ ನೇತೃತ್ವದ ತಂಡವು ಛತ್ತೀಸಗಢದ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರೂ ಆಗಿರುವ ವಿಜಯ್ ಶರ್ಮಾ ಅವರನ್ನು ಮಂಗಳವಾರ ಭೇಟಿ ಮಾಡಿ ಮಾತುಕತೆ ನಡಿಸಿತು.</p>.<p><strong>ಸನ್ಯಾಸಿಗಳನ್ನು ಭೇಟಿ ಮಾಡಿದ ಯುಡಿಎಫ್:</strong></p>.<p>ಬೆನ್ನಿ ಬೆಹನ್ನನ್, ಫ್ರಾನ್ಸಿಸ್ ಜಾರ್ಜ್ ಮತ್ತು ಎನ್.ಕೆ.ಪ್ರೇಮಚಂದ್ರನ್ ಅವರನ್ನು ಒಳಗೊಂಡ ಯುಡಿಎಫ್ ಸಂಸದರ ನಿಯೋಗವು ಛತ್ತೀಸಗಢದ ದುರ್ಗ್ನಲ್ಲಿನ ಕೇಂದ್ರ ಕಾರಾಗೃಹದಲ್ಲಿ ಸನ್ಯಾಸಿಯರನ್ನು ಭೇಟಿ ಮಾಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ/ನವದೆಹಲಿ (ಪಿಟಿಐ): ‘ಛ</strong>ತ್ತೀಸಗಢದಲ್ಲಿ ಬಂಧಿತರಾಗಿರುವ ಕೇರಳದ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರು ಮಾನವ ಕಳ್ಳಸಾಗಣೆ ಮತ್ತು ಬಲವಂತದ ಮತಾಂತರದಲ್ಲಿ ಭಾಗಿಯಾಗಿಲ್ಲ’ ಎಂದು ಕೇರಳ ಬಿಜೆಪಿ ಮಂಗಳವಾರ ಪ್ರತಿಪಾದಿಸಿದೆ. </p>.<p>ಸನ್ಯಾಸಿನಿಯರಾದ ಪ್ರೀತಿ ಮೇರಿ, ವಂದನಾ ಫ್ರಾನ್ಸಿಸ್ ಅವರನ್ನು ಬಂಧಿಸಿರುವ ಕ್ರಮವನ್ನು ಸಮರ್ಥಿಸಿಕೊಂಡು ಛತ್ತೀಸಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ನೀಡಿದ ಹೇಳಿಕೆಗಳನ್ನು ಕೇರಳ ಬಿಜೆಪಿ ತಿರಸ್ಕರಿಸಿದೆ. </p>.<p>‘ಮಾನವ ಕಳ್ಳಸಾಗಣೆ ಸೇರಿದಂತೆ ಬಲವಂತದ ಮತಾಂತರ ಪ್ರಯತ್ನದಲ್ಲಿ ಸನ್ಯಾಸಿಗಳು ಭಾಗಿಯಾಗಿಲ್ಲ. ಅವರನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ಶ್ರಮಿಸಲಾಗುತ್ತಿದೆ’ ಎಂದು ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದರು. </p>.<p>ಬಜರಂಗ ದಳದ ವರ್ತನೆ ಖಂಡನೆ: ‘ಸನ್ಯಾಸಿನಿಯರ ಜತೆಗೆ ಆಕ್ಷೇಪಾರ್ಹವಾಗಿ ನಡೆದುಕೊಂಡ ಬಜರಂಗ ದಳದ ಸದಸ್ಯರ ವರ್ತನೆ ಖಂಡನೀಯ. ಅವರ ನ್ಯಾಯಸಮ್ಮತವಲ್ಲದ ವರ್ತನೆಯನ್ನು ಪಕ್ಷ ಸಹ ಖಂಡಿಸುತ್ತದೆ’ ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.</p>.<p>‘ಬಜರಂಗ ದಳ ಸ್ವತಂತ್ರ ಸಂಘಟನೆ ಮತ್ತು ಬಿಜೆಪಿ ಒಂದು ರಾಜಕೀಯ ಪಕ್ಷ. ಯಾರಾದರೂ ತಪ್ಪು ಮಾಡಿ, ನ್ಯಾಯದ ವಿರುದ್ಧ ಹೋದರೆ ಖಂಡಿತವಾಗಿಯೂ ಅವರಿಗೆ ಶಿಕ್ಷೆಯಾಗಲೇಬೇಕು’ ಎಂದು ಅವರು ಸ್ಪಷ್ಟಪಡಿಸಿದರು. </p>.<p>ಛತ್ತೀಸಗಢಕ್ಕೆ ನಿಯೋಗ: ಸನ್ಯಾಸಿನಿಯರಿಗೆ ಸಹಾಯ ಮಾಡಲು ಕೇರಳ ಬಿಜೆಪಿಯ ನಿಯೋಗ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ನ ಸಂಸದರ ನಿಯೋಗ ಪ್ರತ್ಯೇಕವಾಗಿ ಮಂಗಳವಾರ ಛತ್ತೀಸಗಢ ತಲುಪಿವೆ. </p>.<p>ಬಿಜೆಪಿಯ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ಅನೂಪ್ ಆ್ಯಂಟೊನಿ ಜೋಸೆಫ್ ನೇತೃತ್ವದ ತಂಡವು ಛತ್ತೀಸಗಢದ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರೂ ಆಗಿರುವ ವಿಜಯ್ ಶರ್ಮಾ ಅವರನ್ನು ಮಂಗಳವಾರ ಭೇಟಿ ಮಾಡಿ ಮಾತುಕತೆ ನಡಿಸಿತು.</p>.<p><strong>ಸನ್ಯಾಸಿಗಳನ್ನು ಭೇಟಿ ಮಾಡಿದ ಯುಡಿಎಫ್:</strong></p>.<p>ಬೆನ್ನಿ ಬೆಹನ್ನನ್, ಫ್ರಾನ್ಸಿಸ್ ಜಾರ್ಜ್ ಮತ್ತು ಎನ್.ಕೆ.ಪ್ರೇಮಚಂದ್ರನ್ ಅವರನ್ನು ಒಳಗೊಂಡ ಯುಡಿಎಫ್ ಸಂಸದರ ನಿಯೋಗವು ಛತ್ತೀಸಗಢದ ದುರ್ಗ್ನಲ್ಲಿನ ಕೇಂದ್ರ ಕಾರಾಗೃಹದಲ್ಲಿ ಸನ್ಯಾಸಿಯರನ್ನು ಭೇಟಿ ಮಾಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>