<p><strong>ತಿರುವನಂತಪುರ</strong>: ಆಟ್ಟುಕಾಲ್ ಪೊಂಗಾಲ ಹಬ್ಬದ ಆಚರಣೆಗೆ ನಗರಕ್ಕೆ ಬರುವ ಹಿಂದೂಗಳಿಗೆ ಮಸೀದಿಗಳು ಹಾಗೂ ತಮ್ಮ ಮನೆಗಳಲ್ಲಿ ಆತಿಥ್ಯ ನೀಡುವಂತೆ ಪಾಳಯಂ ಇಮಾಮ್ ವಿ.ಪಿ ಸುಹೈಬ್ ಮೌಲ್ವಿ ಅವರು ಮುಸ್ಲಿಮರಿಗೆ ಕರೆ ನೀಡಿದ್ದಾರೆ. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. </p>.<p>ಈ ವರ್ಷ ಮಾ.3ರಂದು ಆಟ್ಟುಕಾಲ್ ಪೊಂಗಾಲ ಹಬ್ಬ ಆಚರಿಸಲಾಗುತ್ತಿದೆ. ಅಂದು ಉತ್ಸವದಲ್ಲಿ ಭಾಗಿಯಾಗಲು ಲಕ್ಷಾಂತರ ಮಹಿಳೆಯರು ತಿರುವನಂತಪುರಕ್ಕೆ ಆಗಮಿಸುತ್ತಾರೆ. </p>.<p>‘ವಿಭಿನ್ನ ನಂಬಿಕೆಯೊಂದಿಗೆ ಆಟ್ಟುಕಾಲ್ ಪೊಂಗಾಲ ಅನ್ನು ಆಚರಿಸಲಾಗುತ್ತದೆ. ಮುಸ್ಲಿಮರು ಈ ಆಚರಣೆಯಲ್ಲಿ ಭಾಗವಹಿಸದೇ ಹೋದರೂ, ಅತಿಥಿಗಳಾಗಿ ಭೇಟಿ ನೀಡುವ ಸಾವಿರಾರು ಮಹಿಳೆಯರು ಹಾಗೂ ಮಕ್ಕಳಿಗೆ ಆತಿಥ್ಯ ನೀಡುವ ಅವಕಾಶವನ್ನು ಈ ಸಂದರ್ಭವು ಒದಗಿಸುತ್ತದೆ’ ಎಂದು ತಮ್ಮ ಭಾಷಣದಲ್ಲಿ ಮೌಲ್ವಿ ಅವರು ಶುಕ್ರವಾರ ಹೇಳಿದರು. </p>.<p>‘ಕಳೆದ ವರ್ಷದಂತೆ ಈ ಬಾರಿಯೂ ಪವಿತ್ರ ರಂಜಾನ್ ಸಮಯದಲ್ಲಿ ಆಟ್ಟುಕಾಲ್ ಪೊಂಗಾಲ ಆಚರಿಸಲಾಗುತ್ತಿದೆ. ಸಂತೋಷ, ಭ್ರಾತೃತ್ವ ಮತ್ತು ಪ್ರೀತಿಯನ್ನು ಸಾರುವ ರಂಜಾನ್ ಹಬ್ಬದ ಆಶಯವನ್ನು, ನಮ್ಮ ಸಹೋದರಿಯರು ಮತ್ತು ಮಕ್ಕಳೊಂದಿಗೆ ನಾವು ಹಂಚಿಕೊಳ್ಳಬೇಕು’ ಎಂದರು. </p>.<p>‘ನೀರು, ಆಹಾರ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಮಾಡಬೇಕು. ಮಸೀದಿ ಮತ್ತು ಮನೆಗಳನ್ನು ಅವರಿಗೆ ತೆರೆಯಬೇಕು. ನಮ್ಮ ಪ್ರೀತಿ ಮತ್ತು ಸಹೋದರತ್ವವನ್ನು ಬಹಿರಂಗವಾಗಿ ಪ್ರದರ್ಶಿಸುವ ಸಂದರ್ಭವಾಗಿದೆ. ಸಾಮರಸ್ಯದ ಸಂದೇಶವನ್ನು ಬಲಪಡಿಸಲು ಈ ಹಬ್ಬವು ಸೂಕ್ತ ಅವಕಾಶವಾಗಿದೆ’ ಎಂದು ಹೇಳಿದರು. </p>.<p class="title">‘ದಿ ಕೇರಳ ಸ್ಟೋರಿ 2–ಗೋಸ್ ಬಿಯಾಂಡ್’ ಸಿನಿಮಾ ವಿವಾದದ ಸಂದರ್ಭದಲ್ಲಿ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದ್ದು, ವಿಡಿಯೊ ನೋಡಿದ ಅನೇಕರು ‘ಇದು ನಿಜವಾದ ಕೇರಳದ ಕಥೆಯಾಗಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಆಟ್ಟುಕಾಲ್ ಪೊಂಗಾಲ ಹಬ್ಬದ ಆಚರಣೆಗೆ ನಗರಕ್ಕೆ ಬರುವ ಹಿಂದೂಗಳಿಗೆ ಮಸೀದಿಗಳು ಹಾಗೂ ತಮ್ಮ ಮನೆಗಳಲ್ಲಿ ಆತಿಥ್ಯ ನೀಡುವಂತೆ ಪಾಳಯಂ ಇಮಾಮ್ ವಿ.