ರಷ್ಯಾ ಮತ್ತು ಚೀನಾದಲ್ಲಿರುವ ಆಡಳಿತದ ಮಾದರಿಯನ್ನು ದೇಶದಲ್ಲಿಯೂ ಅನುಸರಿಸಲು ಬಿಜೆಪಿ ಬಯಸುತ್ತಿದೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅವರಂತೆ ಇಲ್ಲಿಯೂ ಯಾವುದೇ ವಿರೋಧಪಕ್ಷಗಳಿಲ್ಲದೆ ಆಡಳಿತ ನಡೆಸಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ. ಸಂವಿಧಾನದ ರಕ್ಷಣೆಗಾಗಿಯೇ ‘ಇಂಡಿಯಾ’ ಒಕ್ಕೂಟವು ರೂಪುಗೊಂಡಿದ್ದು, ಸಂವಿಧಾನವನ್ನು ಸಮಾಧಿ ಮಾಡಲು ನಾವು ಬಿಡುವುದಿಲ್ಲ. ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾವು ನಿರಂತರ ಅತಿಕ್ರಮಣ ಮಾಡುತ್ತಿದ್ದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಏಕೆ ಮೌನವಾಗಿದೆ?