ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಮಿತಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ರಚಿಸಿದ್ದಾರೆ.
ಸಮಿತಿಗೆ ಹಿರಿಯ ಮುಖಂಡ ಪಿ. ಚಿದಂಬರಂ ಅಧ್ಯಕ್ಷರಾಗಿದ್ದಾರೆ. ಟಿ.ಎಸ್. ಸಿಂಗ್ ದೇವ್ ಸಂಚಾಲಕರಾಗಿದ್ದು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ ಸೇರಿ 14 ಮುಖಂಡರು ಸದಸ್ಯರಾಗಿದ್ದಾರೆ.