ಇತ್ತೀಚೆಗೆ ಮೊದಲ ಸಭೆ ನಡೆಸಿದ್ದ ಕೋವಿಂದ ನೇತೃತ್ವದ ಉನ್ನತ ಸಮಿತಿಯು, ಈ ವಿಚಾರವಾಗಿ ಎಲ್ಲ ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಕೇಳಲು ನಿರ್ಧರಿಸಿತ್ತು. ಅದರಂತೆ, ಅಭಿಪ್ರಾಯಗಳನ್ನು ತಿಳಿಸುವಂತೆ ಅವುಗಳಿಗೆ ಪತ್ರವನ್ನು ಬರೆದು, ಎಲ್ಲರಿಗೂ ಒಪ್ಪಿಗೆಯಾಗುವ ದಿನದಂದು ಸಂವಾದ ನಡೆಸಲು ಇಚ್ಛಿಸಿದ್ದಾಗಿ ತಿಳಿಸಿದೆ ಎಂದು ಮೂಲಗಳು ಹೇಳಿವೆ.