ಪಿ ಸುಹೈಬ್ ಮೌಲ್ವಿ ಅವರು ಮುಸ್ಲಿಮರಿಗೆ ಕರೆ ನೀಡಿದ್ದಾರೆ. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. </p>.<p>ಈ ವರ್ಷ ಮಾ.3ರಂದು ಆಟ್ಟುಕಾಲ್ ಪೊಂಗಾಲ ಹಬ್ಬ ಆಚರಿಸಲಾಗುತ್ತಿದೆ. ಅಂದು ಉತ್ಸವದಲ್ಲಿ ಭಾಗಿಯಾಗಲು ಲಕ್ಷಾಂತರ ಮಹಿಳೆಯರು ತಿರುವನಂತಪುರಕ್ಕೆ ಆಗಮಿಸುತ್ತಾರೆ. </p>.<p>‘ವಿಭಿನ್ನ ನಂಬಿಕೆಯೊಂದಿಗೆ ಆಟ್ಟುಕಾಲ್ ಪೊಂಗಾಲ ಅನ್ನು ಆಚರಿಸಲಾಗುತ್ತದೆ. ಮುಸ್ಲಿಮರು ಈ ಆಚರಣೆಯಲ್ಲಿ ಭಾಗವಹಿಸದೇ ಹೋದರೂ, ಅತಿಥಿಗಳಾಗಿ ಭೇಟಿ ನೀಡುವ ಸಾವಿರಾರು ಮಹಿಳೆಯರು ಹಾಗೂ ಮಕ್ಕಳಿಗೆ ಆತಿಥ್ಯ ನೀಡುವ ಅವಕಾಶವನ್ನು ಈ ಸಂದರ್ಭವು ಒದಗಿಸುತ್ತದೆ’ ಎಂದು ತಮ್ಮ ಭಾಷಣದಲ್ಲಿ ಮೌಲ್ವಿ ಅವರು ಶುಕ್ರವಾರ ಹೇಳಿದರು. </p>.<p>‘ಕಳೆದ ವರ್ಷದಂತೆ ಈ ಬಾರಿಯೂ ಪವಿತ್ರ ರಂಜಾನ್ ಸಮಯದಲ್ಲಿ ಆಟ್ಟುಕಾಲ್ ಪೊಂಗಾಲ ಆಚರಿಸಲಾಗುತ್ತಿದೆ. ಸಂತೋಷ, ಭ್ರಾತೃತ್ವ ಮತ್ತು ಪ್ರೀತಿಯನ್ನು ಸಾರುವ ರಂಜಾನ್ ಹಬ್ಬದ ಆಶಯವನ್ನು, ನಮ್ಮ ಸಹೋದರಿಯರು ಮತ್ತು ಮಕ್ಕಳೊಂದಿಗೆ ನಾವು ಹಂಚಿಕೊಳ್ಳಬೇಕು’ ಎಂದರು. </p>.<p>‘ನೀರು, ಆಹಾರ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಮಾಡಬೇಕು. ಮಸೀದಿ ಮತ್ತು ಮನೆಗಳನ್ನು ಅವರಿಗೆ ತೆರೆಯಬೇಕು. ನಮ್ಮ ಪ್ರೀತಿ ಮತ್ತು ಸಹೋದರತ್ವವನ್ನು ಬಹಿರಂಗವಾಗಿ ಪ್ರದರ್ಶಿಸುವ ಸಂದರ್ಭವಾಗಿದೆ. ಸಾಮರಸ್ಯದ ಸಂದೇಶವನ್ನು ಬಲಪಡಿಸಲು ಈ ಹಬ್ಬವು ಸೂಕ್ತ ಅವಕಾಶವಾಗಿದೆ’ ಎಂದು ಹೇಳಿದರು. </p>.<p class="title">‘ದಿ ಕೇರಳ ಸ್ಟೋರಿ 2–ಗೋಸ್ ಬಿಯಾಂಡ್’ ಸಿನಿಮಾ ವಿವಾದದ ಸಂದರ್ಭದಲ್ಲಿ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದ್ದು, ವಿಡಿಯೊ ನೋಡಿದ ಅನೇಕರು ‘ಇದು ನಿಜವಾದ ಕೇರಳದ ಕಥೆಯಾಗಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>