<p><strong>ಪ್ರಯಾಗ್ರಾಜ್: </strong>ಮಹಾಕುಂಭ ಮೇಳ ನಡೆಯುತ್ತಿರುವ ಪ್ರದೇಶದಲ್ಲಿ ಅಸಂಖ್ಯ ಭಕ್ತರು ಜಮಾಯಿಸಿದ್ದು, ಮಾಘಿ ಹುಣ್ಣಿಮೆಯ ಪವಿತ್ರ ಸ್ನಾನವು ಬುಧವಾರ (ಇಂದು) ಮುಂಜಾನೆಯೇ ಆರಂಭವಾಗಿದೆ.</p><p>ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಈಗಾಗಲೇ ಲಕ್ಷಾಂತರ ಮಂದಿ ಪುಣ್ಯಸ್ನಾನ ಮಾಡಿದ್ದಾರೆ. </p><p>ಮಾಘಿ ಹುಣ್ಣಿಮೆಯ ಪವಿತ್ರ ಸ್ನಾನದೊಂದಿಗೆ 'ಕಲ್ಪವಾಸ್' ಪೂರ್ಣಗೊಳ್ಳಲಿದ್ದು, ಲಕ್ಷಾಂತರ ಕಲ್ಪವಾಸಿಗಳು ಇಂದು ಮಹಾಕುಂಭ ನಗರದಿಂದ ಹೊರಡಲಿದ್ದಾರೆ. ಹೀಗಾಗಿ, ಎಲ್ಲರೂ ಸಂಚಾರ ನಿಯಮಗಳನ್ನು ಪಾಲಿಸಬೇಕು ಹಾಗೂ ಅಧಿಕೃತ ಪಾರ್ಕಿಂಗ್ ಸ್ಥಳಗಳನ್ನಷ್ಟೇ ಬಳಸಬೇಕು ಎಂದು ಆಡಳಿತವು ಮನವಿ ಮಾಡಿದೆ.</p><p>ಪುಣ್ಯ ನದಿಯ ತಟದಲ್ಲಿ ನಿರ್ದಿಷ್ಟ ಸಮಯದವರೆಗೆ ನೆಲಸಿ, ಉಪವಾಸದ ಮೂಲಕ ಆತ್ಮದ ಅವಲೋಕನ ಹಾಗೂ ಆಧ್ಯಾತ್ಮಿಕ ಶುದ್ಧೀಕರಣ ಮಾಡಿಕೊಳ್ಳುವ ಪ್ರಕ್ರಿಯೆಗೆ 'ಕಲ್ಪವಾಸ್' ಎನ್ನಲಾಗುತ್ತದೆ. ಮಹಾಕುಂಭಮೇಳದ ಅವಧಿಯಲ್ಲಿ ನಡೆಸುವ 'ಕಲ್ಪವಾಸ್' ಅನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ.</p><p>ಪುಣ್ಯಸ್ನಾನಕ್ಕೆ ಅನುಕೂಲವಾಗುವಂತೆ, ವಾಹನಗಳ ದಟ್ಟಣೆ ನಿಯಂತ್ರಿಸಲು ಮಹಾಕುಂಭ ನಗರ ವ್ಯಾಪ್ತಿಯನ್ನು 'ವಾಹನ ಮುಕ್ತ ವಲಯ'ವನ್ನಾಗಿ ಮಾಡಲಾಗಿದೆ.</p>.ಪ್ರಯಾಗ್ರಾಜ್ | ಮಾಘಿ ಹುಣ್ಣಿಮೆ: ಮಹಾಕುಂಭ ನಗರ ವ್ಯಾಪ್ತಿ ವಾಹನ ಮುಕ್ತ ವಲಯ.