ಈ ಮೊದಲು ಇದೇ 23ರಂದು ವಿಶೇಷ ಅಧಿವೇಶನ ಕರೆಯಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದನ್ನು ತಿರಸ್ಕರಿಸಿದ್ದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಜನವರಿ 8ರಂದು ಬಜೆಟ್ ಅಧಿವೇಶನ ನಿಗದಿಯಾಗಿರುವಾಗ ಈಗ ‘ವಿಶೇಷ ಅಧಿವೇಶನ ಕರೆಯುವ ತುರ್ತು ಏನಿದೆ?’ ಎಂದು ಮುಖ್ಯಮಂತ್ರಿ ಅವರಿಂದ ವಿವರಣೆ ಕೇಳಿದ್ದರು.