‘ಅದರಲ್ಲೂ ಆನೆಗಳ ಚಲನವಲನಗಳ ಬಗ್ಗೆ ಕರ್ನಾಟಕ ಅರಣ್ಯ ಇಲಾಖೆಯವರು ನಮ್ಮ ಜೊತೆ ಸರಿಯಾಗಿ ಸಮನ್ವಯ ಸಾಧಿಸುತ್ತಿಲ್ಲ’ ಎಂದು ಆರೋಪಿಸಿದ ಅವರು, ಇದನ್ನು ತಡೆಯುವ ನಿಟ್ಟಿನಲ್ಲಿ ಹೊಸ ಅಂತರರಾಜ್ಯ ಟಾಸ್ಕ್ ಫೋರ್ಸ್ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ಶನಿವಾರ ವಯನಾಡು ಜಿಲ್ಲೆಯ ಪಾಯಂಪಳ್ಳಿ ಬಳಿಯ ಮಾನಂತವಾಡಿಯಲ್ಲಿ ಆನೆ ದಾಳಿಗೆ 42 ವರ್ಷದ ಆಜಿ ಎನ್ನುವ ವ್ಯಕ್ತಿ ಮೃತಪಟ್ಟಿದ್ದರು. ಆ ಕಾಡಾನೆ ಕರ್ನಾಟಕ ಅರಣ್ಯದಿಂದ ಕೇರಳ ಅರಣ್ಯ ಪ್ರವೇಶಿಸಿತ್ತು ಎಂದು ಹೇಳಿದರು.
ಮೃತ ಆಜಿ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗುವುದು ಹಾಗೂ ಆತನ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುವುದು ಎಂದು ಶಶಿಧರನ್ ತಿಳಿಸಿದರು.
ಇನ್ನೊಂದೆಡೆ, ‘ವಯನಾಡು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಲು ಕೇರಳ ಅರಣ್ಯ ಇಲಾಖೆ ವಿಫಲವಾಗಿದೆ. ಇದರಿಂದ ಇಲ್ಲಿನ ಜನ ಭಯ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ’ ಎಂದು ಕೇರಳ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ವಿ. ಮುರಳಿಧರನ್ ಆರೋಪಿಸಿದ್ದಾರೆ.
ಆಜಿ ಸಾವಿನ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳೂ ಸಹ ಸಾರ್ವಜನಿಕರಿಗೆ ಆನೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.