ಪ್ರಯಾಗ್ರಾಜ್ ಮಹಾ ಕುಂಭಮೇಳ: ದೇಶದ ಏಕತೆಯ ‘ಮಹಾಯಜ್ಞ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರಯಾಗ್ರಾಜ್: </strong>ಮಹಾಕುಂಭ ಮೇಳ ನಡೆಯುತ್ತಿರುವ ಪ್ರದೇಶದಲ್ಲಿ ಅಸಂಖ್ಯ ಭಕ್ತರು ಜಮಾಯಿಸಿದ್ದು, ಮಾಘಿ ಹುಣ್ಣಿಮೆಯ ಪವಿತ್ರ ಸ್ನಾನವು ಬುಧವಾರ (ಇಂದು) ಮುಂಜಾನೆಯೇ ಆರಂಭವಾಗಿದೆ.</p><p>ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಈಗಾಗಲೇ ಲಕ್ಷಾಂತರ ಮಂದಿ ಪುಣ್ಯಸ್ನಾನ ಮಾಡಿದ್ದಾರೆ. </p><p>ಮಾಘಿ ಹುಣ್ಣಿಮೆಯ ಪವಿತ್ರ ಸ್ನಾನದೊಂದಿಗೆ 'ಕಲ್ಪವಾಸ್' ಪೂರ್ಣಗೊಳ್ಳಲಿದ್ದು, ಲಕ್ಷಾಂತರ ಕಲ್ಪವಾಸಿಗಳು ಇಂದು ಮಹಾಕುಂಭ ನಗರದಿಂದ ಹೊರಡಲಿದ್ದಾರೆ. ಹೀಗಾಗಿ, ಎಲ್ಲರೂ ಸಂಚಾರ ನಿಯಮಗಳನ್ನು ಪಾಲಿಸಬೇಕು ಹಾಗೂ ಅಧಿಕೃತ ಪಾರ್ಕಿಂಗ್ ಸ್ಥಳಗಳನ್ನಷ್ಟೇ ಬಳಸಬೇಕು ಎಂದು ಆಡಳಿತವು ಮನವಿ ಮಾಡಿದೆ.</p><p>ಪುಣ್ಯ ನದಿಯ ತಟದಲ್ಲಿ ನಿರ್ದಿಷ್ಟ ಸಮಯದವರೆಗೆ ನೆಲಸಿ, ಉಪವಾಸದ ಮೂಲಕ ಆತ್ಮದ ಅವಲೋಕನ ಹಾಗೂ ಆಧ್ಯಾತ್ಮಿಕ ಶುದ್ಧೀಕರಣ ಮಾಡಿಕೊಳ್ಳುವ ಪ್ರಕ್ರಿಯೆಗೆ 'ಕಲ್ಪವಾಸ್' ಎನ್ನಲಾಗುತ್ತದೆ. ಮಹಾಕುಂಭಮೇಳದ ಅವಧಿಯಲ್ಲಿ ನಡೆಸುವ 'ಕಲ್ಪವಾಸ್' ಅನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ.</p><p>ಪುಣ್ಯಸ್ನಾನಕ್ಕೆ ಅನುಕೂಲವಾಗುವಂತೆ, ವಾಹನಗಳ ದಟ್ಟಣೆ ನಿಯಂತ್ರಿಸಲು ಮಹಾಕುಂಭ ನಗರ ವ್ಯಾಪ್ತಿಯನ್ನು 'ವಾಹನ ಮುಕ್ತ ವಲಯ'ವನ್ನಾಗಿ ಮಾಡಲಾಗಿದೆ.</p>.ಪ್ರಯಾಗ್ರಾಜ್ | ಮಾಘಿ ಹುಣ್ಣಿಮೆ: ಮಹಾಕುಂಭ ನಗರ ವ್ಯಾಪ್ತಿ ವಾಹನ ಮುಕ್ತ ವಲಯ.ಪ್ರಯಾಗ್ರಾಜ್ ಮಹಾ ಕುಂಭಮೇಳ: ದೇಶದ ಏಕತೆಯ ‘ಮಹಾಯಜ್ಞ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>