<p><strong>ತಿರುವನಂತಪುರ</strong>: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಸ್ಯಾಮ್ ಕೋನ್ಸ್ಟಾಸ್ ಅವರ ಭುಜಕ್ಕೆ ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ ಅವರು ಡಿಕ್ಕಿ ಹೊಡೆದಿರುವ ಘಟನೆಯನ್ನೇ ಇಟ್ಟುಕೊಂಡು ಕೇರಳ ಪೊಲೀಸರು ರಸ್ತೆ ಸುರಕ್ಷತೆ ಬಗ್ಗೆ ಸಂದೇಶ ನೀಡಿದ್ದಾರೆ.</p><p>ಡಿಕ್ಕಿ ಹೊಡೆದಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಪೊಲೀಸರು, ‘ಕಿಂಗ್ ಆದ್ರೂ ಪರವಾಗಿಲ್ಲ, ಸಂಚಾರ ನಿಯಮವನ್ನು ಪಾಲಿಸಿ. ನೀವು ಸುರಕ್ಷಿತವಾಗಿರುವುದರ ಜೊತೆಗೆ ಇತರರನ್ನು ಸುರಕ್ಷಿತವಾಗಿರಿಸಿ’ ಎಂದು ಬರೆದುಕೊಂಡಿದ್ದಾರೆ.</p>.<p>ವಿಡಿಯೊದಲ್ಲಿ... ಸ್ಯಾಮ್ ಕೋನ್ಸ್ಟಾಸ್ ಅವರನ್ನು ಸರಿಯಾದ ಮಾರ್ಗದಲ್ಲಿ ಬರುತ್ತಿರುವ ವಾಹನ ಎಂದು ಚಿತ್ರಿಸಲಾಗಿದ್ದು, ವಿರಾಟ್ ಕೊಹ್ಲಿ ಅವರನ್ನು ತಪ್ಪು ಮಾರ್ಗದಲ್ಲಿ ಬರುತ್ತಿರುವ ವಾಹನ ಎಂದು ತೋರಿಸಲಾಗಿದೆ. ಕೋನ್ಸ್ಟಾಸ್ ಮತ್ತು ಕೊಹ್ಲಿ ಡಿಕ್ಕಿ ಆದ ತಕ್ಷಣ ‘ನಿಮ್ಮ ಲೇನ್ನಲ್ಲಿ ಇರಿ’ ಎಂಬ ಸಂದೇಶ ಕಾಣಿಸಿಕೊಂಡಿದೆ.</p><p>ಕೇರಳ ಪೊಲೀಸರ ಈ ಪೋಸ್ಟ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.</p><p><strong>ಘಟನೆ ಏನು?</strong></p><p>ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬರ್ನ್ನಲ್ಲಿ ಗುರುವಾರ ನಡೆದಿತ್ತು. ಟಾಸ್ ಗೆದ್ದ ಆತಿಥೇಯರು ಬ್ಯಾಟಿಂಗ್ ಆಯ್ದುಕೊಂಡಿದ್ದು, ಕೋನ್ಸ್ಟಾಸ್ ಹಾಗೂ ಅನುಭವಿ ಉಸ್ಮಾನ್ ಖ್ವಾಜಾ ಇನಿಂಗ್ಸ್ ಆರಂಭಿಸಿದ್ದರು.</p><p>ಇನಿಂಗ್ಸ್ನ 10ನೇ ಓವರ್ ವೇಳೆ ಪಿಚ್ನಲ್ಲಿ ಎದುರುಬದುರಾಗಿ ನಡೆದು ಹೋಗುತ್ತಿದ್ದಾಗ ಕೊಹ್ಲಿ ಮತ್ತು ಕೋನ್ಸ್ಟಾಸ್ ಅವರು ಭುಜಕ್ಕೆ ಭುಜ ತಾಗಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಖ್ವಾಜಾ ಹಾಗೂ ಫೀಲ್ಡ್ನಲ್ಲಿದ್ದ ಅಂಪೈರ್ಗಳು ಕೂಡಲೇ ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದರು.</p><p>ದಿನದಾಟದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಕೋನ್ಸ್ಟಾಸ್, ಕೊಹ್ಲಿ ಅವರು ತಮಗೆ ಗುದ್ದಿದ್ದು ಉದ್ದೇಶಪೂರ್ವಕವಾಗಿರಲಿಲ್ಲ ಎಂದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಸ್ಯಾಮ್ ಕೋನ್ಸ್ಟಾಸ್ ಅವರ ಭುಜಕ್ಕೆ ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ ಅವರು ಡಿಕ್ಕಿ ಹೊಡೆದಿರುವ ಘಟನೆಯನ್ನೇ ಇಟ್ಟುಕೊಂಡು ಕೇರಳ ಪೊಲೀಸರು ರಸ್ತೆ ಸುರಕ್ಷತೆ ಬಗ್ಗೆ ಸಂದೇಶ ನೀಡಿದ್ದಾರೆ.</p><p>ಡಿಕ್ಕಿ ಹೊಡೆದಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಪೊಲೀಸರು, ‘ಕಿಂಗ್ ಆದ್ರೂ ಪರವಾಗಿಲ್ಲ, ಸಂಚಾರ ನಿಯಮವನ್ನು ಪಾಲಿಸಿ. ನೀವು ಸುರಕ್ಷಿತವಾಗಿರುವುದರ ಜೊತೆಗೆ ಇತರರನ್ನು ಸುರಕ್ಷಿತವಾಗಿರಿಸಿ’ ಎಂದು ಬರೆದುಕೊಂಡಿದ್ದಾರೆ.</p>.<p>ವಿಡಿಯೊದಲ್ಲಿ... ಸ್ಯಾಮ್ ಕೋನ್ಸ್ಟಾಸ್ ಅವರನ್ನು ಸರಿಯಾದ ಮಾರ್ಗದಲ್ಲಿ ಬರುತ್ತಿರುವ ವಾಹನ ಎಂದು ಚಿತ್ರಿಸಲಾಗಿದ್ದು, ವಿರಾಟ್ ಕೊಹ್ಲಿ ಅವರನ್ನು ತಪ್ಪು ಮಾರ್ಗದಲ್ಲಿ ಬರುತ್ತಿರುವ ವಾಹನ ಎಂದು ತೋರಿಸಲಾಗಿದೆ. ಕೋನ್ಸ್ಟಾಸ್ ಮತ್ತು ಕೊಹ್ಲಿ ಡಿಕ್ಕಿ ಆದ ತಕ್ಷಣ ‘ನಿಮ್ಮ ಲೇನ್ನಲ್ಲಿ ಇರಿ’ ಎಂಬ ಸಂದೇಶ ಕಾಣಿಸಿಕೊಂಡಿದೆ.</p><p>ಕೇರಳ ಪೊಲೀಸರ ಈ ಪೋಸ್ಟ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.</p><p><strong>ಘಟನೆ ಏನು?</strong></p><p>ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬರ್ನ್ನಲ್ಲಿ ಗುರುವಾರ ನಡೆದಿತ್ತು. ಟಾಸ್ ಗೆದ್ದ ಆತಿಥೇಯರು ಬ್ಯಾಟಿಂಗ್ ಆಯ್ದುಕೊಂಡಿದ್ದು, ಕೋನ್ಸ್ಟಾಸ್ ಹಾಗೂ ಅನುಭವಿ ಉಸ್ಮಾನ್ ಖ್ವಾಜಾ ಇನಿಂಗ್ಸ್ ಆರಂಭಿಸಿದ್ದರು.</p><p>ಇನಿಂಗ್ಸ್ನ 10ನೇ ಓವರ್ ವೇಳೆ ಪಿಚ್ನಲ್ಲಿ ಎದುರುಬದುರಾಗಿ ನಡೆದು ಹೋಗುತ್ತಿದ್ದಾಗ ಕೊಹ್ಲಿ ಮತ್ತು ಕೋನ್ಸ್ಟಾಸ್ ಅವರು ಭುಜಕ್ಕೆ ಭುಜ ತಾಗಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಖ್ವಾಜಾ ಹಾಗೂ ಫೀಲ್ಡ್ನಲ್ಲಿದ್ದ ಅಂಪೈರ್ಗಳು ಕೂಡಲೇ ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದರು.</p><p>ದಿನದಾಟದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಕೋನ್ಸ್ಟಾಸ್, ಕೊಹ್ಲಿ ಅವರು ತಮಗೆ ಗುದ್ದಿದ್ದು ಉದ್ದೇಶಪೂರ್ವಕವಾಗಿರಲಿಲ್ಲ ಎಂದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>