ಕಡಪ (ಆಂಧ್ರ ಪ್ರದೇಶ): ಪೂತಲಪಟ್ಟು ಶಾಸಕ ಎಂ.ಎಸ್. ಬಾಬು ಅವರು ಆಡಳಿತಾರೂಢ ವೈಎಸ್ಆರ್ಸಿಪಿ ತೊರೆದು ಶನಿವಾರ ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ಎಪಿಸಿಸಿ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಅವರ ಸಮ್ಮುಖದಲ್ಲಿ ಬಾಬು ಅವರು ಪಕ್ಷಕ್ಕೆ ಸೇರಿದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಾಬು ಅವರಿಗೆ ವೈಎಸ್ಆರ್ಸಿಪಿ ಟಿಕೆಟ್ ನಿರಾಕರಿಸಿತ್ತು.
ಚುನಾವಣೆಗೂ ಮುನ್ನ ಬಾಬು ಅವರು ಕಾಂಗ್ರೆಸ್ಗೆ ಸೇರಿರುವುದರಿಂದ ವೈಎಸ್ಆರ್ಸಿಪಿಗೆ ಹಿನ್ನಡೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಶರ್ಮಿಳಾ ಅವರು ಬಾಬು ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದರು ಎಂದೂ ಹೇಳಿವೆ.